ಯಂತ್ರಕ್ಕೆ ಶಾಸ್ತ್ರಬದ್ಧವಾಗಿ ಸಂಗೀತ ಕಲಿಸಿದರೆ ಹೇಗಿರತ್ತೆ!
ಮೊನ್ನೆ ಸಮಯ, ಮನೆಯ ಇಂಟರ್ನೆಟ್ ಜೊತೆ ಗುದ್ದಾಡಿ ನನ್ನ ಸ್ನಾತಕೋತ್ತರ ಪದವಿಯ ಪ್ರಬಂಧವನ್ನ ಸಂಪೂರ್ಣಗೊಳಿಸಿದೆ. ಬಾರ್ಸಿಲೋನಾದಿಂದ ಬೆಂಗಳೂರಿಗೆ ಬಂದಾಗ ಕೇಳಿದ ಮೊದಲ ಪ್ರಶ್ನೆ ಅಲ್ಲಿದ್ದಾಗ ಏನು ಓದ್ದಿದ್ದು, ಮುಂದೇನು ಕೆಲಸ ಎಂಬುದರ ಬಗ್ಗೆ ವಿವರಣೆ ಕೊಟ್ಟು ಕೊಟ್ಟು ಸಾಕಾಗಿ, ಇಂದು ನಾನು ಓದಿದ ವಿಶೇಷ ಕೋರ್ಸಿನ ಬಗ್ಗೆ ಬರೆಯೋಣ ಅಂತ ಅಂದುಕೊಂಡೆ. ಪಕ್ಕದ್ಮನೆ ಆಂಟಿಗೆ ಹೇಗೆ ವಿವರಿಸಿದ್ದೆನೋ ಹಾಗೆಯೇ ನಿಮಗೂ ವಿವರಣೆ.
ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಎಂಬ ವಿಶೇಷ ಪ್ರಕಾರಗಳಿವೆ. ಸಂಗೀತವನ್ನ ಸುಮಾರಾಗಿ ಒಂದು ಕಲೆಯಾಗಿಯೆ ನೋಡುತ್ತೇವೆ. ನಮ್ಮ ಸಂಸ್ಕೃತಿಯ ಒಂದು ಕುರುಹು ನಮ್ಮ ಸಂಗೀತ ಹಾಗೂ ಅದು ಮುಂದಿನ ಪೀಳಿಗೆಗೆ ನಮ್ಮತನವನ್ನ ಪರಿಚಯಿಸುತ್ತದೆ ಎಂಬುವುದು ಮಾತ್ರ ನಮಗೆ ಗೊತ್ತು.

ಆದರೆ ಸಂಗೀತದಲ್ಲಿರುವಷ್ಟು ಗಣಿತ ಎಲ್ಲೂ ಕಂಡಿಲ್ಲ. ಕ್ಲಿಷ್ಟವಾದ ಲೆಕ್ಕಾಚಾರ, optimization ಸಮಸ್ಯೆಯ ಪರಿಹಾರವನ್ನ ಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂಜಿನಿಯರಿಂಗ್ ನಂತರ ಈ ಸಮಸ್ಯೆಯ ಪರಿಹಾರಕ್ಕೆ ಸಂಗೀತದಿಂದ ಉಪಯೋಗವಾಗುತ್ತದೆಯಾ ಎಂಬುದನ್ನ ಅರಿಯುವುದಕ್ಕೆ ದೂರದ ಬಾರ್ಸಿಲೋನಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ಸಂಗೀತ, ಟರ್ಕಿಶ್ ಸಂಗೀತ, ಚೈನಾದ ಝಿಂಕ್ಷೂ ಸಂಗೀತ ಎಲ್ಲವನ್ನು ಕ್ರಮ ಬದ್ಧವಾಗಿ ವೈಜ್ಞಾನಿಕವಾಗಿ ಅಭ್ಯಾಸ ಮಾಡಲಾಗುತ್ತಿತ್ತು. ಅದಕ್ಕೆ ತಕ್ಕನಾದ ಪಠ್ಯಗಳನ್ನು ಅಭ್ಯಸಿಸಲು ಅನುವು ಮಾಡಿಕೊಡಲಾಗಿತ್ತು.
ನಾನು ರಾಗವನ್ನು ಕಂಡು ಹಿಡಿಯುವ ಬಗೆಯನ್ನ ಆಳವಾಗಿ ಅಭ್ಯಾಸ ಮಾಡಲು ಹೋಗಿದ್ದೆ. ಶಾಸ್ತ್ರೀಯ ಸಂಗೀತವನ್ನ ಸುಮಾರು ವರ್ಷ ಅಭ್ಯಾಸ ಮಾಡಿದವರಿಗೆ ಮಾತ್ರ ಈ ಕಲೆ ಕರಗತವಾಗಿರುತ್ತದೆ. ಆದರೆ ಒಂದು ಯಂತ್ರಕ್ಕೆ ಒಂದು ಸಾಫ್ಟ್ವೇರನ್ನೋ ಅಥವಾ ನಮ್ಮ ದೂರವಾಣಿಗೆ app ಅನ್ನೋ ಅಳವಡಿಸಿದರೆ ಅದರಲ್ಲಾಗೋ ಖುಶಿಯೇ ಬೇರೆ. ಇಂಜಿನಿಯರಿಂಗ್ ಓದಿದವರಿಗೆ ಸಂಗೀತ ಸಹ ಒಂದು ಸಿಗ್ನಲ್, ಅದರಲ್ಲಿಯೂ ಸಹ ಸುಮಾರು ವಿಶೇಷಗಳು ಅಡಗಿರುತ್ತದೆ. ಅದರ ಕ್ರಿಯೆ ಪ್ರಕ್ರಿಯೆಗಳನ್ನ ತಿಳಿಯೋದು ತುಂಬಾ ತುಂಬಾ ಮುಖ್ಯ.

ಮುಖ್ಯವಾಗಿ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸುಮಾರು ಜನ ಅವರವರ ನೆಲದ ಸಂಗೀತ ಪರಂಪರೆಯನ್ನ ಚೆನ್ನಾಗಿ ಬಲ್ಲವರು ಹಾಗೂ ಇಂಜಿಯನಿಯರುಗಳು. ನನ್ನ ಎಲ್ಲ ಸಹಪಾಠಿಗಳು ಇವೆರೆಡರಲ್ಲೂ ಪರಿಣಿತಿ ಹೊಂದಿದ್ದರು. ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಟರ್ಕಿಶ್ ಮಾಕಾಮ್ ಸಂಗೀತಕ್ಕೂ ಸುಮಾರು ಸಾಮ್ಯತೆಗಳಿವೆ. ನಮ್ಮ ರಾಗವನ್ನು ಅವರು ಮಕಾಮ್ ಎನ್ನುತ್ತಾರೆ. ಪ್ರತಿ ಶಾಸ್ತ್ರೀಯವಾಗಿ ಅಭ್ಯಸಿಸಿದ ಹಾಡನ್ನು ಹಾಡುವಾಗಲೂ ನಾವು ಇದು ಈ ರಾಗ, ಈ ತಾಳ ಎಂಬುದನ್ನು ತಪ್ಪದೆ ತಿಳಿಸುತ್ತೇವೆ, ಹೀಗೆ ಅವರ ಸಂಗೀತಕ್ಕೂ ಮಕಾಮ್ ತಿಳಿಸುವುದು ಕಡ್ಡಾಯ.
ನಮ್ಮ ಥರವೇ ಬಹಳ ಶಿಸ್ತಿನಿಂದ ಅಭ್ಯಾಸ ಮಾಡಿದರಷ್ಟೆ ಇವೆಲ್ಲವೂ ಒಬ್ಬ ಮನುಷ್ಯ ಹೇಳಲು ಸಾಧ್ಯ. ಆದರೆ ನಾವು ಸಂಗೀತವನ್ನ ಕಲಿತ ಬಗೆಯನ್ನ ಒಂದು ಯಂತ್ರಕ್ಕೆ ಕಲಿಸಿದರೆ ಅದೂ ಸಹ ಎಷ್ಟು ಕರಾರುವಕ್ಕಾಗಿ ರಾಗ/ಮಕಾಮ್ ನನ್ನು ಕಂಡು ಹಿಡಿಯತ್ತೆ, ಆರಭಿಗೂ, ದೇವಗಾಂಧಾರಿಗೂ ವ್ಯತ್ಯಾಸವನ್ನ ತಿಳಿಸುತ್ತಾ ಇಲ್ಲ್ವಾ, ಅಥವಾ ನಮ್ಮ ಹಾಗೆ ಅದನ್ನು ಒಂದೇ ಅನ್ನುತ್ತದೆಯಾ, ಯಾವ ಎರಡು ರಾಗಗಳಿಗೆ ತುಂಬಾ ಸಾಮ್ಯತೆ ಇದೆ, ಎಷ್ಟು ಶೇಕಡಾ ಸಾಮ್ಯತೆ ಇದೆ/ಇಲ್ಲ ಇವೆಲ್ಲವನ್ನ ವೈಜ್ಞಾನಿಕವಾಗಿ ತಿಳಿಯುವ ಒಂದು ಸಾಹಸವನ್ನ ಮಾಡುತ್ತಿದ್ದೆವು.

ಇಂತಹ ಸಂಶೋಧನೆ ಬೇರೆ ಸಂಗೀತ ಪ್ರಕಾರಗಳಲ್ಲಿ ತುಂಬಾ ಆಗಿದೆ. ನಮ್ಮಲ್ಲಿನ ಮಡಿವಂತಿಗೆಕೆ, ಆಲಸ್ಯಕ್ಕೆ ನಾವು ನಮ್ಮ ಅಪಾರವಾದ ಜ್ಞಾನವನ್ನ ತುಂಬಾ ತೆರೆಯದೆ ಅಥವಾ ಈ ಭಾಗವನ್ನ ಅರಿಯದೆ ಮುಂದುವರಿದೇ ಇಲ್ಲ. ಇದೆಲ್ಲ ಮಾಡುವುದರಿಂದ ಆಗುವ ಲಾಭಗಳು ನಮ್ಮ ಸಂಗೀತದ ಪ್ರಕಾರ ಎಷ್ಟು ವೈಜ್ಞಾನಿಕವಾಗಿದೆ ಎಂಬುದನ್ನ ಅರಿಯಬಹುದು. ಈ ಸಾಫ್ಟ್ವೇರಿಂದ ಕಲಿಕೆ ಸುಲಭ, ಮಕ್ಕಳಿಗೆ ಆಸಕ್ತಿದಾಯಕವಾಗಿರುತ್ತೆ ಮತ್ತು ನಮ್ಮ ಇಂಜಿನಿಯರಿಂಗ್ನಲ್ಲಿ ಕಾಡುವ optimization ಸಮಸ್ಯೆಯ ಪರಿಹಾರವನ್ನ ಸುಲಭವಾಗಿ ಕಂಡು ಹಿಡಿಯಬಹುದು.
ಈ optimization ಅನ್ನೋದು ಸೋಮಾರಿಗಳ ಹಾಗೆ. ಕಡಿಮೆ ಸಂಪನ್ಮೂಲದಲ್ಲಿ ಜಾಸ್ತಿ ಉತ್ಪಾದನೆಯನ್ನ ಮಾಡುವುದು. ನನ್ನಂತಹ ಸೋಮಾರಿಗಳಿಗೆ ಇದು ಹೇಳಿ ಮಾಡಿಸಿದ ಕೆಲಸ. ಕಡಿಮೆ ಸಮಯ, ಜನ ಇವೆಲ್ಲವನ್ನ ಇಟ್ಟುಕೊಂಡು ಎಷ್ಟು ಬೇಗ, ಒಳ್ಳೆಯ ಕೆಲಸವನ್ನ ಮುಗಿಸುತ್ತೇವೆ ಎಂದು ನಮ್ಮ ಸಂಶೋಧನೆಯ ಭಾಗವಾಗಿತ್ತು. ಯಾವುದೇ ಹಾಡನ್ನ ನೋಡಿದಾಗ ಅದು ಇದೇ ರಾಗ, ಇದೇ ತಾಳ, ಇಷ್ಟೇ ಸ್ವರಗಳನ್ನ ಇಟ್ಟುಕೊಂಡಾಗಲೇ ಅದಕ್ಕೊಂದು ಮಾಧುರ್ಯವಿರುವುದು ನಿಮಗೆ ಅರಿವಿರಬಹುದು. ನಮಗೆ ಗೊತ್ತಿಲ್ಲದೆ ಒಂದು ಸೂತ್ರವನ್ನ ಒಂದೊಂದು ಹಾಡುಗಳು ಅನುಸರಣೆ ಮಾಡುತ್ತಿದೆ. ಇವೆಲ್ಲವನ್ನ ತಿಳಿಯುವ ಪ್ರಯತ್ನವಾಗುತ್ತಿತ್ತು.

ನಮ್ಮ ಸಂಗೀತಕ್ಕೆ ವೈಜ್ಞಾನಿಕ ಸೂತ್ರಗಳನ್ನ ಅಳವಡಿಸಿ ನೋಡಿದಾಗ ನಮ್ಮದು ಎಷ್ಟು ಕರಾರುವಾಕ್ಕಾಗಿ ಸಮಸ್ಯೆಗಳನ್ನ ಬಗೆಹರಿಸುತ್ತಿದೆ, ಸಂಗೀತದಿಂದ ನಾವೆಷ್ಟೊಂದು ಹೊಸ ವೈಜ್ಞಾನಿಕ ಸೂತ್ರಗಳನ್ನ ಕಂಡುಹಿಡಿದ್ವಿ, ರಾಗಗಳನ್ನ ಗುರುತಿಸಿದ್ದರ ಗೆಲುವು ಇವೆಲ್ಲವನ್ನ ನಾ ಆಂಟಿಗೆ ತಿಳಿಸಿ ಹೇಳುತ್ತಿದ್ದೆ.
ಸುಮಾರು ಹೊತ್ತು ನಾನು ಹೀಗೆ ಮಾತಾಡೊದನ್ನ ಕೇಳಿ ಆಂಟಿಗೆ, "ಅಯ್ಯೊ ಸುಮ್ನೆ ಮನೆ ಮುಂದೆ ಶಾರದಾ ಸಂಗೀತ ಶಾಲೆ ಎಂದು ಬೋರ್ಡ್ ಹಾಕೊಂಡಿದ್ರೆ ಎಷ್ಟೊಂದು ಮಕ್ಕಳಿಗೆ ಸಂಗೀತ ಹೇಳಿಕೊಡ್ಬೋದಾಗಿತ್ತು, ಅದನ್ನ ಬಿಟ್ಟು ಸುಮ್ನೆ ಕಷ್ಟ ಪಟ್ಟುಕೊಂಡು ಅದ್ಯಾವ್ದೋ ಯಂತ್ರಕ್ಕೆ ಹೇಳಿಕೊಟ್ಟೂ ಬಂದಿದ್ಯಾ, ಶಿವ ಲೀಲೆ ಈಗಿನ ಕಾಲದ ಮಕ್ಕಳ್ಳದ್ದು" ಎಂದು ಹೋದರು. ನೀವು ಪಕ್ಕದ್ಮನೆ ಆಂಟಿ/ಅಂಕಲ್ ಆಗಬೇಡಿ ಆಯ್ತಾ!
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications