2012ಗೆ ’ಎಂಡ ಆಫ್ ದ ವರ್ಲ್ಡ್’ ಆಗಿದ್ದರs?

"ಇವತ್ತ ಇಪ್ಪತ್ತೊಂದ, ಯಾಕ ನಿಂದೇನರ ಇವತ್ತ ಡೇಟ ಇತ್ತೇನ?" ಅಂದೆ.
"ರ್ರಿ, ಹೋಗರಿ ಏನ ಅಸಂಯ್ಯ ಮಾತಾಡ್ತೀರಿ. ಇವತ್ತ ಡಿಸೆಂಬರ್ 21 ಅಲಾ, ಹಂಗೇನರ ಮಾಯನ್ ಕ್ಯಾಲೆಂಡರ ಪ್ರಕಾರ ಹೋದ ವರ್ಷ ಡಿಸೆಂಬರ್ 21ಕ್ಕ ಜಗತ್ತ ಮುಳಗಿ ಹೋಗಿತ್ತಂದರ ಇವತ್ತ ಎಲ್ಲಾರದು ವರ್ಷಾಂತಕ ಇರತಿತ್ತು" ಅಂದ್ಲು.
ಥೂ, ಮುಂಜಾ ಮುಂಜಾನೆ ಎದ್ದ ಏನ ಮಾತಾಡ್ತಾಳೊ ಏನೋ ಸಂಬಂಧ ಇಲ್ಲಾ ಸಾಟಿಲ್ಲಾ, ಸೀದಾ ವರ್ಷಾಂತಕಕ್ಕ ಹೊಂಟಳು ಅಂತ. [ಕಳೆದ ವರ್ಷ ಪ್ರಕಟವಾದ ಲೇಖನ]
"ಲೇ, ಹಂಗ ಜಗತ್ತ ಮುಳಗಿತ್ತಂದರ ಎಲ್ಲಾರೂ ಹೋಗಿರ್ತಿದ್ದರು, ವರ್ಷಾಂತಕಾ ಯಾರ ನಿಮ್ಮಜ್ಜ ಮಾಡತಿದ್ನೇನ?" ಅಂತ ನಾ ಅಂದರ.
"ಅಯ್ಯ, ಒಂದಿಷ್ಟ ನಿಮ್ಮಂಥಾ ಶಾಣ್ಯಾ ಮಂದಿ ಹಡಗದಾಗ ಓಡಿ ಹೋಗಿ ಉಳ್ಕೊಂಡಿರತಿದ್ದರಲಾ, ಅವರ ಮಾಡತಿದ್ದರು" ಅಂದ್ಲು. ಹಕ್ಕ.. ನನಗ ಹಡಗದಾಗ ಜಗಾ ಸೀಟ ಸಿಗ್ತದ ಅಂತ ಇಕಿಗೆ ಗ್ಯಾರಂಟಿ ಇತ್ತ ಅಂತ ಖುಷಿ ಅನಸ್ತು, ಅಷ್ಟರಾಗ...
"ಅಲ್ಲರಿ ಆದರು ಹಂಗ ಸುಮ್ಮನ ವಿಚಾರ ಮಾಡ್ರಿ, 2012ಗೆ ಎಂಡ್ ಆಫ್ ದಿ ವರ್ಲ್ಡ ಆಗಿದ್ದರ ಈ ವರ್ಷ ಏನೇನ ಆಗ್ತಿದ್ದಿಲ್ಲಾ?" ಅಂತ ಅಕಿ ಶುರು ಮಾಡಿದ್ಲು. ಅದ ಏನೋ ಅಂತಾರಲಾ ಉದ್ಯೋಗಿಲ್ಲದ ಶಿಂಪಿಗ್ಯಾ ತನ್ನ ಹೆಂಡ್ತಿ ಬ್ಲೌಸಿನ ಹುಕ್ಕ್ ಕಿತ್ತಿ ಕಿತ್ತಿ ಹಚ್ಚತಿದ್ದನಂತ ಹಂಗ ಇಕಿ ಮುಂಜ ಮುಂಜಾನೆ ಶುರು ಮಾಡಿದ್ಲು.
"ಏನ ಆಗ್ತಿತ್ತ, ನಂಬದ ಹದಿಮೂರನೇ ವರ್ಷದ್ದ ಅನಿವರ್ಸರಿ ಆಗ್ತಿದ್ದಿಲ್ಲಾ.. ನಮ್ಮ ಸಂಸಾರ ಅಲ್ಲಿಗೆ ಆಟಾ-ಗುಟಾ ಜೈ ಆಗ್ತಿತ್ತ" ಅಂತ ನಾ ಅಂದರ...
"ರ್ರಿ, ಹಂಗ ನಾನು ನಿಮ್ಮ ಜೊತಿ ಹಡಗದಾಗ ಬಂದಿರತಿದ್ದೆ... ಅಲ್ಲೇ ಹಡಗದಾಗ ಅನಿವರ್ಸರಿ ಮಾಡ್ಕೊಬಹುದಿತ್ತ ಬಿಡ್ರಿ. ನೀವೇನ ನನ್ನ ಬಿಟ್ಟ ಒಬ್ಬರ ಹೋಗತಿದ್ದರೇನ?" ಅಂದ್ಲು.
ಅಲ್ಲಾ, ಇಕಿನ್ಯಾರ ಹಡಗದಾಗ ಕರಕೊಂಡ ಹೋಗ್ತಿದ್ದರು ಅಂತೇನಿ, ಹಂಗ ನನ್ನs ಕರಕೊಂಡ ಹೋಗ್ತಿದ್ದರೋ ಇಲ್ಲೊ ಅದ ಗ್ಯಾರಂಟಿ ಇದ್ದಿದ್ದಿಲ್ಲಾ. ಏನೋ ಚುರು ಪಾರ ಕನ್ನಡದಾಗ ಬರಿತೇನಿ ಅಂತ ಕರಕೊಂಡ ಹೋದರ ಹೋಗಬೇಕಿತ್ತು. ಹಂತಾದರಾಗ ಇಕಿನು ತನ್ನ ಸೀಟ ರಿಸರ್ವ ಮಾಡೊಕಿದ್ಲ ಕಾಣತದ.
ಅಲ್ಲಾ ಇಗ್ಯಾಕ ಆ ವಿಷಯ ಬಿಡ್ರಿ... ಜಗತ್ತ ಮುಳಗಿಲ್ಲಾ ಅಂದ ಮ್ಯಾಲೆ ಯಾಕ ತಲಿಕೆಡಸಿಗೊಳ್ಳೊದು ಅಂತ ನಾ ಸುಮ್ಮನಾದೆ. ಆದರ ನನ್ನ ಹೆಂಡತಿ ಇನ್ನು ಅದ ಗುಂಗಿನಾಗ ಇದ್ದಳು.
"ಅಲ್ಲರಿ, ನಾ ಹೇಳೋದನ್ನ ನೀವು ಒಂದ ಸ್ವಲ್ಪ ಗ್ಲೊಬಲಿ ಥಿಂಕ್ ಮಾಡರಿ... ಹಂಗ 2012ಕ್ಕ ಜಗತ್ತ ಮುಳಗಿದ್ದಿಲ್ಲಾಂದರ ಸಚಿನ ತೆಂಡುಲ್ಕರ ರಿಟೈರ್ಡ ಆಗತಿದ್ದಿಲ್ಲಾ, ನೆಲ್ಸನ್ ಮಂಡೇಲಾ ಸಾಯಿತಿದ್ದಿದ್ದಿಲ್ಲಾ...vಹಂಗ ವಿಚಾರ ಮಾಡ್ರಿ" ಅಂದ್ಲು.
ಹಕ್ಕ ಗ್ಲೋಬಲಿ ಥಿಂಕ ಮಾಡಬೇಕಂತ, ಲಗ್ನ ಆದಾಗಿಂದ ಅಕಿನ ನಮ್ಮ ಗ್ಲೋಬ್ ಅಂತ ಅಕಿ ಸುತ್ತಹರಿತಿರಬೇಕಾರ ಮತ್ತ ಇನ್ನೇನ ತಲಿ ಗ್ಲೋಬಲ್ ಥಿಂಕ್ ಮಾಡಬೇಕ ಅಂತೇನಿ. ಅಲ್ಲಾ ಹಂಗ ಅಕಿ ಬ್ಯಾರೆದ ವಿಚಾರ ಮಾಡಲಿಕ್ಕೆ ಅಕಿ ಬಿಟ್ಟರ ಹೌದಲ್ಲ?
ನಾ ಮತ್ತು ತಲಿ ಕೆಟ್ಟ, "ನಿನ್ನ ಮಗನ ಮುಂಜವಿ ಮಾಡೋದ ತಪ್ಪತಿತ್ತ, ನಂದ ಒಂದ ಮೂರ ಲಕ್ಷ ರೂಪಾಯಿ ಉಳಿತಿತ್ತು" ಅಂದೆ.
"ಅಯ್ಯ.. ಅದ್ಯಾಕ ಮುಂದಾದರು ಮಾಡಬೇಕಾಗ್ತಿತ್ತ್ ತೊಗೊಳ್ರಿ, ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಮುಂದಿನ ಪೀಳಗಿಗೆ ಉಳಿಬೇಕೊ ಬ್ಯಾಡೊ?" ಅಂತ ನನಗ ಕೇಳಿದ್ಲು.
ಅಲ್ಲಾ, ಏನ ಅಗದಿ ನಾವ ಒಬ್ಬರ ಶಂಕರಾಚಾರ್ಯರ ವಂಶಸ್ಥರು, ನಾವು ದಿನಾ ಶಂಕಾ ಊದಿದರಿಷ್ಟ ನಮ್ಮ ಸಂಪ್ರದಾಯ, ಸಂಸ್ಕೃತಿ ಮುಂದ ವರಿತದ ಅನ್ನೋರಗತೆ ಮಾತಾಡ್ತಾಳ. ನಮ್ಮ ದೋಸ್ತರ ನೋಡಿದ್ರ 'ಲೇ, ಬ್ರಾಹ್ಮರ ಹಾದಿ ಬಿಟ್ಟಿದ್ದಕ್ಕ ಇವತ್ತ ಜಗತ್ತ ಹಳ್ಳಾ ಹಿಡದ ಪ್ರಳಯ ಆಗೊಹಂಗ ಆಗಿದ್ದ ಮಕ್ಕಳ' ಅಂತ ಏನಿಲ್ಲದ ಹೋಯ್ಕಿತಿರ್ತಾರ ಅಂತ ನಾ ಸುಮ್ಮನಾದೆ. ನನ್ನ ಹೆಂಡತಿ ಅಲ್ಲಿಗೆ ಸುಮ್ಮನ ಕೂಡಲಿಲ್ಲಾ ಹಂಗ ಮುಂದವರಿಸಿ...
"ಅಲ್ಲಾ, ಹಂಗ ಜಗತ್ತ ಮುಳಗಿತ್ತಂದರ ನಮ್ಮ ಮಾವನೋರದ ಕಣ್ಣಿಂದ ಆಪರೇಶನ್ ಮಾಡಸೋದ ಉಳಿತಿತ್ತ" ಅಂದ್ಲು. ಅಲ್ಲಾ ನಮ್ಮಪ್ಪಂದ ಹದಿನೈದ ಸಾವಿರ ರೂಪಾಯದ್ದ ಕಣ್ಣಿನ ಆಪರೇಶನ್ ಇಕಿ ಕಣ್ಣಾಗ ಎಷ್ಟ ಒತ್ತತದ ಅಂತೇನಿ.
"ಹಂಗ, ನಿಮ್ಮಪ್ಪಂದ ಅರವತ್ತ ವರ್ಷದ ಶಾಂತಿನು ತಪ್ಪತಿತ್ತ... ನಿಮ್ಮಜ್ಜಂದ ಉದಕ ಶಾಂತಿನು ತಪ್ಪತಿತ್ತ.. ಈಗ ಸಾಕ್ ಮುಗಸ. ಈಗೇನ ಜಗತ್ತ ಮುಳಗಿಲ್ಲಾ, ನಾವೇನ ಹಡಗದಾಗ ಹೊಂಟಿಲ್ಲಾ. ಸುಳ್ಳ ಮುಂಜ ಮುಂಜಾನೆ ಎದ್ದ ತಲಿ ತಿನ್ನಬ್ಯಾಡ. ಹಂಗ ನಿನ್ನ ಕಟಗೊಂಡಾಗಿಂದ ನನ್ನ ಜಗತ್ತ ಮುಳಗೆ ಹೋಗೇದ" ಅಂತ ನಾ ಒಂದ ಉಸರನಾಗ ಬೈದೆ.
"ಅಯ್ಯ, ಅದಕ್ಯಾಕ ಅಷ್ಟ ಸಿಟ್ಟಗಿ ಏಳ್ತೀರಿ...ಏನೋ 2012ಕ್ಕ ವರ್ಲ್ಡ ಎಂಡ ಆಗಿದ್ದರ ಅಂತ ವಿಚಾರ ಮಾಡಿದೆ ಇಷ್ಟ... ಅಲ್ಲಾ ಹಂಗ ಖರೇನ ಜಗತ್ತ ಮುಳಗಿದ್ದರ ನಿಶ್ಚಿಂತ ಇರತಿತ್ತ.... ನಂಗೂ ನಿಮ್ಮನ್ನ ಕಟಗೊಂಡ ಜೀವನ ಬ್ಯಾಸರಾಗಿ ಹೋಗೇದ..... ನಿಮ್ಮ ಕಡೆ ದಿನಾ ಒಂದಕ್ಕೂ ಒದರಿಸಿಗೊಳ್ಳೊದರ ತಪ್ಪತಿತ್ತ.... ಈ ಸುಡಗಾಡ ಸಂಸಾರದಾಗಿನ ಒಣಾ ಜಂಜಾಟರ ತಪ್ಪತಿದ್ವು" ಅಂತ ಮೂಗ ತಿರುವಿ ಬಚ್ಚಲಮನಿಗೆ ಹೋದ್ಲು.
ಅಲ್ಲಾ ಹೆಂತಾ ಸ್ವಾರ್ಥ ಹೆಣ್ಣಮಗಳ ಅಂತೇನಿ, ತನಗ ಜೀವನ ಬ್ಯಾಸರ ಆದರ ಇಡಿ ಜಗತ್ತ ಮುಳಗಲಿ ಅಂತಾಳಲಾ. 'ನಾ ಇರಲಿ ಬಿಡಲಿ ಈ ಜಗತ್ತ ಸದಾ ನಗ-ನಗತಾ ಇರಲಿ, ಗಂಡಾ ಮಕ್ಕಳು ಅವರರ ಆರಾಮ ಇರಲಿ' ಅನ್ನೊ ಭಾವನೆನ ಇಲ್ಲಲಾ ಇಕಿಗೆ ಅಂತ ನಂಗ ಖರೇನ ಕೆಟ್ಟ ಅನಸ್ತ...
ಅಲ್ಲಾ, ಹಂಗ ಖರೇನ ಜಗತ್ತೇನರ ಮುಳಗಿದ್ದರ ಇವತ್ತ ನಾ ಇದನ್ನ ಬರಿತಿದ್ದಿಲ್ಲಾ, ನೀವ ಓದತಿದ್ದಿಲ್ಲಾ ಆ ಮಾತ ಬ್ಯಾರೆ... ಆದರು ನಾವ ಜೀವನದಾಗ ಒಂದೊಂದ ಸರತೆ ಹಂಗ ಆಗಿದ್ದರ- ಹಿಂಗ ಆಗಿದ್ದರ ಅಂತ ಅನ್ಕೋತೇವಿ ಅಲಾ ಹಂಗ ಖರೇನ ಜಗತ್ತ ಮುಳಗಿ ಬಿಟ್ಟಿದ್ದರ ಅಂತ ಅನ್ಕೊಂಡ ನನ್ನ ಹೆಂಡತಿ ಒಂದ ಸ್ವಲ್ಪ ವಿಚಾರ ಮಾಡಿ ಮುಂಜ ಮುಂಜಾನೆ ಎದ್ದ ಇಬ್ಬರದು ಮೂಡ ಹಾಳ ಮಾಡಿದಳು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications