ಜಯನಗರದ ಹುಡುಗಿಯ 100ನೇ ಲೇಖನ : ರಾಜಸ್ಥಾನದ ರಾಣಿ!
ಆರೋ ಹೆಡ್ಡಿನ ಮಕ್ಕಳನ್ನ ನೋಡಿದ ನಂತರ, ಹುಲಿಗೂ ನಮಗೂ ಇದ್ದ ಸಮೀಕರಣ ನೋಡಿ ನಾವು ಆರೋ ಹೆಡ್ಡಿನ ಕಥೆಗಳನ್ನ ಕೇಳುತ್ತಾ ಬಂದೆವು. ಹುಲಿ ಮತ್ತು ಹುಲಿ ಮರಿಗಳು ಇರುವ ಬಗೆ, ರಣಥಂಬೋರಿನ ಇತಿಹಾಸ ಇವೆಲ್ಲವನ್ನ ನಮ್ಮ ಗೈಡ್ ಹೇಳುತ್ತಾ ಹೋದರು. ಹೆಣ್ಣು ಹುಲಿ ತನ್ನ ಮಗಳನ್ನ ಅಥವಾ ಮಗನನ್ನ ಚಿಕ್ಕ ವಯಸ್ಸಿನಲ್ಲಿಯೇ ಗಡಿಪಾರು ಮಾಡಿ ತನ್ನ ಜೀವನವನ್ನ ತಾನು ನೋಡಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಪಾಠ ಕಲಿಸುವುದು ಎಂದೆಲ್ಲಾ ಹೇಳುತ್ತಿರುವಾಗಲೇ ಚಾಲಕ ಯರ್ರಾಬಿರಿ ಜೀಪ್ ತಿರುಗಿಸಿ ಯಾವುದೋ ಪೊದೆಗಳ ಆಚೆಗೆ ತಂದು ಬಿಟ್ಟರು.
ಅಲ್ಲಿ ಲಾಡ್ಲಿ ಕಲ್ಲಿನ ಹಾಗೆ ಕೂತಿದ್ದಳು. ಮುಂದೆ ಜಿಂಕೆಯ ಹಿಂಡು. ಆ ಜಿಂಕೆಗಳಿಗೆ ಗೊತ್ತೇ ಆಗದಂತೆ ಕೂತಿದ್ದಳು. ಜಿಂಕೆಗಳಿಗೆ ಪೆರಿಫೆರಲ್ ವಿಷನ್ ಇರುವುದು. ಅಂದರೆ ಅದಕ್ಕೆ ಕಣ್ಣುಗಳು ತಲೆಯ ಬಲ ಮತ್ತು ಎಡ ತುದಿಗೆ ಇರೋದು. ಎರಡು ಕಣ್ಣುಗಳು ಬೇರೆ ಬೇರೆ ದೃಶ್ಯವನ್ನು ಕಾಣುತ್ತದೆ. ಅದಕ್ಕೆ ತಲೆ ಅಲ್ಲಾಡಿಸಿ ಅಲ್ಲಾಡಿಸಿ ತಾನು ನೋಡಬೇಕಾದ್ದುದ್ದನ್ನ ಸರಿಪಡಿಸಿಕೊಳ್ಳುತ್ತದೆ. ತನ್ನ ಅಕ್ಕಪಕ್ಕದ್ದು ಸರಿಯಾಗಿ ಕಾಣುತ್ತದೆ. ಮುಂದೆ ಮತ್ತು ಹಿಂದೆ ಅದರ ದೃಷ್ಟಿ ಬಹಳ ಕಡಿಮೆ ಇರುತ್ತದೆ. ಇದನ್ನ ಹುಲಿ ತನ್ನ ಲಾಭಕ್ಕೆ ಪಡೆದುಕೊಳ್ಳುತ್ತದೆ.
ನಮ್ಮ ಕಡೆಯಲ್ಲಿ ಹೇಳುತ್ತಾರಲ್ಲ, "ನೋಡೋ, ಹೊಡುದ್ರೂ ಹುಲಿ ಥರ ಹೊಡಿಬೇಕು ಎದುರುಗಡೆಯಿಂದ" ಅಂತ. ಅದರ ಅರ್ಥ ಇದೆ. ಹುಲಿ ತನ್ನ ಯಾವ ಬೇಟೆಯನ್ನ ಮೂಲೆಗಳಿಂದ ಆಡೋಲ್ಲ. ತೀರ ನೇರವಾಗಿ ಅಥವಾ ಹಿಂಭಾಗದಿಂದ ಸಾಯಿಸುತ್ತದೆ. ಇದನ್ನ ಧೈರ್ಯ ಶೌರ್ಯ ಅನ್ನೋದಕ್ಕಿಂದ ಅದರ ಚಾಣಾಕ್ಷತನವೆಂದರೆ ತಪ್ಪಲ್ಲ. ಜಿಂಕೆ ಮರಿಗಳು ತನ್ನ ಪಾಡಿಗೆ ಹುಲ್ಲು ತಿನ್ನುತ್ತಾ ಆನಂದವಾಗಿದ್ದವು. ಹುಲಿ ಕಾಯುತ್ತಲೇ ಇತ್ತು. ಚಿಕ್ಕಂದಿನಿಂದ ನೋಡಿದ್ದ ನ್ಯಾಷನಲ್ ಜಿಯೋಗ್ರಫಿ ಮತ್ತು ಡಿಸ್ಕವರಿಯೇ ನೆನಪಿಗೆ ಬಂತು. ಅಯ್ಯೋ ಪಾಪ ಎಂದು ಸಿನೆಮಾ ನೋಡುವ ಹಾಗಾಯ್ತು ನಮ್ಮ ಕಥೆ.

ಬೇಟೆಯಾಡಲು ಅಣಿಯಾಗಿದ್ದ ಲಾಡ್ಲಿ
ನಿಶ್ಯಬ್ಧವಾಗಿ ಜೀಪಿನಲ್ಲಿ ಕೂತಿದ್ದೆವು. ಹುಲಿ ಯಾವ ಶಬ್ಧಕ್ಕೂ ರಿಯಾಕ್ಟ್ ಮಾಡುತ್ತಿರಲ್ಲಿಲ್ಲ. ರೆಪ್ಪೆಯನ್ನೂ ಅಲ್ಲಾಡಿಸುತ್ತಿರಲ್ಲಿಲ್ಲ. ಚಕಚಕಚಕ ಎಂದು ನಮ್ಮ ಕ್ಯಾಮೆರಾ ಸದ್ದು ಮಾತ್ರ ಆಗುತ್ತಿತ್ತು. ಒಮ್ಮೆ ಅನಿರುದ್ಧನ ಕ್ಯಾಮೆರಾ ಸ್ವಲ್ಪ ಜಾಸ್ತಿ ಸದ್ದು ಮಾಡಿತು. ಲಾಡ್ಲಿ ತಿರುಗಿ ನೋಡಿದಳು. ಅವಳು ಬೇಟೆಯಾಡುವ ಸ್ಥಾನದಲ್ಲಿ ಕೂತಿದ್ದಳು. ಮುಂದೆ ಬೇಟೆಯಾಡುವ ಬದಲು ಎಡಗಡೆ ಬಂದಿದ್ದರೆ ಅವಳಿಗೆ ನಾಲ್ಕು ವಾರದ ಊಟ ಸಿಗುತ್ತಿತ್ತು. ನಾವೆಲ್ಲರೂ ಅವಳ ಹೊಟ್ಟೆ ಸೇರುತ್ತಿದ್ದೆವೇನೋ. ಆದರೆ ಅವಳಿಗೆ ಹುಲುಮಾನವರ ಮಾಂಸಕ್ಕಿಂತ ಆ ಜಿಂಕೆಯ ಮಾಂಸವೇ ರುಚಿಯಾಗಿ ಕಂಡಿತ್ತೇನೋ. ನಮಗೊಂದು ಲುಕ್ ಕೊಟ್ಟು ಮತ್ತೆ ಕಾಯುತ್ತಾ ಕೂತಳು. ಅಷ್ಟೊತ್ತಿಗೆ ಲಂಗೂರ್ ಕೋತಿಗಳು ಕಿರುಚೋದಕ್ಕೆ ಶುರು ಮಾಡಿದ್ದವು. ಆಗ ಟ್ಯೂಬ್ ಲೈಟ್ ಆದ ಜಿಂಕೆ ಓಡಿ ಹೋಯಿತು. ಅಲ್ಲಿಗೆ ಲಾಡ್ಲಿಯ ಬೇಟೆಯ ಕಥೆ ಮುಗಿಯಿತು.

ಕಾಡಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ
ಈ ಹುಲಿಗಳ ಥರಹವೇ ಕಾಡುಬೆಕ್ಕೊಂದು ಇದೆ. ಹುಲಿಯ ಆಕಾರ, ಆದರೆ ಥೇಟ್ ನಮ್ಮ ನಾಡಿನ ಬೆಕ್ಕಿನ ಮುಖ. ಇವುಗಳಿಗೆ ಬೇಟೆಯಾಡುವ ಸಾಮರ್ಥ್ಯ ಅಷ್ಟಿಲ್ಲ. ಆದರೆ ಸುಲಭವಾಗಿ ಸಿಗುವ ಕೋತಿಗಳು ಮತ್ತು ನವಿಲುಗಳನ್ನ ಕೊಂದು ತಿನ್ನುತ್ತವೆ. ಅದಕ್ಕೆ ಕೋತಿಗಳು ಮತ್ತು ನವಿಲುಗಳು ಹುಲಿಯನ್ನ ಕಂಡರೆ ಕಾಡುಬೆಕ್ಕು ಅಂದುಕೊಂಡು ತನ್ನವರಿಗೆ ತಿಳಿಸಲು ಕಾಡೆಲ್ಲ ಸದ್ದು ಮಾಡುತ್ತದೆ. ಇದರಿಂದ ಜಿಂಕೆ ಬಚಾವಾಗುತ್ತದೆ. ಹೀಗೆ ಕಾಡಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಪಟ್ಟಿರುವಂಥದ್ದೇ.

ಹುಲಿ ಸಂಖ್ಯೆ ಹೆಚ್ಚಿಸಿರುವ ಲಾಲ್ಡಿ, ಕುಂಭ
ಲಾಡ್ಲಿ 4 ಬಾರಿ ಮರಿಗಳನ್ನ ಹಾಕಿದ್ದಾಳೆ. ಒಂದು ಬಾರಿ ಮೂರು ಮರಿಗಳನ್ನ ಸಾಮನ್ಯವಾಗಿ ಹುಲಿಗಳು ಹಾಕುತ್ತವೆ. 4 ಬಾರಿ ಮರಿಗಳನ್ನ ಹಾಕುವಷ್ಟರಲ್ಲಿ ಅದಕ್ಕೆ ಆಯಸ್ಸು ಕುಂದಿರುತ್ತದೆ. ಲಾಡ್ಲಿ ಮತ್ತು ಕುಂಭ ಸೇರಿ ರಣಥಂಬೋರಿನಲ್ಲಿ ಹುಲಿಗಳ ಸಂಖ್ಯೆಯನ್ನ ಜಾಸ್ತಿ ಮಾಡಿವೆ. ಕುಂಭ ಕಾಡಲ್ಲಿರುವ ಫತೇಹ್ ನಂತರ ಅತ್ಯಂತ ಬಲಿಷ್ಠ ಹುಲಿ. ಝೋನ್ 6ನ ಮಹಾರಾಣಿ ಇವಳು. ನಮ್ಮ ಗೈಡ್ ಪ್ರಮೋದ್ ಅವಳ ಮರಿಗಳನ್ನ ತೋರಿಸಿದರು. ಜೈ ಮತ್ತು ವೀರು ಎಂದು ನಮ್ಮ ಮುಂದೆಯೇ ನಾಮಕರಣ ಮಾಡಿದರು.

ನಮಗೆಲ್ಲ ಇಲ್ಲೂ ಬೆಲೆ ಇಲ್ಲಾ ಗುರು
3 ವರ್ಷದ ಧಡಿಯ ಹುಲಿಗಳು ಹೇಗೆ ಮಲಗಿದ್ದವು ಅಂದರೆ ಪಕ್ಕದಲ್ಲಿ ಬಾಂಬ್ ಸಿಡಿಸಿದರೂ ಎಚ್ಚರವಾಗದ ಸ್ಥಿತಿ. ನಾವೆಲ್ಲ, "ಮನುಷ್ಯನನ್ನ ಬೇಟೆಯಾಡಿದರೆ ಮತ್ತೆ ಮನುಷ್ಯನನ್ನ ಮಾತ್ರ ಕೊಲ್ಲುತ್ತದಂತೆ, ಅಂದರೆ ನಾವು ಅಷ್ಟು ರುಚಿಯಾಗಿರುತ್ತೇವೆಯಾ?" ಎಂದು ನಮ್ಮ ಅಹಂನ್ನು ಏರಿಸಿಕೊಳ್ಳಲು ಪ್ರಯತ್ನಿಸಿ ಕೇಳಿದಾಗ, ಪ್ರಮೋದ್ ನಕ್ಕು ಅಂದರು "ಎಂಥದ್ದು ಇಲ್ಲ ಮನುಷ್ಯ ಹುಲಿಗಳಿಗೆ ಸುಲಭದ ಬೇಟೆ, ನಮಗೆ ಓಡುವುದಕ್ಕಾಗೋದಿಲ್ಲ, ಕಾಡಿನ ದಾರಿಗಳು ಗೊತ್ತಿರುವುದಿಲ್ಲ ಮತ್ತು ವಾಸನೆಯ ವಿದ್ಯೆಯೂ ಗೊತ್ತಿಲ್ಲ. 10 ನಿಮಿಷದಲ್ಲಿ ತನ್ನ ಕೆಲಸ ಮುಗಿಸಿಬಿಡಬಹುದು ಅಷ್ಟೆ. ಅದರಲ್ಲೇನು ಎಂಬುವ ಕಾರಣಕ್ಕೆ ಮಾತ್ರ ಮನುಷ್ಯನನ್ನ ಬೇಟೆಯಾಡುತ್ತದೆ" ಎಂದಾಗ "ನಮಗೆಲ್ಲ ಇಲ್ಲೂ ಬೆಲೆ ಇಲ್ಲಾ ಗುರು" ಎಂದು ಸುಮ್ಮನೆ ನೋಡುತ್ತಾ ಕೂತೆವು.

ಕಾಡಿನಲ್ಲಿ ಸರ್ಜಿಕಲ್ ಸ್ಟ್ರೈಕ್
ಊಟದ ನಂತರ ಶೋ ಮುಗಿಯುವ ಕ್ಲೈಮ್ಯಾಕ್ಸಿನಂತೆ ನೂರ್ ಟಾರ್ ರಸ್ತೆಯ ಮೇಲೆ ಬಂದು ನಿಂತಳು. ನೂರ್ ಅವಳ ಹೆಸರೇ ಹೇಳಿದಂತೆ ಆ ಕಾಡಿನ ವಜ್ರ. ಯಾರಿಗೂ ಏನೂ ಕೇರ್ ಮಾಡದೇ ಆರಾಮಾಗಿ ತನ್ನ ಪಾಡಿಗೆ ಹೂಗುಟ್ಟುತ್ತಾ ಹೋಗುತ್ತಿದ್ದಳು. ನಮ್ಮ ಗೈಡ್ ಬನ್ನಿ ಇವತ್ತು ಒಂದು ದೊಡ್ಡ ಸರ್ಜಿಕಲ್ ಸ್ಟ್ರೈಕ್ ನೋಡೋಣ ಎಂದು ಜೀಪನ್ನ ಅಡ್ಡಾಡಿಡ್ಡಿ ಓಡಿಸಿದ್ದರು. ಲಾಡ್ಲಿಯ ಮರಿ ಜೈಗೆ ಮತ್ತು ನೂರಿಗೆ ಕದನ. 11 ವರ್ಷದ ಹೆಣ್ಣಿಗೆ 3 ವರ್ಷದ ಗಂಡಿಗೇನು ಜಗಳ ಎಂದು ಅಂದುಕೊಳ್ಳುವುದರಲ್ಲಿಯೇ, ಪ್ರಮೋದ್ ಇಲ್ಲ ಇದು ಜಗಳ ಅಲ್ಲ ಜೈ ನೂರ್ ಜೊತೆಗೆ ಮಕ್ಕಳು ಮಾಡುವ ಆಸೆ ಇಟ್ಟುಕೊಂಡಿದೆ. ಅದಕ್ಕೆ ಕರೆಯುತ್ತಿದೆ. ಆದರೆ ನೂರ್ ಟೆರಿಟೆರಿ ಇಲ್ಲದ ಹುಲಿಯನ್ನ ಹತ್ತಿರವೂ ಸೇರಿಸುವುದಿಲ್ಲ ಎಂದು ಹೇಳುತ್ತಿದ್ದಾಗಲೇ ನೂರ್ ಜೈನನ್ನ ಹೊಡೆದು ಓಡಿಸಿದ್ದಳು. ಅಬ್ಬ ಹೆಣ್ಣು ಹುಲಿಯೇ ಎಂದು ನಾನು ಮನಸ್ಸಿನಲ್ಲಿ ಅಂದುಕೊಂಡೆ. ಇಷ್ಟೆ ಶಕ್ತಿ ಯುಕ್ತಿ ನಮ್ಮ ಹೆಣ್ಣುಮಕ್ಕಳಿಗೂ ಬರಲಿ ಎಂದುಕೊಂಡೆ. 8 ಹುಲಿಗಳನ್ನ ದರ್ಶನ ಮಾಡಿಸಿದ ರಣ ರಣ ರಣಥಂಬೋರಿಗೆ ನಮಿಸುತ್ತಾ ಆ ದಿವಸದ ಸಫಾರಿಗೆ ಗುಡ್ ಬೈ ಹೇಳಿದೆವು. ಎಲ್ಲರ ಕಣ್ಣಲ್ಲಿಯೂ ಮಿಂಚು.

ಜಯನಗರದ ಹುಡುಗಿಯ 100ನೇ ಅಂಕಣ
ಅದೇ ಮಿಂಚನ್ನ ಹೊತ್ತು ಜಯನಗರದ ಹುಡುಗಿ 100ನೇ ವಾರದ ಅಂಕಣವನ್ನ ಬರೆದಿದ್ದಾಳೆ. ನಿಮ್ಮ ಪ್ರೀತಿಯಿಂದಲೇ ಇವೆಲ್ಲಾ ಸಾಧ್ಯವಾದ್ದದ್ದು. ಹುಲಿ ಕಾಣಿಸುವ ಅಚ್ಚರಿಯ ಹಾಗೆ ನೀವೆಲ್ಲಾ ನನಗೆ ಎಷ್ಟೊಂದು ಸಲಹೆಗಳನ್ನ ನೀಡಿದ್ದೀರಿ. ಇನ್ನೂ ನಿಮ್ಮ ಹಾರೈಕೆ ಮತ್ತು ಸಪೋರ್ಟ್ ಇರಲಿ. ಒನ್ಇಂಡಿಯಾ ಕನ್ನಡದ ಎಲ್ಲರಿಗೂ, ಓದುಗರಿಗೂ ಮತ್ತು ಮನೆಯವರಿಗೂ ದೊಡ್ಡ ಧನ್ಯವಾದಗಳು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications