ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ (ಭಾಗ 3)
ಒಂದು ದಿನ ಸೌಂದರ್ಯ ಹಾಗೂ ಮುಪ್ಪು ಆಕಸ್ಮಿಕವಾಗಿ ಭೇಟಿಯಾದರು. ಸೌಂದರ್ಯ ಹೇಳಿತು- ನಾವಿಬ್ಬರೂ ಈಗ ಭೇಟಿಯಾಗಿಯೇ ಇಲ್ಲ!"
***
ನಾವಿಬ್ಬರೂ
ಇನ್ನು
ಎಷ್ಟು
ದಿನಾಂತ
ಹೀಗೇ
ಕೇಳ್ತಾ
ಇರಬೇಕು?"
ಒಂದು
ಕಿವಿ,
ಮತ್ತೊಂದು
ಕಿವಿಗೆ
ಹೇಳಿತು.
ಅದಕ್ಕೆ
ಮತ್ತೊಂದು
ಕಿವಿ
ಹೇಳಿತು
-
ಹಾಗಾದ್ರೆ
ಕಿವುಡರಾಗಿಬಿಡೋಣ."
ಅದಕ್ಕೆ
ಮೊದಲ
ಕಿವಿ
ಹೇಳಿತು
-
ಅದು
ಇನ್ನೂ
ಕಷ್ಟ.
ಎಲ್ಲರೂ
ಹತ್ತಿರ
ಬಂದು
ಜೋರಾಗಿ
ಕಿರುಚುತ್ತಾರೆ.
ಎಂಜಲನ್ನು
ಸಿಡಿಸುತ್ತಾರೆ."
***
ದಾರಿಯಲ್ಲಿ
ಒಬ್ಬ
ನಡೆದು
ಹೋಗುತ್ತಿದ್ದ.
ಅವನ
ಕಿಸೆಯಿಂದ
ಐದು
ರೂ.
ನಾಣ್ಯ
ಕೆಳಗೆ
ಬಿತ್ತು.
ಕಟ್ಟೆಯ
ಮೇಲೆ
ಹಸಿವಿನಿಂದ
ಕುಳಿತ
ವ್ಯಕ್ತಿ
ಅದನ್ನು
ಗಮನಿಸಿದ.
ಆ
ನಾಣ್ಯವನ್ನು
ಎತ್ತಿಕೊಳ್ಳಬೇಕೋ,
ಬೇಡವೋ
ಎಂದು
ಯೋಚಿಸಲಾರಂಭಿಸಿದ.
ಇಂದಿನ
ಅದೃಷ್ಟ
ಏನಿದೆಯೋ
ಏನೋ.
ಯಾಕೆ
5
ರೂಪಾಯಿಯಲ್ಲಿ
ಅದೃಷ್ಟ
ಕಳೆದುಕೊಳ್ಳಬೇಕೆಂದು
ನಾಣ್ಯವನ್ನು
ಎತ್ತಿಕೊಳ್ಳಲಿಲ್ಲ.
ಮತ್ತೊಬ್ಬ
ದಾರಿಹೋಕನಿಗೆ
ಆ
ನಾಣ್ಯ
ಸಿಕ್ಕಿತು.
ಆತ
ಪಕ್ಕದ
ಅಂಗಡಿಯಲ್ಲಿ
ಒಂದು
ಮುಷ್ಟಿ
ಶೇಂಗಾ,
ಎರಡು
ಬಾಳೆಹಣ್ಣು
ಖರೀದಿಸಿ,
ಅಲ್ಲಿಯೇ
ಸೇವಿಸಿ,
ಒಂದು
ಲೋಟ
ನೀರು
ಕುಡಿದು
ಡರ್
ಎಂದು
ತೇಗಿ
ಮುನ್ನಡೆದ.
ಕಟ್ಟೆಯ
ಮೇಲೆ
ಕುಳಿತವನ
ಹಸಿವು
ಇನ್ನಷ್ಟು
ಜಾಸ್ತಿಯಾಗಿತ್ತು.
***
ಮುಂಬಯಿ
ಷೇರು
ಮಾರುಕಟ್ಟೆಯ
ಎತ್ತರದ
ಕಟ್ಟಡದ
ಸಮೀಪ
ಇಬ್ಬರು
ಭಿಕ್ಷುಕರು
ಕುಳಿತಿದ್ದರು.
ಇಬ್ಬರಿಗೂ
ಕೈ
ತುಂಬಾ
ಹಣ
ಮಾಡುವ
ಆಸೆ.
ಒಬ್ಬ
ಭಿಕ್ಷುಕ
ಹೇಳಿದ
-ಷೇರಿನಲ್ಲಿ
ಹಣ
ವಿನಿಯೋಗಿಸಿ
ಒಂದು
ಕೋಟಿ
ರೂ.
ಗಳಿಸಲು
ನಾನೇನು
ಮಾಡಬೇಕು?'
ಅದಕ್ಕೆ
ಮತ್ತೊಬ್ಬ
ಭಿಕ್ಷುಕ
ಹೇಳಿದ
-
ಎರಡು
ಕೋಟಿ
ರೂ.
ಇನ್ವೆಸ್ಟ್
ಮಾಡಬೇಕು."
ಕಥೆಗಳು ಇನ್ನೂ ಮುಗಿದಿಲ್ಲ, ಮುಂದೆ ಓದಿ »