ಕಾರ್ಟೂನ್ ನಲ್ಲಿ ನೋಡಿ ರಾಹುಲ್ ರಿಯರ್ ವ್ಯೂ ಮಿರರ್ ವ್ಯಂಗ್ಯ!
ಬೆಂಗಳೂರು, ಫೆಬ್ರವರಿ 12: "ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕನ್ನಡಿಯಲ್ಲಿ ಹಿಂಬದಿಯ ವಾಹನ ನೋಡಿಕೊಂಡು ಗಾಡಿ ಓಡಿಸುತ್ತಾರೆ. ಆದರೆ ಸಿದ್ದರಾಮಯ್ಯ ಮುಂದೆ ನೋಡಿ ಗಾಡಿ ಓಡಿಸುತ್ತಾರೆ. ಅದಕ್ಕಾಗಿಯೇ ಕರ್ನಾಟಕ ಅಭಿವೃದ್ಧಿ ಹೊಂದಿದೆ" ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಯಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಸಿದ್ದರಾಮಯ್ಯ ಸರ್ಕಾರವನ್ನು ನೋಡಿ, ಮೋದಿಯವರು ಆಡಳಿತ ನಡೆಸುವುದು ಹೇಗೆಂದು ಕಲಿಯಬೇಕು ಎಂದರು.

ಈ ಹೇಳಿಕೆಯ ಕುರಿತಂತೆ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಕಾರ್ಟೂನ್ ವೊಂದನ್ನು ರಚಿಸಿದ್ದಾರೆ. ರಾಹುಲ್ ಹೇಳಿದ್ದು ತಪ್ಪು... ಎಂಬ ಶೀರ್ಷಿಕೆಯಯೊಂದಿಗೆ ರಾಹುಲ್ ಹೇಳಿಕೆಗೆ ಉತ್ತರ ನೀಡುತ್ತಿರುವ ಕಾರ್ಟೂನ್ ಇಲ್ಲಿದೆ ನೋಡಿ...












Click it and Unblock the Notifications