ಕಪ್ಪು ಬಿಳುಪು ಸುಂದರಿ : ನಮ್ಮ ಮಾನಸ!

ಇವತ್ತು ಮಾರುಕಟ್ಟೆಯಲ್ಲಿ ಸಿಗುವ ಮಹಿಳಾ ಪತ್ರಿಕೆಗಳು ಹೇರಳ. ನಿಮ್ಮ ಗಂಡನನ್ನು ಒಲಿಸಿಕೊಳ್ಳುವುದು ಹೇಗೆ, ಅನಗತ್ಯ ರೋಮ ನಿವಾರಣೋಪಾಯ ಮುಂತಾದ ಎಳಸು - ಜೊಳ್ಳು ಲೇಖನಗಳ ಒಣ ಉಪದೇಶಗಳ ಮಹಿಳಾ ಪತ್ರಿಕೆಗಳಿಗೆ ಓದುಗರೂ ಹೆಚ್ಚು! ಬಹುಶಃ ಚೆಂದದ, ಅರೆನಗ್ನ ಚೆಲುವೆಯರ ವರ್ಣದ ಫೋಟೋಗಳಿಂದ ಮಿಂಚುವ ಗೃಹಶೋಭಾ, ಪ್ರಿಯಾಂಕಗಳನ್ನಂತೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೋಡುತ್ತಾರೇನೋ?!
ಸಂಪೂರ್ಣವಾಗಿ ಮಹಿಳೆಯರ ಸಂಪಾದಕೀಯ ಬಳಗವಿರುವ ಮತ್ತು ಸ್ತ್ರೀ ವಿಚಾರದಲ್ಲಿ ಗಂಭೀರ, ಚಿಂತನೀಯ ಲೇಖನಗಳನ್ನು ಪ್ರಕಟಿಸುವ ಕಪ್ಪು ಬಿಳುಪು ಸುಂದರಿಯೇ ನಮ್ಮ ಮಾನಸ' ಮಾಸಿಕ. ಆರಂಭದ 1985ರ ದಿನಗಳಲ್ಲಿ ಮಾನುಷಿ'ಯಾಗಿ, ತದನಂತರ ಮಾನಸ'ಳಾಗಿ ಈಗ ನಮ್ಮ ಮಾನಸವಾಗಿರುವ ಪತ್ರಿಕೆಗೆ ಮೂರೂಮುಕ್ಕಾಲು ವರ್ಷ ಪ್ರಾಯ. ರಾಜೇಶ್ವರಿ ಎಚ್.ಎಸ್. ಪತ್ರಿಕೆಯ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು.
22ರಿಂದ 30 ಪುಟ ಹೊಂದಿರುವ ನಮ್ಮ ಮಾನಸದ ಲೇಖನಗಳೆಲ್ಲ ಅರ್ಥಪೂರ್ಣ. ಸ್ತ್ರೀ ಹಕ್ಕು, ಮಹಿಳಾ ದೃಷ್ಟಿಕೋನದಲ್ಲಿ ಸಾಮಾಜಿಕ, ರಾಜಕೀಯ ಪಲ್ಲಟಗಳು, ಸ್ತ್ರೀ ಸಬಲತೆ... ಹೀಗೆ ಹತ್ತಾರು ಉದ್ದೇಶಗಳೊಂದಿಗೆ ಪ್ರಕಟವಾಗುತ್ತಿದೆ. ಕವನಗಳು, ಅನುಭವ ಕಥಾನಕಗಳು ಕೂಡ ಇಲ್ಲಿವೆ. ಸಾಧಕ ಮಹಿಳೆಯರ, ಮಹಿಳಾ ಬರಹಗಾರರ ಪುಸ್ತಕಗಳ ಪ್ರಾಮಾಣಿಕ ಪರಿಚಯಗಳನ್ನು ಕಾಣುತ್ತೇವೆ. ಪ್ರಸಿದ್ಧರ ಬರಹಗಳ ಕನ್ನಡ ಅನುವಾದವೂ ಇಲ್ಲಿರುವುದರಿಂದ ಮಹಿಳೆಯರ ಬುದ್ಧಿ ಮೊಳಕಾಲು ಕೆಳಗೆ ಎಂಬ ತುಚ್ಛ ಮಾತಿಗೆ ಸಡ್ಡು ಹೊಡೆಯುವ ಪ್ರಯತ್ನವಿದು.
ಲೇಖನಗಳತ್ತ ಕಣ್ಣು ಹಾಯಿಸಿದರೆ ಅಚ್ಚರಿಯೇ ಎದುರಾಗುತ್ತದೆ. ಧನಸಹಾಯ ಅತ್ಯಾಚಾರಕ್ಕೆ ಪರಿಹಾರವೇ? ಅನೈತಿಕ ಸರ್ಕಾರದ ವಿರುದ್ಧ ನೈತಿಕ ಹೋರಾಟ, ನಾನು ಅವನಲ್ಲ... ಅವಳು...! ಇತ್ಯಾದಿ ಮೆದುಳಿಗೆ ಆಹಾರ ಪೂರೈಸಬಲ್ಲ ಲೇಖನಗಳು ಇದರಲ್ಲಿದೆ. ಸಾರಿ, ಬಣ್ಣದ ನಗ್ನ ಚಿತ್ರಗಳಾಗಲಿ, ಮೊದಲ ರಾತ್ರಿ ಸೆಕ್ಸ್ ಎಂಬ ಅಸಡ್ಡಾಳ ಲೇಖನಗಳಾಗಲಿ ಇದರಲ್ಲಿಲ್ಲ. ಮಹಿಳೆ ಎಂದಾಕ್ಷಣ ಲಿಪ್ಸ್ಟಿಕ್, ಅಡುಗೆ, ಧಾರಾವಾಹಿ ಎಂಬ ಅನಿಸಿಕೆಯನ್ನು ಸುಳ್ಳು ಮಾಡುವ ಮಾನಸಕ್ಕೆ ಸಲಾಂ.
ಕೃಷ್ಣಸುಂದರಿಯ ವಿಳಾಸ : ನಮ್ಮ ಮಾನಸ, 114/5, 9ನೇತಿರುವು, ಎರಡನೇ ಮುಖ್ಯರಸ್ತೆ, ಚಾಮರಾಜ ಪೇಟೆ, ಬೆಂಗಳೂರು - 560 018. ವಿಳಾಸಕ್ಕೆ ಚಂದಾ ಹಣ ಕಳುಹಿಸಬೇಕು. ಪತ್ರಿಕೆಯ ಬಿಡಿ ಪ್ರತಿ ಬೆಲೆ 8 ರೂ. ವಾರ್ಷಿಕ ಚಂದಾ 100 ರೂ.ನಲ್ಲಿ ವಿಶೇಷ ಸಂಚಿಕೆಯೂ ಸೇರಿದೆ. ರಾಜೇಶ್ವರಿಯವರು 94493 45698 ಮೊಬೈಲ್ ನಂ.ನಲ್ಲಿ ಸಂಪರ್ಕಕ್ಕೆ ಲಭ್ಯ. ಸಂಪಾದಕೀಯ ಬಳಗದಲ್ಲಿ ಇರುವ ಮಹಿಳೆಯರನ್ನು ಸುಮ್ಮನೆ ಎಣಿಸಿದರೆ ಸಿಕ್ಕ ಸಂಖ್ಯೆ ಒಂದು ಡಜನ್!
ಕೊನೆ ಮಾತು : ಮಾರುಕಟ್ಟೆಯಲ್ಲಿ ಈ ಪತ್ರಿಕೆ ಬಹುಶಃ ಲಭ್ಯವಿಲ್ಲ. ಗೊಂದಲ ಬೇಡ, ಪುಸ್ತಕಗಳ ಅಂಗಡಿಯಲ್ಲಿ ಸಿಗುವುದು. ಕೆ.ಗಣೇಶ್ ಕೋಡೂರು ಸಂಪಾದಕೀಯದ ನಿಮ್ಮೆಲ್ಲರ ಮಾನಸ' ಎಂಬ ಬೇರೆಯದೇ ಪತ್ರಿಕೆ ಇದೆ. ಅದರ ಬಗ್ಗೆ ಇನ್ನೊಮ್ಮೆ...
ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು












Click it and Unblock the Notifications