ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ಕುಂಭ ರಾಶಿಯವರಿಗೆ ಈ ಯುಗಾದಿ ಸಮಯವು ಸಮವಾಗಿದೆ ಎಂದೇ ಹೇಳಬಹುದು. ಒಂಥರಾ ಜೀವನ ನಿಂತಲ್ಲೇ ನಿಂತಂಗಿರುತ್ತದೆ. ಏಳ್ಗೆಗೇನೂ ಇಲ್ಲಾ, ಇಳಿಕೇನೂ ಇಲ್ಲಾ. ಹೀಗಾಗಿ ಈ ವರ್ಷ ಅಂಥಾದ್ದೇನೂ ನಿರೀಕ್ಷೆ ಮಾಡದೇ ಇದ್ದುದರಲ್ಲಿಯೇ ಜಮ್ಮಂಗೆ ಇದ್ದರಾಯಿತು ಈ ರಾಶಿಯವರು. ಗಳಿಕೆ ಎಷ್ಟಿರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಖರ್ಚು ಇರುತ್ತದೆ. ಹೀಗಾಗಿ ಗಳಿಕೆಗೂ ಹೆದರಬಾರದು ಖರ್ಚು ಮಾಡಲು ಹೆದರಬಾರದು.
ಈ ರಾಶಿಯ ಧನಿಷ್ಠಾ ನಕ್ಷತ್ರದ ಕೊನೆಯ ಎರಡು ಚರಣದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಇದ್ದುದರಲ್ಲಿಯೇ ಸಮಾಧಾನ ಪಟ್ಟುಕೊಳ್ಳುವಂತಿರುತ್ತದೆ. ನಂತರದ 8 ತಿಂಗಳು ಹಾಗೂ ಹೀಗೂ ಜೀವನ ಸಾಗಿಸಲೇಬೇಕಲ್ಲ ಎಂದುಕೊಂಡು ಜೀವನದ ಬಂಡಿ ಸಾಗಿಸಬೇಕಾಗುತ್ತದೆ.
ಶತತಾರಾ ನಕ್ಷತ್ರದವರು ಮಾತ್ರ ವರ್ಷದ ಮೊದಲ ನಾಲ್ಕು ತಿಂಗಳು ಸುಖಕರವಾಗಿರುವ ಸಂತಸವಿರುತ್ತದೆ. ಆದರೆ ಕೊನೆಯ ಎಂಟು ತಿಂಗಳ ಮಾತ್ರ ಜೀವನವೇ ನಿಂತಂತಾಗುತ್ತದೆ. ಇನ್ನು ಪೂರ್ವಾಭಾದ್ರಪದ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಸೂಪರ್ ಎನಿಸುವಂತೆ ಜೀವನದಲ್ಲಿ ಯಶಸ್ಸು ಕಾಣಬಹುದು. [ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಹೀಗಾಗಿ ಈ ಸಮಯದಲ್ಲಿಯೇ ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಬೇಕು. ಮೇಲಾಗಿ ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡು ಕಾರ್ಯರೂಪಕ್ಕೆ ತಂದುಕೊಂಡು ಸೆಟಲ್ ಆಗಿ ಬಿಡಬೇಕು. ಯಾಕೆಂದರೆ ನಂತರದ ನಾಲ್ಕು ತಿಂಗಳು ಸ್ವಲ್ಪ ಇಳಿಕೆ ಎನಿಸಿದರೂ ಕೊನೆಯ ನಾಲ್ಕು ತಿಂಗಳು ಮತ್ತೆ ಜೀವನ ಸರಿಹಾದಿಗೆ ಬರುತ್ತದೆ. ಒಟ್ಟಿನಲ್ಲಿ ಒಂದೇ ವರ್ಷದಲ್ಲಿ ಏರಿಳಿತಗಳನ್ನು ನೋಡಿಕೊಳ್ಳುವ ಸಮಯವಿದು. [ಅತಿಯಾದ ಸಿಹಿಯೂ ಬಾಳಲ್ಲಿ ಕಹಿಯಾಗಬಲ್ಲದು]
ಆಗಸ್ಟ್ ವರೆಗೂ ಗುರುಬಲ ಸಾಕಷ್ಟಿರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಯಾಕೆಂದರೆ ಆಗಸ್ಟ್ ನಿಂದ ಗುರುಬಲ ಹೊರಟು ಹೋಗುವುದರಿಂದ ಉಳಿದ ಕೆಲವೇ ದಿನಗಳಲ್ಲಿ ಶುಭ ಕಾರ್ಯಕ್ಕೆ ಚಾಲನೆ ನೀಡಬಹುದು. ಆದರೆ ಜನವರಿಯಿಂದ ಶನಿಬಲ ಬರುವುದರಿಂದ ಆ ಸಮಯದಲ್ಲಿ ಉನ್ನತ ಮಟ್ಟದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಶೇ.70ರಷ್ಟು ಶುಭಫಲವಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications