ನಮ್ಮ ಸೀಮೆ ಹಳ್ಳಿ ಬಾಡು, ಊಟದ ಬಗ್ಗೆ ಒಂದು ನೀಟಾದ ವಿವರಣೆ
ಇದು ಮಾಂಸಾಹಾರ ಕುರಿತ ಚರ್ಚೆಯಲ್ಲ. ಹಾಗೆಯೆ ಸಸ್ಯಾಹಾರ ಮತ್ತು ಮಾಂಸಾಹಾರಗಳ ಪರ, ವಿರೋಧ ವಾದವೂ ಅಲ್ಲ. ಸಾಗಿ ಬಂದ 'ಹಳ್ಳಿ ಆಹಾರ' ಪದ್ಧತಿಗಳಲ್ಲಿ ಒಂದರ ಮೆಲುಕು ಮಾತ್ರ. ತಿನ್ನಲಿ, ಬಿಡಲಿ ನಾವು ಈ ಎರಡೂ ಆಹಾರ ಪದ್ಧತಿಗಳ ನಡುವೆ ಬದುಕುತ್ತಿರುವುದರಿಂದ ಅವುಗಳ ವಿಚಾರ ಇದ್ದೇ ಇರುತ್ತದೆ. ಹಾಗಾಗಿಯಷ್ಟೇ ಈ ಲೇಖನ.
'ನೋಟ ಮತ್ತು ಊಟ ಅವರವರ ಇಚ್ಛೆ' ಎಂಬುದು ಎಲ್ಲ ಕಾಲದ ಮಾತು. ನೋಡುವ ಕಣ್ಣಿರುವವರೆಗೆ, ನಾಲಗೆಯಲ್ಲಿ ರುಚಿಗ್ರಂಥಿಗಳಿರುವವರೆಗೆ ಇದು ನಿಜವೂ ಹೌದು. ಊಟ-ನೋಟಗಳನ್ನು ಬೇಡ ಅನ್ನುವವರಿಗಷ್ಟೇ ಬೇಡ. ಆಹಾರದ ವಿಚಾರದಲ್ಲಿ ಅದು ಸಸ್ಯಾಹಾರವೋ, ಮಾಂಸಾಹಾರವೋ ಅವರವರ ಇಷ್ಟದ್ದು.
ಕೆಲವರಿಗೆ ಕೆಲವು ತರಕಾರಿಗಳು ಇಷ್ಟವಿಲ್ಲದಿರುವಂತೆ, ಮಾಂಸಗಳಲ್ಲಿ ಕೆಲವರಿಗೆ ಕೆಲವು ಇಷ್ಟವಿರದು. ಇದನ್ನು ಒಟ್ಟಾರೆಯಾಗಿ ಒಪ್ಪಲೂ ಬೇಕಿಲ್ಲ, ತಿರಸ್ಕರಿಸಲೂ ಬೇಕಿಲ್ಲ.
ಸಸ್ಯಗಳ ಹೆಸರು ಅವುಗಳ ಹೂ, ಕಾಯಿಗಳಿರುವಂತೆ ಅಂದರೆ ತರಕಾರಿಗಿರುವಂತೆ ಮಾಂಸಗಳಿಗೆ ಆ ಪ್ರಾಣಿಯ ಹೆಸರಿರುವುದೆಂದು ಹೇಳಬೇಕಿಲ್ಲ. ಬೆಂಡೆಕಾಯಿ ಹುಳಿ, ಹೀರೆಕಾಯಿಹುಳಿ, ಬದನೆಕಾಯಿಬಜ್ಜಿ, ಆಲೂಗೆಡ್ಡೆ ಮಸಾಲೆ ಗೊಜ್ಜು, ಹುಳಿಸೊಪ್ಪು, ಪಲ್ಯ, ಹಾಗಲಕಾಯಿ ಗೊಜ್ಜು, ವಿವಿಧ ತರಕಾರಿಗಳನ್ನು ಹಾಕಿ ಮಾಡಿದ ಕೂಟು ಮುಂತಾದವು.
ಹೀಗೆಯೇ ಮಾಂಸವನ್ನು ವಿಂಗಡಿಸುವ, ಅದರಿಂದ ತಯಾರಿಸುವ ಅಡುಗೆಗಳಿಗೆ ಅವಕ್ಕೆ ತಕ್ಕಂತೆ ಹೆಸರುಗಳಿರುತ್ತವೆ. ಆದರೆ ಮಾಂಸದಡುಗೆಯಲ್ಲಿ ಬಗಬಗೆ ಮಾಂಸಗಳನ್ನು ಕೂಡಿಸಿ ಮಾಡಿದ 'ಕೂಟು' ಎಂಬುದಿಲ್ಲ.

ಮೆನು ಕಾರ್ಡ್ ಅಲ್ಲ
ಹಳ್ಳಿಮನೆಗಳಲ್ಲಿ ಹೋಟೆಲುಗಳ ಮೆನು ಕಾರ್ಡಿನಲ್ಲಿರುವಂತೆ ಚಿಕನ್ ಚಿಲ್ಲಿ, ಮಟನ್ ಚಿಲ್ಲಿ, ಚಿಕನ್ ತಂದೂರಿ, ಕಬಾಬ್, ಮಂಚೂರಿ, ಬಿರಿಯಾನಿ, ಫ್ರೈ, ಡ್ರೈ, ರೋಲ್, ಗ್ರೇವಿ, ಎಗ್ ಬುರ್ಜಿ, ಬೋನ್ ಲೆಸ್, ಮಸಾಲ, ಲೆಗ್ ಪೀಸ್, ಲಾಲಿಪಪ್, ಲಿವರ ಫ್ರೈ ಇತ್ಯಾದಿ ಇರುವುದಿಲ್ಲ.

ಜೀರ್ಣಕ್ಕೆ ಮನೆಗಳಲ್ಲಿ ಹೀಗೆ ಮಾಡ್ತಾರೆ
ಅಲ್ಲದೆ ಬಜಾರಿನ ಒಂದೇ ರೀತಿಯ ಸಿದ್ಧ ಮಸಾಲೆಪುಡಿಗಳ ಬಳಕೆಯೂ ಇರದು. ಮನೆಮನೆಯ ಅಡುಗೆಯ ರುಚಿಯೂ ಭಿನ್ನವಾಗಿರುತ್ತದೆ. ಹೋಟೆಲಿನಲ್ಲಿ ಜೀರ್ಣಕ್ಕೆ ಸೂಪು ಇದ್ದಂತೆ ಮನೆಯಲ್ಲಿ ಹುಣಿಸೆಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸು, ಜೀರಿಗೆ, ಉಪ್ಪು, ಒಣಮೆಣಸಿನಕಾಯಿ ಹಾಕಿ ಮಾಡಿದ ಸಾರು(ರಸಂ) ತಯಾರಿಸುತ್ತಾರೆ. ಇದು ಜೀರ್ಣಕ್ಕೂ ಆರೋಗ್ಯಕ್ಕೂ ಒಳ್ಳೆಯದು. ಡರ್ ಡರ್ ಎಂದು ಎರಡು ತೇಗು ಬಂದಿತೋ 'ಕಲಾಸ್.' 'ಭುಕ್ತಾಯಾಸ' ಮಾಯ.

ಮಾಂಸ ತೂಕ ಮಾಡಲ್ಲ
ಇನ್ನು ನಮ್ಮ ದೇಸಿಬಾಡಿನ ವಿಚಾರ. ಕೌಸು, ಕವುಸು, ಬಾಡು, ಮಾಂಸ, ಮಾವ್ಸ, ತುಕಡ, ತುಣುಕುಗುಳು, ಕೆಂಪುತರಕಾರಿ, ಸೀಸಿ(ಬಾಲಭಾಷೆ). ಇವು ಸಮಾನ ಪದಗಳು. ಭಾಗ ಹಾಕುವ ಮಾಂಸದಲ್ಲಿ 'ಉಡ್ಡಿಬಾಡು.' ವಿಶೇಷವಾದುದು ಸಂತೆಯಲ್ಲಿ ತರಕಾರಿಗಳನ್ನು ಗುಡ್ಡೆ ಇಟ್ಟಂತೆ. ಇದನ್ನು ತೂಕ ಮಾಡುವುದಿಲ್ಲ. (ತಕರಾರು ಬೇಡವೆಂದು ಇತ್ತೀಚೆಗೆ ಕೆಲವರು ತೂಕ ಹಾಕುತ್ತಾರೆ.)

ಮಾಂಸದ ಚೀಟಿ
ಮನೆಪಟ್ಟಿ ತಯಾರಿಸಿ ಅದರಂತೆ ಅವವರವರ ಮನೆ ಹೆಸರಿನಲ್ಲಿ ಉಡ್ಡೆ ಹಾಕುವರು. ಅವರು ಅಲ್ಲಿದ್ದು ತಮ್ಮ ಪಾಲನ್ನು ಪಡೆದುಕೊಳ್ಳುವರು. ಗುಡ್ಡೆಯಲ್ಲಿ ಮಾಂಸವಾದ ಪ್ರಾಣಿಯ ಎಲ್ಲಾ ಭಾಗಗಳೂ ಇರುತ್ತವೆ. ಈ ಮಾಂಸಕ್ಕಾಗಿ 'ಚೀಟಿ'ಯನ್ನೂ ಹಾಕಿರುತ್ತಾರೆ. ಚೀಟಿದಾರರಿಗೆ ಮಾತ್ರ ಇದು.

ಪ್ರೇಯಸಿಗೆ ಉಚಿತ
ಮುಖ್ಯರು ಅನಿಸಿಕೊಂಡವರ ಮನೆಗಳಿಗೇ ಅವರಿಗೆ ಸೇರಬೇಕಾದ ಉಡ್ಡೆಗಳನ್ನು ಕಳುಹಿಸುವುದುಂಟು. ಇಂಥವರಲ್ಲಿ ಕೆಲವರಿಗೆ ಉಚಿತವಾಗಿಯೂ ಕೊಡುವರು. ನೇಸ್ತ(ಪ್ರೇಯಸಿ)ಇದ್ದರೆ ಅವಳಿಗೂ ಉಚಿತವಾಗಿ ಕಳುಹಿಸುವರು. ಅದರಲ್ಲಿ ಅವಳಿಗೆ ಪ್ರಿಯವಾದ ಭಾಗ ಹೆಚ್ಚಿಗಿರುತ್ತದೆ. ಅರ್ಧ ಉಡ್ಡೆ, ಒಂದುಡ್ಡೆ, ಎಲ್ಡುಡ್ಡೆ ಹೀಗೆ ಲೆಕ್ಕಾಚಾರ.
ಉರ್ತಬಾಡು. ಹುರಿದ ಮೃದುವಾದ ಮಾಂಸ, ಭಾಗಗಳು. ಹಬ್ಬದ ದಿನಗಳಲ್ಲಿ 'ಗಟ್ಟಿಬಾಡು' ಬೆಂದು ಅಡುಗೆಯಾಗುವುದು ತಡವಾಗುವುದರಿಂದ, ಕಾಯಲಾಗದ ಮಕ್ಕಳಿಗೆ ಹುರಿದು ಕೊಡುವರು. ಊಟಕ್ಕೆ ಮುಂಚೆ 'ಕಾರ್ಯಕ್ರಮ' (ಗುಂಡು ಹಾಕುವುದು) ವಿದ್ದರೆ ಅದರೊಂದಿಗೆ ನಂಚಿಕೊಳ್ಳಲು 'ಉರ್ತಬಾಡ'ನ್ನು ಕೊಡುವರು.

ಗಡ್ಡೆಗಳಾಗಿ ಹಂಚುತ್ಟಾರೆ
ಕರುಳು, ರಕ್ತ, ಇ(ಈ)ರ್ವೆ, ದೊಮ್ಮೆ, ಕರ್ಲುಪಟ್ಟಿ ಕೊಬ್ಬು ಮುಂತಾದ ಮೃದುವಾದ ಭಾಗಗಳು ಮೆತುವುಬಾಡು. ನಿಧಾನ ಬೇಯುವುದು ಗಟ್ಟಿಬಾಡು. ವರಿಬಾಡು: ದೇವರಬಾಡು, ದೇವರಿಗೆ ಬಲಿಕೊಟ್ಟ ಪ್ರಾಣಿಯ ಮಾಂಸ. ಕುರಿ, ಮೇಕೆ, ಗೋವು, ಕೋಣದಂಥ ಜೀವಿಗಳ ಮಾಂಸ. ಇದನ್ನೂ ಗಡ್ಡೆಗಳಾಗಿ ಮಾಡಿ ಹಂಚುತ್ತಾರೆ.
ಎದಿಬೋರು: ಎದೆಗೂಡು, ಅದರ ಮೆದುವಾದ ಮೂಳೆ(ಇದನ್ನು ಎದೆಹಾಲು ಹೆಚ್ಚುವುದೆಂದು ಬಾಣಂತಿಯರಿಗೆ ಕೊಡುವರು. ಫಟ್ಟಿ: ಜಠರ.ಇದು ಆರೋಗ್ಯಕರ. ಹಲ್ಲುಗಳಿಲ್ಲದವರಿಗೆ ಕೊಡುವರು. ಹಾಗೇ ಎಳೆ ಮಕ್ಕಳಿಗೂ ಕೊಡುವರು. ಕರಿಕಾಲುಗಳು: ಕುರಿ, ಮೇಕೆಗಳ ಮಂಡಿಯ ಕೆಳಭಾಗ. ಇದನ್ನು ಕುದಿಸಿ 'ಸೂಪು' ತಯಾರಿಸುವರು. ಮೊಣಕಾಲಿನ ಶಕ್ತಿ ಹೆಚ್ಚಿಸುತ್ತದೆ. ನಲ್ಲಿ(ಳ್ಳಿ), ಮೂಳೆಮಿಕಿಗಳು : ಮೂಳೆಗಳು.

ಎರಡು ವಿಧ
ಇದರಲ್ಲಿ ಎರಡುವಿಧ. 1. ಚಿಕ್ಕಮೂಳೆಮಿಕಿಗಳು (ಕುರಿ, ಮೇಕೆ, .. 2. ದೊಡ್ಡಮೂಳೆಮಿಕಿಗಳು (ಹಸು, ಎಮ್ಮೆ ಮುಂತಾದವುಗಳ ಎಲುಬುಗಳು). ಸಿಸ್ನ: ಕೋಳಿಯ ಶಿಶ್ನ. (ಇದನ್ನು ಇನ್ನೊಬ್ಬರು ಕಾಣದಂತೆ ತಿನ್ನುವರು. ಕಾರಣ ಇದನ್ನು ತಿಂದದ್ದು ಕಂಡರೆ 'ಕೋಳಿ ಪಿ(ಪು)ಕ್ನ ತಿಂದೋನಂ'ತ(ನೀಚ) ಗೇಲಿ ಮಾಡುವರು.
ಅಂದಿಬಾಡು: ಹಂದಿ, ಇದನ್ನು ಬುರುದಬೂಸಿಗಾಡು, ಕುಂಬಳಕಾಯಿ ಅನ್ನುವರು, ಚೆನ್ನಾಗಿ ಕೊಬ್ಬಿದ ಹಂದಿಯನ್ನು ಕೊಯ್ಯುವ ಮೊದಲು ಮೆರವಣಿಗೆ ಮಾಡುತ್ತಾರೆ. ನಂತರ ಸಾಟುವ (ಡಂಗೂರ) ಹಾಕಿಸುವರು. ಪದೇಲು ಗುಮ್ಮಿಡಿಕಾಯ್ನಿ ಕೋಸಿನ್ನಾರಪ್ಪೋ ಕಾಯಿಸು ಉನ್ನೋಲ್ಲು ಕೊನುಕೊನಿ ತಿನೊಚ್ಚು. ಲೇನೋಲ್ಲು ಕೂರಾಕ್ ಚಾರು ಸೇಸ್ಕೊನಿ ತಿನೊಚ್ಚು.(ಹತ್ತುಸಾವಿರದ ಕುಂಬಳಕಾಯಿ ಕೊಯ್ದಿದ್ದಾರಪ್ಪೋ. ಖಾಯಸ್ಸು ಇರೋರು ಕೊಂಡು ತಿನ್ನಬಹುದು. ಇಲ್ಲದೋರು ಸೊಪ್ಪಿನಸಾರು ಮಾಡಿಕೊಂಡು ತಿನ್ನಬಹದು) ಹೀಗೆ ಸಾರಿಸಿ ಮರ್ಮಕ್ಕೆ ಚಿಚ್ಚಿ ಕೊಳ್ಳಲು ಪ್ರೇರೇಪಿಸುವರು.

ರುಚಿ ಬಲ್ಲವರ ಮಾತು
'ಅಂದಿಬಾಡು ಉರುದ್ರೆ ಗೊಬ್ಬರದ ಪೆಂಟಿಗಳಂಗಿರಬೇಕು.'(ಹಂದಿ ಮಾಂಸವನ್ನು ಹುರಿದರೆ(ಫ್ರೈ) ಗೊಬ್ಬರದ ಉಂಡೆಗಳಂತೆ ಮೃದುವಾಗಿ) ಇರಬೇಕು ಅನ್ನುತ್ತಾರೆ, ಇದರ ರುಚಿ ಬಲ್ಲವರು.
ಇತರೆ ಬಾಡುಗಳು: ದೊಡ್ಡಬಾಡು (ದನದ ಮಾಂಸ), ಉಡ್ತಿಬಾಡು ಅಳಿಲಿನ ಮಾಂಸ, ಉಡುಂಬಾಡು (ಉಡದ ಮಾಂಸ), ಯಂಟಿವಿಬಾಡು (ಮುಂಗಸಿಯ ಮಾಂಸ), ಯಕ್ಣ(ಗ್ಣ)ಬಾಡು (ಹೆಗ್ಗಣದ ಮಾಂಸ), ಸೀಕ್ರೇವುಬಾಡು (ಬಾವಲಿಯ ಮಾಂಸ), ಬಾವುಲಿ ಬಾಡು (ಬಾವಲಿಯ ಮಾಂಸ).

ಭಾಗಗಳು ಇವು
ಭಾಗಗಳು: ತಲಿ(ತಲೆ), ರಗತ (ರಕ್ತ), ನಾಲ್ಕಿ (ನಾಲಗೆ), ಮೆದ್ಲು (ಮೆದುಳು), ಕಣ್ಗುಳು (ಕಣ್ಣುಗಳು), ಚೆವಿಗ್ಳು (ಕಿವಿಗಳು), ಪೀಪಿ (ಗ್ವಾಕೆ, ಗ್ವಾಮಾಳೆ, ಗಂಟಲು, ಅನ್ನನಾಳ), ಇ(ಈ)ರ್ಲಿ (ಲಿವರ್), ಗುಂಡ್ಗಿ (ಗುಡಿಗೆ, ಹೃದಯ), ದೊಮ್ಮಿ(ಮ್ಮೆ) (ಶ್ವಾಸಕೋಶ), ಕರ್ಲುಪಟ್ಟಿ (ಕರುಳು, ಬೋಟಿ), ಕೊವ್ವು(ತೆ) (ಕೊಬ್ಬು), ಗಿರಿಶಿ (ಗೊರಸಿನ ಮೃದುವಾದ ಅಡಿಪದರ),
ತ್ವಾಕಿ(ಕೆ) (ಬಾಲ), ಕರಿಕ್ಯಮಿಕೆ (ಬೆನ್ನು ಮೂಳೆಯ ಪಕ್ಕದ ಮೂಳೆಗಳು), ಬರೆಮಿಕೆ, ಎದಿಬೋರು (ಎದೆಗೂಡಿನ ಮೂಳೆಗಳು), ನಚ್ಚೆಮಿಕೆ (ಮೂಳೆಯ ಸಣ್ಣಸಣ್ಣ ಚೂರುಗಳು), ಜುಟ್ಟಿ(ಟ್ಟು) (ಕೋಳಿಜುಟ್ಟು.. ಕೋಳಿಯನ್ನು ಸುಡುವಾಗಲೇ ತಿಂದುಬಿಡುವರು), ಮಟ್ಟಿಸರ (ಕೋಳಿ, ಹಕ್ಕಿಗಳ) ಮೊಟ್ಟೆಸರ, ತರುಡುಬೀಜ = ವೃಷಣ, ಬೀಜ, ತರುಡುಬೀಜ = ವೃಷಣ, ಬೀಜ, (ಟಗರು, ಹೋತ, ಹೋರಿ), ಈರ್ ವೆ (ಅಸ್ಥಿಮಜ್ಜೆ).
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications