ಮಕರ : ಸಾಮಾನ್ಯವಾದ ಮಾಸ
ಪುರುಷರು: ಇದು ಸಾಮಾನ್ಯವಾದ ಮಾಸ ಎನ್ನಬಹುದು. ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಬಹಳ ಜಾಗರೂಕರಾಗಿರಿ. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತವೆ.
ಒತ್ತಡಗಳು ಕಡಿಮೆ ಆಗುತ್ತದೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು. ಕೆಲವರಿಗೆ ಬಯಸದೇ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚು ಕಾಣುತ್ತಿವೆ.

ಅನಿವಾರ್ಯ ಇಲ್ಲದಿದ್ದಲ್ಲಿ ಕೆಲ ಖರೀದಿಗಳನ್ನು ಮುಂದೂಡಿದರೆ ಉತ್ತಮ. ಷೆರು ಮಾರುಕಟ್ಟೆಯಲ್ಲಿ ಲಾಭಕ್ಕಿಂತಲೂ ಹೂಡಿಕೆ ಪ್ರಮಾಣವೇ ಹೆಚ್ಚಾಗಿ ಸಮಸ್ಯೆ ಅನಿಸಬಹುದು. ಕುತ್ತಿಗೆ ನೋವು ಅಥವಾ ಅಶಕ್ತತೆ ಬಾಧೆ ಕಾಡುತ್ತದೆ.
ಸ್ತ್ರೀಯರು: ಗೆಳತಿ ಮಾಡಿದ ತಪ್ಪಿಗೆ ನೀವು ಕಷ್ಟ, ಅವಮಾನ ಇತ್ಯಾದಿ ಅನುಭವಿಸಬೇಕಾಗುತ್ತದೆ. ನಿತ್ಯದ ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಅವಶ್ಯ ಮಾಡಿಕೊಳ್ಳಬೇಕಾದ ಸಮಯ. ನಿಮ್ಮ ಕೆಲ ರೂಢಿಗಳಿಂದಾಗಿ ಕುಟುಂಬ ಸದಸ್ಯರು ಅವಮಾನವನ್ನು ಎದುರಿಸ ಬೇಕಾಗಬಹುದು.
ಮನೆ ಕೆಲಸ ಮಾಡುವಾಗ ತಿಂಗಳ ಮೊದಲ ಹದಿನೈದು ದಿನಗಳು ಹೆಚ್ಚಿನ ಕಷ್ಟ ಅಥವಾ ಪರಿಶ್ರಮದ ಅವಶ್ಯ ಕಾಣಿಸುತ್ತದೆ. ಉದ್ಯೋಗ ಅರಸುತ್ತ ಇರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚು ಇದೆ.
ನಿಮ್ಮ ಮಾತೇ ಅಂತಿಮ ಆಗಬೇಕು, ನೀವು ಬಯಸಿದಂತೆ ನಡೆಯಬೇಕು ಎಂದಾದಲ್ಲಿ ಈ ತಿಂಗಳ ಕೊನೆಯ ತನಕ ಸ್ವಲ್ಪ ಕಾಯಬೇಕು. ಕೆಲವರ ಬಗ್ಗೆ ನಿಮ್ಮ ನಿರ್ಧಾರ ತಪ್ಪು ಆಗಿರಬಹುದು, ಮರು ಪರಿಶೀಲಿಸಿ.
ವಿದ್ಯಾರ್ಥಿಗಳು: ನಿಮ್ಮ ಅಧ್ಯಯನವನ್ನು ಆಲಸ್ಯ ಹಾಳು ಮಾಡಲಿದೆ. ನೀವು ಚುರುಕು ಆಗದೇ ಇದ್ದಲ್ಲಿ ಓದುವ ವಿಚಾರದಲ್ಲಿ ಆಸಕ್ತಿ ಕಡಿಮೆ ಆಗಿ, ಅಧ್ಯಾಪಕರಿಂದ ಬೈಗುಳ ಲಭಿಸುತ್ತದೆ.
ಪರಿಹಾರ: ಈ ತಿಂಗಳಿನಲ್ಲಿ ಒಮ್ಮೆ ಧರ್ಮಸ್ಥಳದ ಹತ್ತಿರ ಇರುವ ಸೌತಡ್ಕ ಮಹಾ ಗಣಪತಿ ದೇಗುಲಕ್ಕೆ ಹೋಗಿ, ದರ್ಶನ- ಪೂಜೆ ಮಾಡಿ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications