ವೃಶ್ಚಿಕ : ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ
ಪುರುಷರು: ಈ ತಿಂಗಳ ಮೊದಲರೆಡು ವಾರಗಳಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ಬಡ್ತಿ ಸಹ ಸಿಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಬೇಕಿದ್ದಲ್ಲಿ ಈ ತಿಂಗಳ ಮೊದಲ ಎರಡು ವಾರಗಳ ಒಳಗೆ ಮುಗಿಸಿಕೊಳ್ಳಬೇಕು.
ಸ್ಥಳಾಂತರದ ಸಾಧ್ಯತೆಗಳು ಸಹ ಕಾಣುತ್ತಿವೆ. ಆರ್ಥಿಕವಾಗಿ ಸಮಾಧಾನಕರವಾಗಿ ಇರುತ್ತದೆ. ವ್ಯಾಪಾರ ಮಾಡುವವರಿಗೆ ದುಡ್ಡಿನ ಒಳಹರಿವು ಅಂದುಕೊಂಡ ಪ್ರಮಾಣಕ್ಕಿಂತ ಹೆಚ್ಚು ಬರುತ್ತದೆ. ಇನ್ನು ತಿಂಗಳ ಮಧ್ಯ ಹಾಗೂ ಕೊನೆಯ ಭಾಗಕ್ಕೆ ಸರಿದಂತೆ ಭೂಮಿ ಖರೀದಿಗಾಗಿ ಕೈ ಹಾಕಿ ಕೆಲಸ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.

ಅದರಲ್ಲಿಯೂ ನೀವು ಖರೀದಿಸಬೇಕು ಎಂದು ಕೈ ಹಾಕಿದ ಜಮೀನಿನ ಕಾಗದದ- ಪತ್ರ ಸರಿ ಇಲ್ಲದೆ ಸಮಸ್ಯೆ ಆಗುತ್ತದೆ. ನಿಮಗೆ ತಪ್ಪು ಮಾಹಿತಿ ಕೊಡಲಾಗುತ್ತದೆ, ಎಚ್ಚರ.
ಸ್ತ್ರೀಯರು: ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ. ಬಹಳ ಮುಖ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸುತ್ತದೆ. ಈ ಹಿಂದೆ ಇದ್ದ ಜಗಳ- ಮನಸ್ತಾಪ ಎಲ್ಲ ಶಮನ ಆಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪತಿ ಹಾಗೂ ಮಕ್ಕಳ ಸಹಕಾರ ಸಿಗುತ್ತದೆ.
ಬಹು ಮುಖ್ಯವಾದ ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎಂದು ಹೇಳುವಂಥ ಯಾವ ದೊಡ್ಡ ಆರೋಗ್ಯ ಸಮಸ್ಯೆಗಳೂ ಬಾರದು. ಹೊಸದೊಂದು ವ್ಯಾಪಾರ ಮಾಡುವ ಮನಸಾಗುತ್ತದೆ. ಅದಕ್ಕಾಗಿ ಹಣದ ಹೂಡಿಕೆ ಮಾಡಲು ನಿಮ್ಮ ಸಹೋದರರ ಸಹಾಯ ಕೇಳುವ ಸಾಧ್ಯತೆಗಳು ಕಾಣಿಸುತ್ತಿವೆ.
ಸಂತಸದ ವಿಚಾರ ಎಂದರೆ ಹಿರಿಯ ವಯಸ್ಸಿನ ಸ್ತ್ರೀಯರಿಗೆ ಮಗ ಬಂಗಾರದ ಆಭರಣ ಕೊಡಿಸುತ್ತಾನೆ. ಕೆಲವರ ಹೊಗಳಿಕೆಗಳಿಗೆ ಅಟ್ಟ ಹತ್ತಬೇಡಿ. ಎಲ್ಲರನ್ನೂ ಕಣ್ಣು ಮುಚ್ಚಿ ನಂಬಬೇಡಿ.
ವಿದ್ಯಾರ್ಥಿಗಳು: ನೀವು ಬಯಸಿದ ವಿದ್ಯಾಲಯಗಳಲ್ಲಿ ಅಥವಾ ಬಯಸಿದ ತರಗತಿಗಳಲ್ಲಿ ಪ್ರವೇಶ ಲಭಿಸುತ್ತದೆ.
ಪರಿಹಾರ: ಈ ತಿಂಗಳಿನಲ್ಲಿ ಸಮಯ ಮಾಡಿಕೊಂಡು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿ, ಅಲ್ಲಿ ನದೀ ಸ್ನಾನ ಮಾಡಿ, ದೇವ ದರ್ಶನ ಪಡೆಯಿರಿ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications