ನೂರೆಂಟು ಕಲರವಗಳ ನಡುವೆ ಹತ್ತೆಂಟು ಆಪ್ತಮಾತು

ಈ ಮಧ್ಯೆ ಸ್ನೇಹಿತ ಓದುಗರೊಬ್ಬರು ಸಭ್ಯಸಾಚಿಗಳಾಗಿರಿ' ಮಾದರಿಯಲ್ಲಿ ಆಪ್ತ ಸಲಹೆ ಕೊಡಬಾರದೇ ಎಂದು ಕೇಳಿದರು. ಅಂದಿನಿಂದ ಮತ್ತೊಂದು scrap bookನ್ನು ಜತೆಯಲ್ಲಿಟ್ಟು ಕೊಂಡೆ. ನೆನಪಾದಾಗಲೆಲ್ಲ ಬರೆದು ಬರೆದು ಅದೂ ತುಂಬಿ ಹೋಯಿತು. ಆ ಪೈಕಿ ಕೆಲವನ್ನು ನಿಮಗೆ ಹೇಳೋಣ ಎನಿಸಿತು. ಅವನ್ನೆಲ್ಲ ನಿಮಗೆ ಕೊಡುತ್ತಿದ್ದೇನೆ. ನಿಮಗೆ ಹೊಳೆದ ಸಂಗತಿಗಳನ್ನು ತಿಳಿಸಿ, ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ. ಎಲ್ಲರೂ ಆ ಒಂದೇ ಸಲಹೆ ಅನುಸರಿಸಿದರೆ ಚೆನ್ನಾಗಿರುತ್ತದೆ ಅಲ್ಲವಾ?
ನಿಮ್ಮ ಮಗ, ಮಗಳ ಮದುವೆಗೆ ವಿಪರೀತ ಖರ್ಚು ಮಾಡಬೇಡಿ. ಆ ಹಣವನ್ನು ಅವರಿಗೇ ಕೊಟ್ಟುಬಿಡಿ. ಜೀವನವಿಡಿ ಅವರು ಸುಖದಿಂದ ಇರುತ್ತಾರೆ. ಮಕ್ಕಳ ಮದುವೆಯನ್ನೂ ನಿಮ್ಮ ಪ್ರತಿಷ್ಠೆ, ಸ್ಥಾನಮಾನ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಡಿ.
*
ಯಾರದೇ ಮನೆಗೆ ಹೋದಾಗ ಡೋರ್ಮ್ಯಾಟ್ ಕ್ಲೀನಾಗಿದ್ದರೆ ಮಾತ್ರ ಕಾಲನ್ನು ಒರೆಸಿಕೊಳ್ಳಿ.
*
ಪ್ರತಿಯೊಬ್ಬ ಮಗುವಿನಿಂದಲೂ ನಾವು ಕಲಿಯುವುದು ಬಹಳ ಇರುತ್ತದೆ. ಮಗುವಿಗೆ ಏನೂ ಗೊತ್ತಿಲ್ಲ ಎಂದು ಭಾವಿಸಬೇಡಿ. ಏನೂ ಹೇಳಿಲ್ಲವೆಂದು ಅಂದುಕೊಳ್ಳಬೇಡಿ, tension-free ಆಗಿ ಇರುವುದು ಹೇಗೆ ಎಂದು ಮಗು ಸದಾ ನಮಗೆ ಹೇಳುತ್ತಿರುತ್ತದೆ.
*
ಅಗ್ನಿಶಾಮಕ ದಳದವರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಜತೆ ಪ್ರೀತಿ, ಗೌರವದಿಂದ ವರ್ತಿಸಿ. ಕಾರಣ ಅವರು ಮಾಡುವ ಕೆಲಸ ನಮ್ಮಿಂದ ಅಸಾಧ್ಯ.
*
ಸಾಧ್ಯವಾದರೆ ನಿಮ್ಮ ಹುಟ್ಟುಹಬ್ಬದ ದಿನದಂದು ಒಂದು ಗಿಡವನ್ನು ನೆಡಿ ಹಾಗೂ ಅದನ್ನು ಚೆನ್ನಾಗಿ ಬೆಳೆಸಿ.
*
ಕೇಕ್ನ ಕೊನೆಯ ಪೀಸ್ನ್ನು ಎಂದೂ ತಿನ್ನಬೇಡಿ. ಅದು ಚೆನ್ನಾಗಿರೊಲ್ಲ ಅಂತಲ್ಲ. ನಿಮ್ಮ ಬಗ್ಗೆ ಅಭಿಪ್ರಾಯ ಚೆನ್ನಾಗಿರೊಲ್ಲ ಅಷ್ಟೆ.
*
ನೋವು ಮತ್ತು ಬೇಸರ ಜೀವನದ ಅವಿಭಾಜ್ಯ ಅಂಗ. ಇವು ಪ್ರತಿದಿನದ ಅನುಭವ. ಆದ್ದರಿಂದ ಇವೆರಡನ್ನೂ ಚೆನ್ನಾಗಿ ನಿಭಾಯಿಸುವುದನ್ನು ಕಲಿತುಕೊಳ್ಳಿ.
*
ಫ್ರಿಜ್ ಇಲ್ಲದೇ ಬದುಕಲು ಸಾಧ್ಯವಾ? ಸಾಧ್ಯವಾಗುವುದಾದರೆ ಪ್ರಯತ್ನಿಸಿ. ಫ್ರಿಜ್ ಆಲಸ್ಯ ಹಾಗೂ ಅನಾರೋಗ್ಯದ ಸಂಕೇತವೇ ಹೊರತು ಪ್ರತಿಷ್ಠೆ, ಶ್ರೀಮಂತಿಕೆಯ ಸಂಕೇತ ಅಲ್ಲ.
*
ಪ್ರಜಾಪ್ರಭುತ್ವ ನಿಮಗೆ ನೀಡಿರುವ ಬಹುದೊಡ್ಡ ಜವಾಬ್ದಾರಿ ಅಂದ್ರೆ ಮತದಾನ. ತಪ್ಪದೇ ಮತದಾನ ಮಾಡಿ.
*
ಗೆದ್ದವರಿಗೂ ಸೋತವರಿಗೂ ಹೆಚ್ಚು ವ್ಯತ್ಯಾಸವಿಲ್ಲ. ಗೆದ್ದವರು ಮಾಡುತ್ತಾರೆ. ಸೋತವರು ಮಾಡುವುದಿಲ್ಲ.
*
ಪ್ರತಿದಿನ ಒಬ್ಬ ವ್ಯಕ್ತಿಯನ್ನಾದರೂ ಪರಿಚಯಿಸಿಕೊಳ್ಳಿ ಹಾಗೂ ಆ ಪರಿಚಯವನ್ನು ಸ್ನೇಹವಾಗಿ ಮುಂದುವರಿಸಿ.
*
ನೀವು ಪ್ರೀತಿಸುವ, ತುಂಬಾ ಇಷ್ಟಪಡುವ ಐದಾರು ಜನರ ಜತೆ ತೀರಾ ಉತ್ತಮ ಸಂಬಂಧ ಇಟ್ಟುಕೊಳ್ಳಿ.
*
ಯಾರಾದರೂ ಹಣದ ಸಹಾಯ ಬಯಸಿದರೆ ಇಲ್ಲವೆನ್ನಬೇಡಿ. ಹಣಕ್ಕಿಂತ ಸ್ನೇಹ ಮುಖ್ಯ.
*
ತಿಂಗಳಲ್ಲಿ ಒಂದು ದಿನವಾದರೂ ಏಕಾಂತದಲ್ಲಿ ಅರ್ಧಗಂಟೆ ಸಾಯಂಕಾಲ ಆಕಾಶವನ್ನು ನೋಡಿ. ನಿಮ್ಮ ಗಾತ್ರವೇನೆಂಬುದು ಗೊತ್ತಾಗುತ್ತದೆ.
*
ಯಾವುದಾದರೂ ಸಂದರ್ಭಕ್ಕೆ ಸರಿಹೊಂದುವ ಐದು ಉತ್ತಮ ಜೋಕುಗಳು ಗೊತ್ತಿರಲಿ. ಸಾಧ್ಯವಾದಷ್ಟರ ಮಟ್ಟಿಗೆ ಅವನ್ನು ಯಾರೂ ಕೇಳಿರಬಾರದು.
*
ಭಾಷಣವನ್ನು ಯಾವಾಗ ಮುಗಿಸಬೇಕು ಎಂಬುದನ್ನು ಪ್ರೇಕ್ಷಕರ ಹಾವಭಾವವೇ ತಿಳಿಸುತ್ತದೆ. ಇನ್ನೂ ತುಸು ಮಾತಾಡಬೇಕಿತ್ತು ಎಂದೆನಿಸುವಾಗಲೇ ಭಾಷಣ ಮುಗಿಸಿ.
*
ಇನ್ನೊಬ್ಬರ ಮುಂದೆ ಮೂಗಿನೊಳಗೆ, ಕಿವಿಯೊಳಗೆ, ಬಾಯೊಳಗೆ ಕೈಹಾಕಬೇಡಿ. ತಲೆಕೆರೆಯಬೇಡಿ.
*
ನಿಮಗೆ ಇಷ್ಟವಾದ ಸಾಲು, ವಾಕ್ಯ, ಉಕ್ತಿ, ಸ್ಲೋಗನ್ ಕಂಡರೆ ಬರೆದಿಟ್ಟುಕೊಳ್ಳಿ. ಅವು ನಿಮ್ಮವೇ ಆಗುತ್ತವೆ.
*
ನಿಮ್ಮ ಬಟ್ಟೆಯನ್ನು ಐದು ವರ್ಷ ಧರಿಸಿಲ್ಲ ಅಂದ್ರೆ ಅವುಗಳನ್ನು ಬಡವರಿಗೆ ಕೊಟ್ಟುಬಿಡಿ.
*
ನೀವು ಡಯಟ್ ಮಾಡುತ್ತಿದ್ದರೆ ಅದನ್ನು ಸಾರ್ವಜನಿಕಗೊಳಿಸಬೇಕಾದ ಅಗತ್ಯವಿಲ್ಲ.
*
ಕನ್ನಡಿಯ ಮುಂದೆ ನಿಂತಾಗ ನಿಮ್ಮ ದೇಹ ನಿಮಗೆ ಅಸಹ್ಯವೆನಿಸಿದರೆ ತಕ್ಷಣ ಬೊಜ್ಜನ್ನು ಇಳಿಸಲು ಕ್ರಮಕೈಗೊಳ್ಳಿ.
*
ಚಪ್ಪಲಿಯನ್ನು ಕಳಚಿದಾಗ ಅಕ್ಕಪಕ್ಕದಲ್ಲಿಯೇ ಇಡಿ. ಯಾಕೆಂದರೆ ನಿಮ್ಮ ಕಾಲು ಒಂದರ ಪಕ್ಕದಲ್ಲಿಯೇ ಒಂದು ಇದೆ ತಾನೆ?
*
ನಿಮಗೆ ಬೇಕಾದವರ ಜನ್ಮದಿನವನ್ನು ನೆನಪಿಟ್ಟುಕೊಳ್ಳಿ. ಆ ದಿನದಂದು ಶುಭಾಶಯ ಹೇಳುವವರಲ್ಲಿ ನೀವೇ ಮೊದಲಿಗರಾಗಿ.
*
ಯಾರ ಹೆಸರನ್ನೇ ಕೇಳಿದಾಗ, ಪರಿಚಯ ಮಾಡಿಕೊಂಡಾಗ ಇನಿಷಿಯಲ್ನ ಪೂರ್ಣ ಅರ್ಥವನ್ನು ತಿಳಿದುಕೊಳ್ಳಿ.
*
ಈಗಾಗಲೇ ಪರಿಚಿತರಾದವರ ಹೆಸರನ್ನು ಪುನಃ ಕೇಳಬೇಡಿ. ಒಮ್ಮೆ ಪರಿಚಿತರಾದವರ ಹೆಸರನ್ನು ಯಾವತ್ತೂ ಮರೆಯಬೇಡಿ.
*
ಮನೆಯಲ್ಲಿ ನಾಯಿ ಅಥವಾ ಬೆಕ್ಕನ್ನು ಸಾಕಿ. ಪ್ರಾಣಿಗಳು ಸಹ ಪ್ರೀತಿಯ ಅಗಾಧತೆಯನ್ನು ಮನವರಿಕೆ ಮಾಡಿಕೊಡುತ್ತವೆ.
*
ಬೇರೆಯವರ ಮನೆಗೆ ಹೋಗುವಾಗ ಅವರಿಗೆ ತಿಳಿಸಿ ಹೋಗಿ. ಏಕಾಏಕಿ ಹೋಗುವುದನ್ನು ಎಲ್ಲರೂ ಇಷ್ಟಪಡಲಿಕ್ಕಿಲ್ಲ.
*
ಸದಾ ಏನಾದರೂ ಹೊಸತನ್ನು ಕಲಿಯುತ್ತಿರಿ. ಕೊಳಲು ನುಡಿಸುವುದಿರಬಹುದು, ರಂಗೋಲಿ ಹಾಕುವುದಿರಬಹುದು.
*
ಐದು ವರ್ಷಕ್ಕೊಮ್ಮೆಯಾದರೂ ಶಾಲಾ-ಕಾಲೇಜಿನ ಸ್ನೇಹಿತರ ಜತೆ ಅರ್ಧದಿನವನ್ನಾದರೂ ಕಳೆಯಿರಿ.
*
ನಿಮ್ಮ ಪ್ರತಿ ಫೋಟೊವನ್ನೂ ಜೋಪಾನವಾಗಿ ಕಾದಿಡಿ. ಅಂಥ ಪ್ರತಿ ಫೋಟೊವೂ ನಿಮ್ಮ ಜೀವನದ ಅಮೂಲ್ಯ ಕ್ಷಣದ ತುಣುಕು.
*
ಒಂದು ಕೈಗೆ ಹೆಚ್ಚೆಂದರೆ ಎರಡು ಉಂಗುರಗಳಿಗಿಂತ ಜಾಸ್ತಿ ಉಂಗುರಗಳನ್ನು ಧರಿಸಬೇಡಿ, ಹತ್ತೂ ಬೆರಳುಗಳಿಗೆ ಧರಿಸುವಷ್ಟು ಸಾಮರ್ಥ್ಯ ನಿಮಗಿರಬಹುದು.
*
ನಿಮ್ಮ ಪರಿಚಿತರ ಮದುವೆಯಲ್ಲಿ ಪಾಲ್ಗೊಳ್ಳಿ. ಹಾಗೆಯೇ ಅವರ ಮನೆಯಲ್ಲಿನ ಶೋಕದಲ್ಲೂ ಭಾಗವಹಿಸಿ.
*
ಪ್ರತಿದಿನ ಕನಿಷ್ಠ ಎರಡಾದರೂ ಹೊಸ ಪದಗಳನ್ನು ಕಲಿಯಿರಿ.
*
ಒಳ್ಳೆಯ ಅತ್ತರು (perfume) ಬಳಸಿ. ನಿಮ್ಮ ಸನಿಹ ಬಂದವರಿಗೆ ಒಂದಷ್ಟು ಆಹ್ಲಾದಕ್ಕೆ ಕಾರಣವಾಗಬಹುದು.
*
ಸದಾ ಉತ್ತಮವಾಗಿ ಡ್ರೆಸ್ ಮಾಡಿ. ಜನರಿಗೆ ನಿಮ್ಮ ಮನಸ್ಸು, ಸ್ವಭಾವ ಗೊತ್ತಿರುವುದಿಲ್ಲ. ನಿಮ್ಮ ಡ್ರೆಸ್ನಿಂದ ಅವರು ಮೊದಲು ನಿಮ್ಮನ್ನು ಅಳೆಯುತ್ತಾರೆ.
*
ಜ್ಯೋತಿಷ್ಯವನ್ನು ಕೇಳಿ, ತಪ್ಪಿಲ್ಲ. ಆದರೆ ಜ್ಯೋತಿಷಿಗಳಿಗೇ ನಿಮ್ಮನ್ನು ಒಪ್ಪಿಸಿಕೊಳ್ಳಬೇಡಿ.
*
ಬೇರೆಯವರು ಎತ್ತಿ ತೋರಿಸುವ ಮುನ್ನವೇ, ನಿಮಗೆ ಖಾತ್ರಿಯಾದರೆ ನಿಮ್ಮ ತಪ್ಪನ್ನು ಒಪ್ಪಿಕೊಂಡುಬಿಡಿ.
*
ನಿಮ್ಮ ಸ್ನೇಹಿತರಿಗೆ ಆಗಾಗ ಏನಾದರೂ ಉಡುಗೊರೆ ಕೊಡುತ್ತಿರಿ. ಅದು ಪುಸ್ತಕವಾಗಿದ್ದರೆ ಒಳ್ಳೆಯದು.
*
ಜನರು ವಿಶೇಷ ಕಾರಣಗಳಿಗಾಗಿ ನಿಮ್ಮನ್ನು ಗುರುತಿಸುವಂಥ ಹವ್ಯಾಸ ಬೆಳೆಸಿಕೊಳ್ಳಿ.
*
ಜನರು ನಿಮ್ಮನ್ನು ಹೇಗೆ ಆದರಿಸಬೇಕೆಂದು ಬಯಸುತ್ತೀರೋ, ಅದೇ ರೀತಿಯಲ್ಲಿ ಇತರರನ್ನೂ ಆದರಿಸಿ ಬರಮಾಡಿಕೊಳ್ಳಿ.
*
ಕಂಡಿದ್ದೆಲ್ಲವನ್ನೂ ಖರೀದಿಸುವ ಬದಲು, ಉತ್ತಮವಾದ ಕೆಲವೇ ಸಾಮಾನುಗಳನ್ನು ಖರೀದಿಸಿ, ನಿಮ್ಮಲ್ಲಿರುವ ಎಲ್ಲ ಸಾಮಾನುಗಳೂ ಉತ್ಕೃಷ್ಟವಾಗಿರಲಿ.
*
ವರ್ಷದಲ್ಲಿ ಕನಿಷ್ಠ ಒಂದು ದೇಶಕ್ಕಾದರೂ ಹೋಗಿ. ನಮ್ಮ ದೇಶದ ಎರಡು ರಾಜ್ಯಗಳಿಗಾದರೂ ಹೋಗಿ ಬನ್ನಿ.
*
ನಿಮ್ಮ ಮನೆ-ಮಂದಿ ಜತೆ ಹೆಚ್ಚು ಸಮಯ ಕಳೆಯಿರಿ.
*
ಪತ್ರ, ಶುಭಾಶಯ ಪತ್ರ ಕಳಿಸಿದಾಗ ಥ್ಯಾಂಕ್ಯು' ಪತ್ರ ಕಳಿಸಲು ಮರೆಯಬೇಡಿ.
*
ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಿ. ನಿಮ್ಮರಕ್ತ ಬೇರೆಯವರಲ್ಲೂ ಹರಿಯಲಿ.
*
ಪತ್ರಿಕೆಗಳಿಗೆ ಬರೆಯಿರಿ. ಕನಿಷ್ಠ ಸಂಪಾದಕರ ಪತ್ರ' ವಿಭಾಗಕ್ಕಾದರೂ ಬರೆಯಿರಿ.
*
ಬೇರೆಯವರ ಗೆಲುವು, ಯಶಸ್ಸು ಕಂಡು ಸಂತಸಪಡುವ, ಅದನ್ನು ನಾಲ್ಕು ಜನರ ಮುಂದೆ ಹೇಳುವ ಗುಣವನ್ನು ಬೆಳೆಸಿಕೊಳ್ಳಿ.
*
ನಿಮ್ಮ ಕೈಗಡಿಯಾರವನ್ನು ಹತ್ತು ನಿಮಿಷ ಮುಂದಕ್ಕಿಟ್ಟುಕೊಳ್ಳಿ. ನೀವು ಸದಾ ಸಮಯ ಪಾಲನೆ ಮಾಡುತ್ತೀರಿ.
*
ಪುಸ್ತಕ ಓದುವ ಮೊದಲು ಬೈಂಡ್ ಹಾಕಿಕೊಳ್ಳಿ. ಪುಸ್ತಕ ಕೊಳೆಯಾಗುವುದಿಲ್ಲ.
*
ಪತ್ರಿಕೆಯಲ್ಲಿ ನಿಮಗೆ ಇಷ್ಟವಾದ ಲೇಖನವನ್ನು ಕಟ್ ಮಾಡಿ ಇಟ್ಟುಕೊಳ್ಳಿ.
*
ಯಾವುದೇ ಫೋಟೊವಿರಲಿ ಅದನ್ನು ಎಸೆಯುವಷ್ಟು ನಿಕೃಷ್ಟವಾಗಿರುವುದಿಲ್ಲ. ಪ್ರತಿ ಫೋಟೊವನ್ನು ಎತ್ತಿಟ್ಟುಕೊಳ್ಳಿ. ಅದು ಮುಂದೆ ಉಪಯೋಗಕ್ಕೆ ಬಂದೀತು.
*
ನಿಮಗೆ ಇಷ್ಟವಾದ ಫೋಟೊಗಳನ್ನು ಎತ್ತಿಟ್ಟುಕೊಳ್ಳಿ. ಸಾಧ್ಯವಾದರೆ ಅವುಗಳಿಗೆ ಫ್ರೇಮ್ ಹಾಕಿಸಿ.
*
ಜನರು ನಿಮ್ಮ ಪ್ರತಿ ನಡೆ- ನುಡಿಯನ್ನು ಗಮನಿಸುತ್ತಾರೆ. ಈ ಎಚ್ಚರದಿಂದಲೇ ವರ್ತಿಸಿ. ಎಚ್ಚರ ತಪ್ಪಬೇಡಿ.
*
ನಿಮಗೆ ಯಾರೇ ಫೋನ್ ಮಾಡಲಿ, ಕಾಲ್ನ್ನು ರಿಟರ್ನ್ ಮಾಡಿ. ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ.
*
ಬಹುವಚನ ಬಳಸುವುದರಿಂದ ನಿಮಗೇನೂ ಖರ್ಚಾಗುವುದಿಲ್ಲ. ಏಕವಚನ ಬಳಸಿದಷ್ಟೇ ಖರ್ಚಾಗುತ್ತದೆ. ಆದ್ದರಿಂದ ಬಹುವಚನವನ್ನೇ ಬಳಸಿ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications