ಸಾವಿನ ನಂತರ ಮುಂದೇನು? ಆತ್ಮದ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
Recommended Video

ಸಾವಿನ ನಂತರ ಮುಂದೇನು? ಈ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಆತ್ಮ ಹಾಗೂ ದೇಹ ಎರಡೂ ಬೇರೆ-ಬೇರೆ ಮತ್ತು ಆತ್ಮಕ್ಕೆ ಅಸ್ತಿತ್ವ ಇದೆ ಎಂದು ಒಪ್ಪಿದವರಿಗೆ ಈ ಬಗ್ಗೆ ತಮ್ಮದೇ ಆದ ಕೆಲ ನಂಬಿಕೆಗಳಿರುತ್ತವೆ. ಆ ಪ್ರಕಾರವೇ ಹೇಳಬೇಕು ಅಂದರೆ, ದೇಹಕ್ಕೆ ಆತ್ಮ ಹಾಗೂ ಆತ್ಮಕ್ಕೆ ದೇಹ ಬೇಕೇಬೇಕು. ಇದು ಪರಸ್ಪರ ಅವಲಂಬನೆ.
ಒಂದು ಸಲ ದೇಹದಿಂದ ಜೀವ ಹೋದ ನಂತರ ಏನಾಗುತ್ತದೆ ಎಂಬುದೇ ಮುಖ್ಯ ಪ್ರಶ್ನೆ. ದೇಹವನ್ನು ಕಳೆದುಕೊಂಡ ಆತ್ಮ ತನ್ನ ಪ್ರಯಾಣ ಆರಂಭಿಸಬೇಕಾಗುತ್ತದೆ. ಈ ಭೂಮಿ ಮೇಲೆ ಬರುವುದಕ್ಕೆ ಕಾರಣವಾದ ಕೆಲಸಗಳನ್ನೆಲ್ಲ ಮುಗಿಸಿದ ತೃಪ್ತಿ ಇರುವ ಆತ್ಮಗಳು ಅವುಗಳ ಪಾಪ ಹಾಗೂ ಪುಣ್ಯಗಳ ಲೆಕ್ಕಾಚಾರದಲ್ಲಿ ಸ್ವರ್ಗ ಅಥವಾ ನರಕವನ್ನು ಸೇರುತ್ತವೆ.
ಇಲ್ಲ, ಈ ಭೂಮಿಯ ಮೇಲಿನ ಯಾವುದಾದರೂ ವಿಷಯ- ವಸ್ತುಗಳ ಮೇಲೆ ಮೋಹ- ಆಸೆ ಬೆಳೆಸಿಕೊಂಡ ಅತೃಪ್ತ ಆತ್ಮಗಳು ಇಲ್ಲಿಂದ ಪ್ರಯಾಣವನ್ನು ಮಾಡುವುದೇ ಇಲ್ಲ. ಆತ್ಮಕ್ಕೆ ಯಾವುದೇ ಹಾನಿ ಮಾಡಲು ಆಗಲ್ಲ ಎಂಬ ನಂಬಿಕೆ ಇದ್ದರೂ ಸ್ವರ್ಗ -ನರಕಗಳಲ್ಲಿ ಆಯಾ ಜೀವದ ಪಾಪ- ಪುಣ್ಯಗಳಿಗೆ ತಕ್ಕಂತೆ ಸುಖ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಸ್ವರ್ಗ- ನರಕ ಪ್ರಾಪ್ತಿ
ಕೆಲವು ಆತ್ಮಗಳು ಭೂಮಿ ಮೇಲೆ ಮಾಡಬೇಕಾದ ಕೆಲಸಗಳು ಬಾಕಿ ಇರುವುದರಿಂದ ಮತ್ತೆ ಮತ್ತೆ ಹುಟ್ಟುತ್ತವೆ. ಅಂಥ ಕೆಲಸಗಳನ್ನು ಜವಾಬ್ದಾರಿ ಅಥವಾ ಲೋಕೋದ್ಧಾರ ಹೀಗೆ ಕೂಡ ಕರೆಯಬಹುದು. ಸತ್ಕಾರ್ಯ, ಸತ್ಕರ್ಮ, ಸದ್ವಿಚಾರದ ಚಿಂತನೆ ಮಾಡುವ ಜೀವದ ಆತ್ಮಗಳು ಸದ್ಗತಿಯನ್ನು ಹೊಂದಿದರೆ, ಇನ್ನೊಬ್ಬರಿಗೆ ತೊಂದರೆ ಕೊಟ್ಟು, ತಮ್ಮ ಲಾಭದ ಬಗ್ಗೆಯೇ ಯೋಚಿಸುವ ದುಷ್ಟ ಜೀವದ ಆತ್ಮಗಳು ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತವೆ.

ಮೋಕ್ಷ ಪ್ರಾಪ್ತಿಗೆ ಯಾರ ಅನುಗ್ರಹ?
ಜ್ಞಾನಿಗಳು ಹಾಗೂ ಆತ್ಮದ ಬಗ್ಗೆ ಜ್ಞಾನ ಹೊಂದಿದವರು ಮೋಕ್ಷದ ಬಗ್ಗೆ ಚಿಂತಿಸುತ್ತಾರೆ. ಮೋಕ್ಷ ಅಂದರೆ ಹುಟ್ಟು ಹಾಗೂ ಸಾವುಗಳಿಲ್ಲದ ಸ್ಥಿತಿ. ಆ ಪರಮಾತ್ಮನಲ್ಲಿ ಐಕ್ಯವಾಗುವಂಥ ಆ ಸ್ಥಿತಿಯನ್ನು ಪಡೆಯುವುದು ಅಷ್ಟು ಸುಲಭವೂ ಅಲ್ಲ. ಮೋಕ್ಷವನ್ನು ದಯಪಾಲಿಸುವ ಶಕ್ತಿ ಇರುವುದು ಆ ಮಹಾ ವಿಷ್ಣುವಿಗೆ ಮಾತ್ರ ಎಂದು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ.

ಬಾಕಿ ಕೆಲಸ ಮುಗಿಸಲು ಮತ್ತೆ ಜನ್ಮ
ಇನ್ನು ಒಂದು ಜನ್ಮದಲ್ಲಿ ಯಾವುದಾದರೂ ನಿರ್ದಿಷ್ಟ ಸಾಧನೆಯ ಹಾದಿಯಲ್ಲಿ ಸಾಗಿ, ಬಹಳ ಪ್ರಯತ್ನದ ನಂತರವೂ ಆ ಸಾಧನೆ ಮಾಡಲಾಗಿದೆ ತೀರಿಕೊಂಡವರಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಈ ಭೂಮಿಯ ಮೇಲೆ ಮತ್ತೆ ಹುಟ್ಟಿ ಹಿಂದಿನ ಜನ್ಮದಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರೈಸಬಹುದು.

ದೇಹ- ಜೀವಕ್ಕೆ ತೊಂದರೆ ಕೊಟ್ಟವರ ವಿರುದ್ಧ ಪ್ರತೀಕಾರ
ಇನ್ನು ಕೆಲವು ಆತ್ಮಗಳು ತಾನು ಇದ್ದ ದೇಹ ಹಾಗೂ ಜೀವಕ್ಕೆ ತೊಂದರೆ ನೀಡಿದ್ದ ವ್ಯಕ್ತಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಉದಾಹರಣೆ ಸಹ ಉಂಟು. ಅಂಥದ್ದನ್ನು ದೆವ್ವ- ಭೂತ ಕಾಟ ಎಂದು ಹೇಳುವವರೂ ಇದ್ದಾರೆ. ಆದರೆ ಆ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಬಗೆ ಹೀಗೆ. ಮತ್ತೊಬ್ಬರಿಗೆ ಹಿಂಸೆ ಕೊಡುವ ಮುನ್ನ ಇವೆಲ್ಲವನ್ನೂ ಯೋಚಿಸಿ, ಆಗ ನಮ್ಮಿಂದ ಆಗಬಹುದಾದ ತಪ್ಪು ಕೆಲಸಗಳು ತಡೆಯಲು ಸಾಧ್ಯವಿದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications