ರಕ್ತದಾನದ ಬಗ್ಗೆ ಇಷ್ಟು ತಿಳಿದ ಮೇಲೆ ನಾವಾಗಿಯೇ ರಕ್ತ ದಾನ ಮಾಡದಿದ್ದರೆ ಹೇಗೆ?
ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಪರಿಚಯದವರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರ್ತಿ ಮಾವ ಕರೆ ಮಾಡಿ "ಮೇಘು ಅಲ್ಲಿ ನಿಮ್ಮ ಮನೆ ಹತ್ತಿರ ಬ್ಲಡ್ ಬ್ಯಾಂಕ್ ಇದ್ಯಲ್ಲ ಅಲ್ಲಿ ಎ ಪಾಸಿಟಿವ್ ರಕ್ತ ಇದ್ಯಾ ನೋಡಿಕೊಂಡು ಬಾ, ನಾ ಅಷ್ಟರಲ್ಲಿ ಬರ್ತೀನಿ" ಅಂತ ಹೇಳಿ ಫೋನ್ ಇಟ್ಟರು.
ಮೊದಲ ಬಾರಿ ನಾನು ಬ್ಲಡ್ ಬ್ಯಾಂಕ್ ಒಳಗೆ ಕಾಲಿಟ್ಟದ್ದು. ಅಲ್ಲಿ ಬೇರೆ ಪ್ರಪಂಚವೇ ಕಾಣಿಸಿತ್ತು. ಹೊರಗಡೆ ರೋಗಿಗಳ ಸಂಬಂಧಿಗಳು, ಅವರಿಗೆ ಬೇಕಾದ ರಕ್ತದ ಗುಂಪು, ಅದರಲ್ಲಿ ಪ್ಲೇಟ್ಲೆಟ್ಸ್ ಬೇಕಾ ? ಎಲ್ಲದರ ಮಾಹಿತಿ ಹಿಡಿದುಕೊಂಡು ನಿಂತಿದ್ದರು. ಕೆಲವೊಮ್ಮೆ ಅದು ಸಿಗ್ತಿತ್ತು, ಕೆಲವೊಮ್ಮೆ ಸಿಗುತ್ತಿರಲಿಲ್ಲ. ಅವರ ಆತಂಕಗಳನ್ನೆಲ್ಲಾ ಒಮ್ಮೆ ನೋಡಿ ಭಯವಾಯಿತು.
ಚಿಕ್ಕ ಹುಡುಗಿ ಎಂದು ನನ್ನನ್ನ ಆ ಸರತಿ ಸಾಲಿನಲ್ಲಿ ಮುಂದೆ ಬಿಟ್ಟರು. ನಾನು ಎಲ್ಲವನ್ನು ಹೇಳಿದ ನಂತರ ಇದೆ, ಆ ಕಡೆ ಹೋಗಿ ತೆಗೆದುಕೊಂಡು ಹೋಗಿ, ರೀಪ್ಲೇಸ್ಮೆಂಟಿಗೆ ನಿಮ್ಮ ಮನೆಯಲ್ಲಿ ದೊಡ್ಡವರಿಗೆ ಹೇಳು ಎಂದರು. ನನಗೇನೂ ಅರ್ಥವಾಗಲಿಲ್ಲ. ಅಷ್ಟೊತ್ತಿಗೇ ಮೂರ್ತಿ ಮಾವ ಬಂದು ಮಾತಾಡಿ ಮತ್ತೊಬ್ಬರನ್ನು ಕರೆದುಕೊಂಡು ಬಂದು ರಕ್ತ ಕೊಡೋದಕ್ಕೆ ಹೇಳಿದ್ದರು.
ನಂದೂ ಎ ಪಾಸಿಟಿವ್ ಎಂದು ಹೇಳಿದಾಗ ಸ್ವಲ್ಪ ದೊಡ್ಡೋಳಾದ ಮೇಲೆ ಕೊಡಬಹುದು. ಆರಾಮಾಗಿರು ಅಂದ್ರು. ಹಾಗೆ ಯಾವತ್ತೋ ಅದರ ಬಗ್ಗೆ ಮರೆತುಹೋಗಿದ್ದೆ. ಕಾಲೇಜಿಗೆ ಬಂದಾಗ ಒಮ್ಮೆ ನಮ್ಮ ಕಾಲೇಜಿರುವ ಮುಖ್ಯರಸ್ತೆಯಲ್ಲಿ ಒಂದು ದೊಡ್ಡ ಆಪಘಾತವಾಗಿತ್ತು. ಅಲ್ಲಿ ಅಂತೂ ಎಲ್ಲರೂ ಅಯ್ಯೋ ಎಷ್ಟೊಂದು ರಕ್ತ ಹೋಗ್ತಿದೆ ಎಂದು ಬಡಬಡಿಸುತ್ತಿದ್ದರು. ಹತ್ತಿರವಿದ್ದ ಆಸ್ಪತ್ರೆಯಲ್ಲಿ ರಕ್ತ ಕೊರತೆಯೇನೆಂದೂ ಜನ ಹೇಳುತ್ತಿದ್ದರು.

ಆರು ತಿಂಗಳಿಗೊಮ್ಮೆ ರಕ್ತದಾನ ಏಕೆ ಮಾಡಲ್ಲ?
ನಮ್ಮ ದೇಶದಲ್ಲಿ ಅವರಾಗವರೇ ಯಾರೂ ಹೋಗಿ ರಕ್ತದಾನ ಮಾಡುವುದಿಲ್ಲ ಎಂಬ ಸತ್ಯವನ್ನ ತಿಳಿದು ಬಹಳ ವಿಚಲಿತಳಾದೆ. ಒಂದು ಯೂನಿಟ್ ಅಂದರೆ ಮೂನ್ನೂರಾ ಐವತ್ತು ಮಿಲೀ ಲೀಟರ್ ರಕ್ತವನ್ನು ಸಹ ಆರು ತಿಂಗಳಿಗೊಮ್ಮೆ ಕೊಡುವ ಮನಸ್ಸು ನಮಗ್ಯಾಕಿಲ್ಲ ಎಂದು ಬೇಜಾರಾಯಿತು.
ಇದರ ಬಗ್ಗೆ ಒಂದಷ್ಟು ಓದುತ್ತಿರುವಾಗ ನಮ್ಮ ದೇಶದ ಒಂದಷ್ಟು ಅಂಕಿ ಅಂಶಗಳು ಗೊತ್ತಾಯಿತು. ಒಂದು ಹೃದಯ ಶಸ್ತ್ರಚಿಕಿತ್ಸೆಗೆ ಆರು ಯೂನಿಟ್ ರಕ್ತ ಬೇಕಾಗುತ್ತದೆ. ವರ್ಷಕ್ಕೆ ನಮ್ಮ ದೇಶದಲ್ಲಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಈ ಶಸ್ತ್ರಚಿಕಿತ್ಸೆಗಳು ಆಗುತ್ತಿರುತ್ತದೆ. ಅಂಗಾಂಗ ಕಸಿಗೆ ನಲವತ್ತು ಯುನಿಟ್ ರಕ್ತ ಬೇಕು, ನಲವತ್ತೊಂಬತ್ತು ಸಾವಿರ ಕಸಿ ಚಿಕಿತ್ಸೆಗಳು ನಡೆಯುತ್ತದೆ.
ಇನ್ನು ಆಕ್ಸಿಡೆಂಟ್ ಗೆ ಐವತ್ತು ಯೂನಿಟ್, ವರ್ಷಕ್ಕಂತೂ ನಲವತ್ತರಿಂದ ಐವತ್ತು ಸಾವಿರ ಅಪಘಾತಗಳಾಗುತ್ತದೆ. ಇನ್ನು ಬೋನ್ ಮ್ಯಾರೊ ಕಸಿಗಂತೂ ಇಪ್ಪತ್ತು ಯೂನಿಟ್ ಬೇಕು. ಅದು ಮೂವತ್ತು ಸಾವಿರ ಕಸಿ ಆಗುತ್ತಿರುತ್ತದೆ. ಸರಿಸುಮಾರು ವರ್ಷಕ್ಕೆ ಅರವತ್ತು ಟ್ಯಾಂಕರ್ ಗಳಷ್ಟು ರಕ್ತದ ಅವಶ್ಯಕತೆ ಭಾರತಕ್ಕಿದೆ.
ದೇಶದಲ್ಲಿ ಒಂದು ಮಿಲಿಯನ್ ಯೂನಿಟಿನಷ್ಟು ರಕ್ತದ ಕೊರತೆಯಿದೆ
ಒಂದು ಟ್ಯಾಂಕರ್ ನಲ್ಲಿ ಹನ್ನೊಂದು ಸಾವಿರ ಲೀಟರಿನಷ್ಟು ರಕ್ತ ಹಿಡಿಸುತ್ತದೆ. ಈಗ ಲೆಕ್ಕ ಗೊತ್ತಾಯಿತಲ್ಲ ಎಷ್ಟು ರಕ್ತದ ಅವಶ್ಯಕತೆಯಿದೆ ಎಂದು. ಹೋದ ವರ್ಷ ಡಬ್ಲ್ಯೂ ಎಚ್ ಒ ಪ್ರಕಾರ ಭಾರತದಲ್ಲಿ ಒಂದು ಮಿಲಿಯನ್ ಯೂನಿಟಿನಷ್ಟು ರಕ್ತದ ಕೊರತೆಯಿದೆ. ನಮ್ಮ ಮನೆಯವರು, ನಮ್ಮ ಗೆಳೆಯರು ಆಸ್ಪತ್ರೆಗೆ ಸೇರಿದಾಗ ಮಾತ್ರ ನಮಗೆ ಇವರ ಕಷ್ಟ ಅರಿವಾಗೋದು, ಇಲ್ಲದಿದ್ದಲ್ಲಿ ನಮ್ಮ ಪಾಡಿಗೆ ಆದಾಗ ನೋಡಿಕೊಳ್ಳೋಣ ಎಂದು ಸುಮ್ಮನಿರುತ್ತೇವೆ.
ರಕ್ತದಾನವನ್ನು ಹದಿನೆಂಟು ವರ್ಷದಿಂದ ಅರವತ್ತೈದು ವರ್ಷದೊಳಗಿರುವ ಆರೋಗ್ಯವಂತರೆಲ್ಲರೂ ಮಾಡಬಹುದು. ನಿಮಗ್ಯಾವ ಕಮ್ಯುನಿಕೇಬಲ್ ರೋಗಗಳಿರಬಾರದು. ನಾರ್ಮಲ್ ಬಿಪಿ ಇರಬೇಕು. ಜ್ವರವಿರಬಾರದು, ಹೆಣ್ಣುಮಕ್ಕಳಿಗೆ ರಕ್ತದಾನ ಮಾಡುವ ಸಮಯದಲ್ಲಿ ಮುಟ್ಟಾಗಿರಬಾರದು. ರಕ್ತ ಬಹಳ ಲಾಸ್ ಆಗುವ ಪರಿಣಾಮ ಆ ಐದು ದಿವಸಗಳು ಮಾಡಬಾರದು.
ಯಾರು ರಕ್ತದಾನ ಮಾಡುವಂತಿಲ್ಲ?
ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗದವರು ಸಹ ರಕ್ತದಾನ ಮಾಡಬಾರದು. ಯಾವುದೇ ಆಂಟಿಬಯಾಟಿಕ್ ಅಥವಾ ಅಲರ್ಜಿ ಮಾತ್ರಗಳನ್ನ ತೆಗೆದುಕೊಳ್ಳುತ್ತಿದ್ದರೆ ಡಾಕ್ಟರಿಗೆ ತಿಳಿಸಿ, ರಕ್ತದಾನ ಮಾಡುವುದು ಒಳಿತು.
ಪ್ರತಿ ಆರು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡಬಹುದು. ನಾನು ಪ್ರತಿ ಹುಟ್ಟುಹಬ್ಬದ ವಾರದಲ್ಲಿಯೂ ರಕ್ತದಾನ ಮಾಡುತ್ತೇನೆ. ಇದನ್ನ ಶುರು ಮಾಡಿ ಹತ್ತು ವರ್ಷವಾಯಿತು. ಒಂದು ಹುಟ್ಟುಹಬ್ಬದ ವಾರದಲ್ಲಿ ನಮ್ಮ ಸ್ನೇಹಿತರೆಲ್ಲ ರಕ್ತದಾನ ಮಾಡುವಾಗ ಯಾರಿಗೋ ಅರ್ಜಿಂಟ್ ರೀಪ್ಲೇಸ್ ಮೆಂಟ್ ಬೇಕಿತ್ತು. ಒಂದು ಅಜ್ಜ ಬಂದು ತೆಗೆದುಕೊಂಡು ಹೋದರು.
ತದ ನಂತರ ಗೆಳತಿಯ ನಂಬರ್ ತೆಗೆದುಕೊಂಡು ಹೋದರು. ಅವಳಿಗೆ ಪ್ರತಿ ವರ್ಷ ಹುಟ್ಟು ಹಬ್ಬದ ಶುಭಾಶಯಗಳನ್ನ ಕಳಿಸುತ್ತಾರೆ. ಅವರ ಹೆಂಡತಿಯ ಪ್ರಾಣ ಉಳಿದಿದ್ದಕ್ಕೆ. ಜೂನ್ ಹದಿನಾಲ್ಕು ವಿಶ್ವ ರಕ್ತದಾನ ದಿವಸ. ಈಗಲಾದರೂ ಮನಸ್ಸು ಮಾಡಿ, ಬೇರೆಯವರಿಗೆ ನಿಮ್ಮ ಸಹಾಯ ಕೇಳದೆಯೇ ಆಗುತ್ತದೆ.
ಹುಟ್ಟುಹಬ್ಬಗಳನ್ನ ಹೀಗೂ ಆಚರಣೆ ಮಾಡೋಣವಲ್ಲವೇ....
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications