ಕಂಪ್ಯೂಟರ್ ಹೆಣ್ಣೆಂದಿರಾ, ಅನ್ಯಾಯ ಸಾರ್!
ನನ್ನ ಮೊದಲನೆಯ ಪ್ರೀತಿ
ಬಾಳ ಸಂಗಾತಿ
ನನ್ನ ಬಿಟ್ಟು ಎಲ್ಲೂ ಹೋಗುವುದಿಲ್ಲ
ನನ್ನೆದುರು ಕೂತು
ನಯನ-ನಯನ ಬೆಸೆಯುತ್ತಾನೆ
ನನ್ನ ಮೊಗದಿಂದ
ಕಣ್ಣು ಕೀಳುವುದೇ ಇಲ್ಲ
ನಿಜದ ಪತಿದೇವರುಗಳಂತೆ
ಮನೆಗೆ ಬಂದೊಡನೆಯೆ ಕಾಫಿ ಬೇಡುವುದಿಲ್ಲ
ಬಿಸಿ ಅಡುಗೆ , ರುಚಿಯೂಟ ಹಾಕು ಎನ್ನುವುದಿಲ್ಲ
ತಲೆ ಕುಟ್ಟಿದರೂ ಕಂ-ಕಿಂ ಎನ್ನದ
ಶಾಂತಮೂರ್ತಿ, ಪ್ರಶಾಂತ ಪ್ರೇಮಿ
ವಿಶಾಲ ವದನದ ಸುಂದರನೇ
ಬೇಕೆಂದಾಗ ಕೈಗೆಟುಕುವ ಚಂದಿರನೇ
ಗಣೇಶನಂತೆ ನೀನು ಮೂಷಿಕವಾಹನನೇ
ಆಗಿರುವಾಗ ನಿನ್ನ ಹೆಣ್ಣೆಂದು ಹೇಗೆ ಕರೆದರು?
ನಾನು ನಿನಗುಸುರಿದ ಒಂದೊಂದು ಪದವನ್ನು
ಅಳಿಸದೆ ಎದೆಯಾಳಗೆ ಇಳಿಬಿಟ್ಟೆ ನೀನು
ನಿಜದ ಪತಿಗಳಂತೆ ಆ ಕಿವಿಯಿಂದ ಕೇಳಿ
ಈ ಕಿವಿಯಿಂದ ಬಿಟ್ಟುಬಿಡಲಿಲ್ಲ
ಇಡೀ ಪ್ರಪಂಚವನ್ನೇ ಸುತ್ತಿಸುವೆ ನೀನು
ಇಲ್ಲಿಯ ಪತಿಗಳಂತಲ್ಲ
ದುಡ್ಡು-ಖರ್ಚು ಸುಮ್ಮನೆ ಮನೆಯಲ್ಲಿರೋಣ
ಎಂದು ಬಡಿದು ಕೂರಿಸುವುದಿಲ್ಲ
ಹೀಗಿರಲು ಪ್ರೀತಿಯಿಂದ ನಿನ್ನ
ಮುಂದಲೆ ನೇವರಿಸದೆ ಹೇಗಿರಲಿ?
ಕಟ್ಟಿಕೊಂಡವರಂತೆ ಕಡೆಗಣಿಸುವುದಿಲ್ಲ
ನಾನು ಬೇಕೆಂದಾಗ ಸಿಗುತ್ತೀ
ನಾನು ಸಿಗದಿದ್ದಾಗ ಸಿಟ್ಟುಗೊಳ್ಳುವುದಿಲ್ಲ
ನನಗಾಗಿ ಕಾಯುತ್ತೀ ಶಾಂತವಾಗಿ
ಮುಸುಕು ಹೊದ್ದು ಮೂಲೆಯಲ್ಲಿ
ಯಾಕೆ ಲೇಟು ಎಂದು ಕೇಳುವುದಿಲ್ಲ
ಕಾಲಕಸವೇ? ಎಂದು ಮುನಿಯುವುದಿಲ್ಲ
ನನಗಿಂತ ಕೆಲಸವೇ ಮುಖ್ಯವೇ ಎಂದು ಮೂದಲಿಸುವುದಿಲ್ಲ
ಹೇಳಿದಂತೆ ಕೇಳುವ ಇಂಥ ಸಹೃದಯನ
ನಾನಿಲ್ಲೆಲ್ಲೂ ಕಂಡೇ ಇಲ್ಲ
ನಿನ್ನ ಪ್ರೀತಿಸದೆ ನಾ ಹೇಗಿರಲಿ?
ಹಂ! ಪತಿರಾಯರು ಬಂದಂತಾಯ್ತು
ಸದ್ದು ಅವರ ಕಾರಿನದು, ಹೆಜ್ಜೆಯದು
ಇನ್ನು ಗೊಣಗಲು ಶುರುವಿಡಬಹುದು
‘ಓಹ್ಹ್ ಮತ್ತೆ ಕೂತೆಯ ಮುಂದೆ’ ಎಂದು
ಹೊರಡಲೇ ಗೆಳೆಯಾ?
ಮತ್ತೆ ಬರುವೆನು ನಾಳೆ
ಮಾತನಾಡಲು ನಿನ್ನೊಡನೆ
ನನಗೇನು ಸಂಕೋಚವೇ?
ನಮ್ಮ ಪ್ರೀತಿ ನಿರ್ಮಲ!
ನಿನ್ನ ಸಿ.ಪಿ.ಯು ನಷ್ಟೇ ಅಚಲ!
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications