ವೃಶ್ಚಿಕ ರಾಶಿ: ಕೆಲಸದ ಮಧ್ಯೆ ಕಳೆದುಹೋಗಿ ನೆಮ್ಮದಿ ಮರೀಬೇಡಿ
ಈ ತಿಂಗಳು ಚುರುಕಾಗಿ ಇರುತ್ತೀರಿ. ಬಾಕಿಯಿರುವ ಕೆಲಸಗಳನ್ನು ಪುರ್ತಿ ಮಾಡುವುದರಲ್ಲಿ ಕಳೆದುಹೋಗ್ತೀರಿ. ಕೆಲಸಗಳೇ ಜಾಸ್ತಿಯಾಗಿ ಮಾನಸಿಕ ನೆಮ್ಮದಿ ಹೋಯ್ತಲ್ಲ ಎಂದು ಚಿಂತಿಸುವಂತಾಗುತ್ತದೆ. ಈಗ ನೀವು ಪಡುವ ಶ್ರಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿಬಿಡುವುದಿಲ್ಲ. ಆದರೆ ಭವಿಷ್ಯದಲ್ಲಿ ಅನುಕೂಲವಾಗುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.
ಆರ್ಥಿಕ ಸ್ಥಿತಿ ಗತಿ ಆರಕ್ಕೇರದೆ ಮೂರಕ್ಕಿಳಿಯದಂತೆ ಇರುತ್ತದೆ. ಆದರೆ ನಿಮ್ಮ ಇಮೇಜ್ ಬಗ್ಗೆ ಸ್ವಲ್ಪ ಎಚ್ಚರವಿರಲಿ. ತಿಂಗಳ ಮೊದಲ ಹದಿನೈದು ದಿನ ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ನಿಮ್ಮ ಮೇಲೆ ಕೆಲವು ಅಪವಾದಗಳು ಬರಬಹುದು. ಸೆ.16ರ ನಂತರ ಒಂದಿಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.[ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ]

ವೃತ್ತಿ: ಮೊದಲೇ ತಿಳಿಸಿದ ಹಾಗೆ ವಿಪರೀತ ಕೆಲಸ ಇರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಪ್ರವಾಸ ಮಾಡಬೇಕಾಗುತ್ತದೆ. ಸೀನಿಯರ್ಸ್, ಬಾಸ್ ಜತೆಗೆ ಈ ಹಿಂದೆ ಸಂಬಂಧ ಹಳಸಿದ್ದರೆ, ಅದಕ್ಕೆ ಮುಲಾಮು ಹಚ್ಚುವ ಕೆಲಸವಾಗುತ್ತದೆ. ನಿಮಗೆ ತುಂಬ ಅಗತ್ಯ ಬಿದ್ದ ಸಂದರ್ಭದಲ್ಲಿ ಸಹೋದ್ಯೋಗಿಗಳು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ. ಈ ತಿಂಗಳು ನಿಮಗೆ ಪ್ರೋತ್ಸಾಹದ ಅಗತ್ಯ ಕಂಡುಬರುತ್ತದೆ.
ಪ್ರೀತಿ-ಪ್ರೇಮ, ವಿವಾಹ: ಪ್ರೇಮ ವಿಚಾರಗಳು ಸಮಾಧಾನಕರವಾಗಿ ಸಾಗುತ್ತವೆ. ಕಿತ್ತಾಡಿಕೊಂಡಿದ್ದ ಪ್ರೇಮಿಗಳ ಮಧ್ಯೆ ಮತ್ತೆ ಪ್ರೀತಿ ಚಿಗುರೊಡೆಯುತ್ತದೆ. ಪ್ರೇಮಿಗಳು ಒಟ್ಟಿಗೆ ಸಮಯ ಕಳೆಯುತ್ತೀರಿ, ಸಣ್ಣದೊಂದು ಪ್ರವಾಸ ಮಾಡಿಬರುತ್ತೀರಿ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಕಾಲವಿದು. ಅದರೆ ವಿವಾಹಿತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೆ.18ರ ನಂತರ ಪತಿ ಅಥವಾ ಪತ್ನಿಯ ಆರೋಗ್ಯ ಕ್ಷೀಣಿಸಿ, ಚಿಂತೆಗೆ ಕಾರಣವಾಗುತ್ತದೆ.[ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಇದು ಉತ್ತಮ ಕಾಲ. ಉತ್ಸಾಹ, ಸಂಭ್ರಮದಿಂದ ಪುಟಿಯುವುದನ್ನು ನೋಡಬಹುದು. ದೈಹಿಕ, ಮಾನಸಿಕ ಚಟುವಟಿಕೆಯಲ್ಲಿ ಚುರುಕು ಕಾಣಿಸುತ್ತದೆ. ಏಕಾಗ್ರತೆ, ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಉತ್ಸಾಹ ತೋರುತ್ತಾರೆ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications