ವಿಳಂಬಿ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರ ಆದಾಯ, ಆರೋಗ್ಯ ಹೇಗಿದೆ?
ಈ ದಿನದ ಲೇಖನದಲ್ಲಿ ವೃಶ್ಚಿಕ ರಾಶಿಯವರ ಯುಗಾದಿ ಫಲವನ್ನು ನೋಡೋಣ. ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧ ನಕ್ಷತ್ರ ಒಂದು, ಎರಡು, ಮೂರು, ನಾಲ್ಕನೇ ಪಾದ ಹಾಗೂ ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದಗಳು ಸೇರಿ ವೃಶ್ಚಿಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ.
ವಿಳಂಬಿ ನಾಮ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರಿಗೆ ಆದಾಯ 2 ಇದ್ದರೆ, ವ್ಯಯ 14 ಇದೆ. ಆರೋಗ್ಯ 3 ಹಾಗೂ ಅನಾರೋಗ್ಯ 0 ಇದೆ. ನಿಮಗೆ ಸಿಗುವ ಮನ್ನಣೆ- ಗೌರವದ ಪ್ರಮಾಣ 5 ಇದ್ದರೆ, ಅವಮಾನದ ಪ್ರಮಾಣ 6 ಇದೆ. ಇನ್ನು ಸುಖ 3, ದುಃಖ 3 ಇದೆ. ಇನ್ನು ನಾಲ್ಕು ತಿಂಗಳಂತೆ ಮೂರು ಭಾಗ ಮಾಡಿ, ಕಂದಾಯ ಫಲದ ಕಡೆ ನೋಡೋಣ.
ವಿಶಾಖ ನಕ್ಷತ್ರಕ್ಕೆ 7 0 2, ಅನೂರಾಧ ನಕ್ಷತ್ರಕ್ಕೆ 2 1 0, ಜ್ಯೇಷ್ಠಾ ನಕ್ಷತ್ರಕ್ಕೆ 5 2 3 ಇದೆ. ವಿಶಾಖ, ಅನೂರಾಧ ಹಾಗೂ ಜ್ಯೇಷ್ಠಾ ನಕ್ಷತ್ರದವರಿಗೆ ಸಂವತ್ಸರದ ಆದಿಯ ಮೊದಲ ನಾಲ್ಕು ತಿಂಗಳು ಆದಾಯದ ದೃಷ್ಟಿಯಿಂದ ಅಡ್ಡಿ ಇಲ್ಲ. ಆದರೆ, ವಿಶಾಖ ಮತ್ತು ಅನೂರಾಧ ನಕ್ಷತ್ರದರಿಗೆ ಉಳಿದ ಎಂಟು ತಿಂಗಳು ಆದಾಯ ವಿಚಾರದಲ್ಲಿ ಹೆಚ್ಚು ಆಶಾದಾಯಕ ಆಗಿಲ್ಲ. ಇದ್ದುದರಲ್ಲಿ ಜ್ಯೇಷ್ಠಾ ನಕ್ಷತ್ರದವರಿಗೆ ಸ್ವಲ್ಪ ಪರವಾಗಿಲ್ಲ.

ಸದ್ಯದ ಗೋಚಾರ ಫಲ
ಗೋಚಾರ ವಿಚಾರದಲ್ಲಿ ಗಮನಿಸಿದಾಗ ವೃಶ್ಚಿಕ ರಾಶಿಯವರಿಗೆ ಈಗ ಸಾಡೇಸಾತ್ ನಡೆಯುತ್ತಿದೆ. ಹನ್ನೆರಡನೇ ಮನೆಯಲ್ಲಿ ಗುರು ಇದ್ದಾನೆ, ಮುಂದಿನ ಅಕ್ಟೋಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ನಿಮ್ಮ ಜನ್ಮ ರಾಶಿಗೆ ಪ್ರವೇಶ ಆಗುತ್ತದೆ. ಇನ್ನು ಶನಿ ಎರಡನೇ ಮನೆಯಲ್ಲಿದ್ದು, ರಾಹು ಮೂರನೇ ಸ್ಥಾನ, ಕೇತು ಒಂಬತ್ತನೇ ಸ್ಥಾನದಲ್ಲಿ ಸ್ಥಿತವಾಗಿದೆ.

ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ
ಹನ್ನೆರಡನೇ ಮನೆಯ ಗುರು, ಎರಡನೇ ಸ್ಥಾನದಲ್ಲಿರುವ ಶನಿ ಎರಡೂ ಗ್ರಹವೂ ಖರ್ಚನ್ನೇ ಸೂಚಿಸುತ್ತಿವೆ. ಮುಖ್ಯವಾಗಿ ಕುಟುಂಬದವರ ಆರೋಗ್ಯ ಅಥವಾ ನಿಮ್ಮದೇ ಆರೋಗ್ಯದಲ್ಲಿ ಸಮಸ್ಯೆಯಾಗಿ ಖರ್ಚು- ವೆಚ್ಚ ಹೆಚ್ಚಾಗುತ್ತದೆ. ಮಾಡಿಟ್ಟುಕೊಂಡಿದ್ದ ಲೆಕ್ಕಾಚಾರವೆಲ್ಲ ಏರುಪೇರಾಗಿ ಖರ್ಚು ಹೆಚ್ಚಾಗಿ, ಸಾಲ ಮಾಡುವ ಸ್ಥಿತಿ ಏರ್ಪಡುತ್ತದೆ.

ಮಧುಮೇಹ, ರಕ್ತದೊತ್ತಡ ಇರುವವರು ಎಚ್ಚರ
ಕೋರ್ಟ್-ಕಚೇರಿ ವ್ಯಾಜ್ಯಗಳಿಗೆ ಹೊಸದಾಗಿ ಹಾಕಬೇಡಿ. ಯಾರದೋ ಮಾತು ನಂಬಿ ವಿದೇಶ ಪ್ರಯಾಣದ ಸಲುವಾಗಿ ಖರ್ಚು ಮಾಡದಿರುವುದು ಒಳಿತು. ಮದುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ಔಷಧ-ಮಾತ್ರೆ, ವೈದ್ಯರ ನಿಯಮಿತ ಭೇಟಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಮದ್ಯ- ಸಿಗರೇಟಿನ ಚಟ ವಿಪರೀತ ಇರುವವರು ಆರೋಗ್ಯದ ಬಗ್ಗೆ ಗಮನ ಕೊಡಿ.

ವಿವೇಚನೆ ಬಳಸಿ ಖರ್ಚು ಮಾಡಿ
ಒಳ್ಳೆ ದಶಾ-ಭುಕ್ತಿ ನಡೆಯುತ್ತಿರುವವರಿದ್ದರೆ ಶುಭ ಕಾರ್ಯಗಳಿಗೆ, ಅಭರಣ-ಮನೆ ಖರೀದಿಗೆ ಹಣ ಸಾಲ ಮಾಡಬೇಕಾಗಿ ಬರುತ್ತದೆ. ಈ ಸಂವತ್ಸರದ ಒಟ್ಟಾರೆ ಫಲ ಏನೆಂದರೆ, ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಿನ ಪ್ರಮಾಣದಲ್ಲಿ ತೋರುತ್ತಿದೆ. ಆದ್ದರಿಂದ ಸ್ವಲ್ಪ ವಿವೇಚನೆ ಬಳಸಿ, ಖರ್ಚು ಮಾಡಿ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications