ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ (ಭಾಗ 3)
ಒಂದು ದಿನ ಸೌಂದರ್ಯ ಹಾಗೂ ಮುಪ್ಪು ಆಕಸ್ಮಿಕವಾಗಿ ಭೇಟಿಯಾದರು. ಸೌಂದರ್ಯ ಹೇಳಿತು- ನಾವಿಬ್ಬರೂ ಈಗ ಭೇಟಿಯಾಗಿಯೇ ಇಲ್ಲ!"
***
ನಾವಿಬ್ಬರೂ ಇನ್ನು ಎಷ್ಟು ದಿನಾಂತ ಹೀಗೇ ಕೇಳ್ತಾ ಇರಬೇಕು?" ಒಂದು ಕಿವಿ, ಮತ್ತೊಂದು ಕಿವಿಗೆ ಹೇಳಿತು. ಅದಕ್ಕೆ ಮತ್ತೊಂದು ಕಿವಿ ಹೇಳಿತು - ಹಾಗಾದ್ರೆ ಕಿವುಡರಾಗಿಬಿಡೋಣ." ಅದಕ್ಕೆ ಮೊದಲ ಕಿವಿ ಹೇಳಿತು - ಅದು ಇನ್ನೂ ಕಷ್ಟ. ಎಲ್ಲರೂ ಹತ್ತಿರ ಬಂದು ಜೋರಾಗಿ ಕಿರುಚುತ್ತಾರೆ. ಎಂಜಲನ್ನು ಸಿಡಿಸುತ್ತಾರೆ."
***
ದಾರಿಯಲ್ಲಿ ಒಬ್ಬ ನಡೆದು ಹೋಗುತ್ತಿದ್ದ. ಅವನ ಕಿಸೆಯಿಂದ ಐದು ರೂ. ನಾಣ್ಯ ಕೆಳಗೆ ಬಿತ್ತು. ಕಟ್ಟೆಯ ಮೇಲೆ ಹಸಿವಿನಿಂದ ಕುಳಿತ ವ್ಯಕ್ತಿ ಅದನ್ನು ಗಮನಿಸಿದ. ಆ ನಾಣ್ಯವನ್ನು ಎತ್ತಿಕೊಳ್ಳಬೇಕೋ, ಬೇಡವೋ ಎಂದು ಯೋಚಿಸಲಾರಂಭಿಸಿದ. ಇಂದಿನ ಅದೃಷ್ಟ ಏನಿದೆಯೋ ಏನೋ. ಯಾಕೆ 5 ರೂಪಾಯಿಯಲ್ಲಿ ಅದೃಷ್ಟ ಕಳೆದುಕೊಳ್ಳಬೇಕೆಂದು ನಾಣ್ಯವನ್ನು ಎತ್ತಿಕೊಳ್ಳಲಿಲ್ಲ. ಮತ್ತೊಬ್ಬ ದಾರಿಹೋಕನಿಗೆ ಆ ನಾಣ್ಯ ಸಿಕ್ಕಿತು. ಆತ ಪಕ್ಕದ ಅಂಗಡಿಯಲ್ಲಿ ಒಂದು ಮುಷ್ಟಿ ಶೇಂಗಾ, ಎರಡು ಬಾಳೆಹಣ್ಣು ಖರೀದಿಸಿ, ಅಲ್ಲಿಯೇ ಸೇವಿಸಿ, ಒಂದು ಲೋಟ ನೀರು ಕುಡಿದು ಡರ್ ಎಂದು ತೇಗಿ ಮುನ್ನಡೆದ. ಕಟ್ಟೆಯ ಮೇಲೆ ಕುಳಿತವನ ಹಸಿವು ಇನ್ನಷ್ಟು ಜಾಸ್ತಿಯಾಗಿತ್ತು.
***
ಮುಂಬಯಿ ಷೇರು ಮಾರುಕಟ್ಟೆಯ ಎತ್ತರದ ಕಟ್ಟಡದ ಸಮೀಪ ಇಬ್ಬರು ಭಿಕ್ಷುಕರು ಕುಳಿತಿದ್ದರು. ಇಬ್ಬರಿಗೂ ಕೈ ತುಂಬಾ ಹಣ ಮಾಡುವ ಆಸೆ. ಒಬ್ಬ ಭಿಕ್ಷುಕ ಹೇಳಿದ -ಷೇರಿನಲ್ಲಿ ಹಣ ವಿನಿಯೋಗಿಸಿ ಒಂದು ಕೋಟಿ ರೂ. ಗಳಿಸಲು ನಾನೇನು ಮಾಡಬೇಕು?' ಅದಕ್ಕೆ ಮತ್ತೊಬ್ಬ ಭಿಕ್ಷುಕ ಹೇಳಿದ - ಎರಡು ಕೋಟಿ ರೂ. ಇನ್ವೆಸ್ಟ್ ಮಾಡಬೇಕು."
ಕಥೆಗಳು ಇನ್ನೂ ಮುಗಿದಿಲ್ಲ, ಮುಂದೆ ಓದಿ »
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications