ಕಾರ್ಟೂನ್: ಪ್ರಳಯವಾದ್ರೂ ಸರಿ ಮತ ಚಲಾಯಿಸಿಯೇ ತೀರುತ್ತೇನೆ!
ರಾಜ್ಯದಾದ್ಯಂತ ಇಂದು(ಮೇ 12) ಪ್ರಜಾಪ್ರಭುತ್ವ ಹಬ್ಬ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯೆಲ್ಲ ಮಳೆ ಸುರಿದಿದೆ. ಆದರೂ ಮತದಾರ ಮಾತ್ರ ತನ್ನ ಹಕ್ಕನ್ನು ಮರೆಯಲು ಸಿದ್ಧವಿಲ್ಲ.
ಪ್ರಳಲಯವಾದರೂ ಸರಿಯೇ ನನ್ನ ಓಟು ಹಾಕೋದು ಗ್ಯಾರಂಟಿ ಎಂದು ಮತಗಟ್ಟೆಯ ಕಡೆಗೆ ಹೊರಟಿರುವ ಮತದಾರನ ಬದ್ಧತೆಯನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.












Click it and Unblock the Notifications