ಕಾಮೆಂಟಿಗರ ಮೇಲೊಂದು ಕಾಮೆಂಟ್

* ಸಂಪಾದಕ
ಕಾಮೆಂಟಿಗ್ಗರಿಗೆ ಯಾವುದೇ ಕಷ್ಟಕರವಾದ ನಿಯಮಗಳನ್ನು ನಮ್ಮಲ್ಲಿ ಹೇರಿಲ್ಲವಾದರೂ, ಕೆಲವು ಸಾರ್ವಜನಿಕ ಆರೋಗ್ಯ ರಕ್ಷಣಾ ದೃಷ್ಟಿಯಿಂದ ಪಾಲಿಸಲೇಬೇಕಾದ ನಿಯಮಗಳನ್ನು ಪಾಲಿಸಲೇಬೇಕು. ಪ್ರತಿಕ್ರಿಕೆಯೆಗಳು ವಿಮರ್ಶಾತ್ಮಕವಾಗಿದ್ದರೂ ಸೃಜನಶೀಲವಾಗಿರಲಿ. ವ್ಯಕ್ತಿಕೇಂದ್ರಿತವಾಗಿದ್ದರೂ ಗೌರವಯುತವಾಗಿರಲಿ. ಕಾಮೆಂಟ್ ಓದುವ ಸಹೃದಯರಿಗೂ, ಕಾಮೆಂಟ್ ಎಡಿಟ್ ಮಾಡುವ ನಮ್ಮ ತಂತ್ರಜ್ಞರಿಗೂ ಕಿರಿಕಿರಿಯಾಗಬಾರದು ಎಂಬುದನ್ನು ಎಲ್ಲರೂ ಮನಗಂಡರೆ ಸಾರ್ಥಕ.
ಕಾಮೆಂಟಿಗರಲ್ಲಿ ಹಲವರು ಖ್ಯಾತರು, ಕುಖ್ಯಾತರಾಗಿ ಹೋಗಿದ್ದಾರೆ. ಯಾರು ಯಾವ ಕ್ಯಾಟೆಗರಿ ಅಂತ ಸೂಚಿಸುವ ಕೆಲಸಕ್ಕಿಳಿಯದೆ, ಕೆಲವರ ಹೆಸರನ್ನು ಧೈರ್ಯವಾಗಿ ಹೆಸರಿಸಬಹುದು. ನಮ್ಮ ಕಾಮೆಂಟಿಗರಲ್ಲಿ ನಾಗರಾಜ ರಾವ್, DM Sagar, Paaaaaaaaaaaaaaartha, ಹಳ್ಳಿ ಹೈದ, ತಿಮ್ಮ, ಅಮೆರಿಕನ್ನಡಿಗ ಮುಂತಾದವರು ನಾನಾ ಕಾರಣಕ್ಕೆ ಪ್ರಸಿದ್ಧಿ ಪಡೆದಿದ್ದಾರೆ. ಸಮಾಜದ ಎಲ್ಲಾ ಬಗೆಯ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ನಮ್ಮ ಕಾರ್ಯಕ್ಕೆ ಸ್ಫೂರ್ತಿ ನೀಡುವ, ನಮ್ಮನ್ನು ಬೈದು ಬುದ್ಧಿ ಹೇಳುವ ಎಲ್ಲಾ ಸಹೃದಯಕಾಮೆಂಟಿಗರಿಗೆ ನಮ್ಮ ಅನಂತಾನಂತ ವಂದನೆಗಳು.
ಸೂಚನೆಗಳು
ದಯವಿಟ್ಟು ಇನ್ಮುಂದೆ ಕಾಮೆಂಟ್ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಮನದಲ್ಲಿಟ್ಟುಕೊಂಡು, ಮನಸೋ ಇಚ್ಛೆ ಕಾಮೆಂಟ್ ಮಾಡಿ. ಎಷ್ಟಾದರೂ ಅದು ನಿಮಗೆ ಮೀಸಲಾದ ಜಾಗ. ಮೀಸಲಾತಿ ಹಕ್ಕು ಚಲಾಯಿಸಿ...
* URL, ವೆಬ್ ತಾಣ ವಿಳಾಸಗಳನ್ನು ಹಾಕಬೇಡಿ. ಉದಾ: http://www.xyz.com or www.rgy.com ಹೂಂ ಹೇಗೆ ಹಾಕಿದರೂ ಕಾಮೆಂಟ್ ಸ್ವೀಕರಿಸುವುದಿಲ್ಲ. ಆಮೇಲೆ ಸಿಟ್ಟು ಮಾಡಿಕೊಂಡು ಅದನ್ನೇ ಇಪ್ಪತ್ತು ಸಾರಿ ಹಾಕಬೇಡಿ.
* ದಯವಿಟ್ಟು ಒಂದು ಭಾಷೆಯನ್ನು ಬಳಸಿ ಅಥವಾ ಹಲವು ಭಾಷೆಗಳನ್ನು ಸರಿಯಾಗಿ ಬಳಸಿ.
ಉದಾ: ನಾನು ಕನ್ನಡಿಗ, I m kannadiga, i m ಕನ್ನಡಿಗ
ಹೀಗೆ ಬೇಡ: ನಾನು kannadiga ಬಟ್ ಲಿವಿಂಗ್ ಇನ್ ಕೇರಳ; but avanu keraladalli vasamaadta iddane avanu kannadiga alla
* ವ್ಯಾಕರಣ ದೋಷ, ಪದ ಬಳಕೆ ಬಗ್ಗೆ ಚಿಂತಿಸಬೇಡಿ. ಭಾಷೆ ಸ್ವಚ್ಛವಾಗಿದ್ದರೆ ಸಾಕು.
* ಗೂಗಲ್ ಕನ್ನಡ ಟೂಲ್ ಬಳಸಿ ಕನ್ನಡದ್ದೇ ಕಾಮೆಂಟ್ ಮಾಡಬಹುದು. ಅದನ್ನು ಸಮರ್ಪಕವಾಗಿ ಬಳಸಿ.
* ತೀರಾ ದೊಡ್ಡದಾದ ಕಾಮೆಂಟ್ ಹಾಕುವ ಮನಸ್ಸಾದರೆ ದಯವಿಟ್ಟು ಮೇಲ್ ಮಾಡಿ. ಅದನ್ನು ಪರಿಶೀಲಿಸಿ ಪ್ರಕಟಿಸಲಾಗುವುದು.
* ಉದ್ದುದ್ದ ಕಾಮೆಂಟ್ ಓದಲು ಕಷ್ಟ . ಅಲ್ಲದೆ ಕಾಮೆಂಟ್ ಬಾಕ್ಸ್ ಗೆ ಪರಿಮಿತಿ ಕೂಡ ಇರುತ್ತದೆ.
* ಗೌಡರು, ಸ್ವಾಮೀಜಿಗಳು, ಯಡಿಯೂರಪ್ಪ, ರಾಜ್ ಕುಟುಂಬ, ಮೂರ್ತಿಗಳು ಎಲ್ಲ ನಮ್ಮವರೇ. ಯಾರದೇ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಸಭ್ಯವಾದ ರೀತಿಯಲ್ಲಿ ಎಚ್ಚರಿಕೆ, ಸಲಹೆ ಸೂಚನೆ ನೀಡುವುದು ನಿಮ್ಮೆಲ್ಲರ ಹೊಣೆಯಾಗಿದೆ ಎಂಬುದನ್ನು ಮರೆಯಬೇಡಿ.
* ಆರೋಗ್ಯಕರ ಚರ್ಚೆ ಬೆಳೆಸಿ, ಕೆಲ ಕಾಮೆಂಟಿಗರಿಗೆ ಹೆದರಿ, ತಮ್ಮ ಹೆಸರಿನಲ್ಲಿ ಕಾಮೆಂಟ್ ಮಾಡುವುದಿರಲಿ, ಬೇನಾಮಿ ಹೆಸರಿನಲ್ಲೂ ಅಭಿಪ್ರಾಯ ಮಂಡಿಸಲು ಹೆದರಿದ್ದೇವೆ ಎಂದು ಅನೇಕರು ನೊಂದು ಪತ್ರ ಬರೆದಿದ್ದಾರೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications