ತುಲಾ ರಾಶಿ ವರ್ಷ ಭವಿಷ್ಯ ಮತ್ತು ಪರಿಹಾರೋಪಾಯ
ಹೊಸ ವರ್ಷ 2016 ತುಲಾ ರಾಶಿಯವರಿಗೆ ಅರ್ಧ ಸಿಹಿ ಅರ್ಧ ಕಹಿ ಎನ್ನಬಹುದು. ಏಕೆಂದರೆ ಮೊದಲೇ ಬಳಲಿ ಬೆಂಡಾಗಿರುವ ಈ ರಾಶಿಯವರು ಆಗಸ್ಟ್ ವರೆಗೂ ಸುಮ್ಮನಿದ್ದರೆ ಒಳ್ಳೆಯದು. ಯಾಕೆಂದರೆ 32 ವರ್ಷಗಳ ನಂತರ ಗ್ರಹಕೂಟ ಒಂದೇ ತೆರನಾಗಿ ಬಂದಿದೆ. 32 ವರ್ಷಗಳ ಹಿಂದೆ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಭೂಪಾಲ್ ಅನಿಲ ದುರಂತ ಸಂಭವಿಸಿತ್ತು. ಇರಾನ್ ಇರಾಕ್ ಯುದ್ಧ ನಡೆದಿತ್ತು.
ಅದೇ ರೀತಿ ಈ ಬಾರಿಯೂ ಹಲವಾರು ದುರ್ಘಟನೆಗಳು ಜರುಗುವ ಸಂಭವವಿರುವುದರಿಂದ, ಅಂದರೆ ಸೆಪ್ಟೆಂಬರ್ ತಿಂಗಳಿನವರೆಗಂತೂ ತುಲಾ ರಾಶಿಯವರು ಇದ್ದುದರಲ್ಲಿಯೇ ಸಂಭಾಳಿಸಿಕೊಂಡು ಹೋಗಬೇಕು.
ತುಲಾ ರಾಶಿಯವರು ಹೆಚ್ಚಾಗಿ ನೀಲಿ, ಹಸಿರು, ಬಿಳಿ ಮತ್ತು ತಿಳಿ ಬಣ್ಣದ ವಸ್ತುಗಳನ್ನು ಮತ್ತು ವಸ್ತ್ರಗಳನ್ನು ಈ ವರ್ಷ ಉಪಯೋಗಿಸಿಕೊಳ್ಳಬೇಕು. ಸಾಡೇಸಾತಿಯ ಕೊನೆಯ ಹಂತದಲ್ಲಿರುವುದರಿಂದ ಹೆಚ್ಚಿನ ಜಾಗೃತೆ ವಹಿಸಬೇಕು. ನೈಋತ್ಯ, ಉತ್ತರ ಮತ್ತು ಪೂರ್ವ ದಿಕ್ಕಿಗೆ ಪ್ರಾಶಸ್ತ್ಯ ಕೊಡಬೇಕು. ಕುಂಭ, ಕನ್ಯಾ, ತುಲಾ, ಮಕರ ಮತ್ತು ಮಿಥುನ ರಾಶಿಯವರರೊಂದಿಗೆ ಹೊಂದಾಣಿಕೆ ಇರಬೇಕು. [ಕನ್ಯಾ ರಾಶಿಯ ವರ್ಷಫಲ ಮತ್ತು ಪರಿಹಾರೋಪಾಯ]

ಮಹಾಲಕ್ಷ್ಮೀಯನ್ನು ಪ್ರತಿ ಶುಕ್ರವಾರ ಮತ್ತು ಮಂಗಳವಾರ ಆರಾಧಿಸುತ್ತಲೇ ಇರಬೇಕು. ಶುಕ್ರವಾರ ಮತ್ತು ಬುಧವಾರ ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಬೇಕು. ಅನುಕೂಲವಿದ್ದಾಗ ಅವರೇಕಾಳು, ಅವರೇಬೇಳೆ ಜಂಗಮರಿಗೆ ದಾನ ಕೊಡಬೇಕು. ಅತ್ತಿ (ಔದುಂಬರ) ಗಿಡವನ್ನು ಪೂಜಿಸಬೇಕು. ಸಿಂಹ ಮತ್ತು ಕರ್ಕ ರಾಶಿಯವರೊಂದಿಗೆ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿರಬಾರದು.
ಕಾಲಿನ ನೋವಿಗೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಆಗಸ್ಟ್ ನಂತರ ಶುಭಸಮಯ ಶುರುವಾಗುವುದರಿಂದ ಅಲ್ಲಿಯವರೆಗೂ ಯಾವುದೇ ಮುಖ್ಯವಾದ ಯೋಜನೆಗಳನ್ನು ಮಾಡುವುದು ಬೇಡ. ಮಾಡಲೇಬೇಕು ಎನ್ನುವಂತಿದ್ದರೆ ಸಾಮೇರನ್ನು ಕೇಳಿ ಮಾಡೋದು ಒಳ್ಳೆಯದು.
ಪರಿಹಾರೋಪಾಯಗಳು : ಶಂಭೋಲಿಂಗನ ಆಲಯದಲ್ಲಿ ಸಾಧ್ಯವಾದರೆ ತುಪ್ಪದಾರತಿ ಬೆಳಗಿ. ಶನೈಶ್ಚರನಿಗೆ ಎಳ್ಳೆಣ್ಣೆ ಅರ್ಪಿಸಿ. ರುದ್ರಾಭಿಷೇಕ ಮಾಡಿಸಲು ಮರೆಯಬೇಡಿ. ಹನುಮನಿಗೆ ಆವಾಗಾವಾಗ ಕುಂಕುಮಾರ್ಚನೆ ಮಾಡಿಸಿದರೊಳ್ಳೆಯದು.
ಮುಂದಿನ ಲೇಖನದಲ್ಲಿ : ವೃಶ್ಚಿಕ ರಾಶಿಯವರ ವರ್ಷಫಲ ಮತ್ತು ಪರಿಹಾರೋಪಾಯಗಳು
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications