ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 17ಕ್ಕೆ; ಆಚರಣೆ, ವಿಶೇಷ ಮತ್ತಿತರ ಮಾಹಿತಿ
ಈ ವರ್ಷದ ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 17, 2020ರ ಗುರುವಾರ ಬಂದಿದೆ. ಮಹಾಲಯ ಅಮಾವಾಸ್ಯೆ ಎಂಬುದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದಿನಗಳ ಪೈಕಿ ಒಂದು. ಕುಟುಂಬದಲ್ಲಿ ತೀರಿಕೊಂಡ ಎಲ್ಲ ಹಿರಿಯರನ್ನು ಸ್ಮರಿಸಿ, ಆ ದಿನ ತರ್ಪಣವನ್ನು ನೀಡಲಾಗುತ್ತದೆ. ಮನೆಯಲ್ಲಿ ತೀರಿಹೋದ ಹಿರಿಯರನ್ನು ಪಿತೃ ದೇವತೆಗಳು ಅಂತಲೇ ಕರೆಯಲಾಗುತ್ತದೆ.
ಪಿತೃಗಳು ಅಂದಾಕ್ಷಣ ವಯಸ್ಸಿನ ಭೇದವಿಲ್ಲದೆ ತೀರಿಕೊಂಡ ಕುಟುಂಬದ ಎಲ್ಲರೂ ಆ ಸ್ಥಾನವನ್ನು ಪಡೆಯುತ್ತಾರೆ. ಈ ದಿನವನ್ನು ಸರ್ವ ಪಿತೃ ಅಮಾವಾಸ್ಯೆ ಅಂತಲೂ ಕರೆಯುವುದು ಉಂಟು. ಪಿತೃ ಪಕ್ಷದ ಅಮಾವಾಸ್ಯೆಯಂದು ಎಲ್ಲ ಜಾತಿಯವರು ಸಹ ತಮ್ಮ ಕುಟುಂಬದ ಹಿರಿಯರ ಸ್ಮರಣೆ ಮಾಡುತ್ತಾರೆ. ಈ ಪೈಕಿ ಒಂದೊಂದು ಸಮುದಾಯ ಒಂದೊಂದು ರೀತಿಯಲ್ಲಿ ಆಚರಣೆಯನ್ನು ಮಾಡುತ್ತದೆ. ತಮ್ಮ ಕುಟುಂಬದ ಹಿರಿಯರು ಇಷ್ಟಪಟ್ಟು ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಅವರ ಭಾವಚಿತ್ರದ ಎದುರು ಇರಿಸಿ, ಸ್ಮರಿಸಲಾಗುತ್ತದೆ.
ಸಾಮಾನ್ಯವಾಗಿ ಮಹಾಲಯ ಅಮಾವಾಸ್ಯೆಯ ಮಾರನೇ ದಿನದಿಂದ ಒಂಬತ್ತು ದಿನಗಳ ಕಾಲ ಶರನ್ನವರಾತ್ರಿ ಆರಂಭವಾಗುತ್ತದೆ. ಆದರೆ ಈ ಬಾರಿ ಮಹಾಲಯ ಅಮಾವಾಸ್ಯೆಯ ಮರುದಿನದಿಂದ ಆಶ್ವಯುಜ ಅಧಿಕ ಮಾಸ ಬಂದಿರುವುದರಿಂದ ಶರನ್ನವರಾತ್ರಿ ಶುರುವಾಗುವುದಿಲ್ಲ. ಪಿತೃಗಳ ಸ್ಮರಣೆ, ಆರಾಧನೆಯಿಂದ ಎಲ್ಲ ರೀತಿಯಲ್ಲೂ ಒಳಿತಾಗುತ್ತದೆ.

"ಉಳಿದ ದೇವತೆಗಳ ಆರಾಧನೆಯನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ಅಥವಾ ಆಯಾ ವ್ಯಕ್ತಿಗಳ ನಂಬಿಕೆ ಮೇಲೆ ಆ ವಿಚಾರ ಬಿಟ್ಟಿದ್ದು. ಆದರೆ ಪಿತೃದೇವತೆಗಳ ಆರಾಧನೆಯನ್ನು ಮಾತ್ರ ಕಡ್ಡಾಯವಾಗಿ ಮಾಡಬೇಕು. ಇದರಿಂದ ವಂಶಾಭಿವೃದ್ಧಿಯೂ ಸೇರಿದ ಹಾಗೆ ಹಲವು ಬಗೆಯಲ್ಲಿ ಶ್ರೇಯಸ್ಕರ" ಎಂದು ತಿಳಿಸಿದರು ಅಧ್ಯಾತ್ಮ ಚಿಂತಕರು ಹಾಗೂ ಜ್ಯೋತಿಷಿ ಶಂಕರ್ ಭಟ್.
ಇನ್ನೊಮ್ಮೆ ನೆನಪಿಸುತ್ತಿದ್ದೇವೆ ಸೆಪ್ಟೆಂಬರ್ 17, 2020ರಂದು ಮಹಾಲಯ ಅಮಾವಾಸ್ಯೆ ಆಚರಣೆಯನ್ನು ಮಾಡಬೇಕು. ಕುಟುಂಬದಲ್ಲಿ ತೀರಿಕೊಂಡ ಹಿರಿಯರಿಗೆ ಈ ತನಕ ನಡೆಸಿಕೊಂಡು ಬಂದ ಸಂಪ್ರದಾಯದ ರೀತ್ಯಾ ಆರಾಧನೆಯನ್ನು ಮಾಡಬೇಕು.
ಸೆಪ್ಟೆಂಬರ್ 16ನೇ ತಾರೀಕಿನ ಬುಧವಾರ ಘಾತ ಚತುರ್ದಶಿ ಇದೆ. ಆ ದಿನ ಮನೆಯಲ್ಲಿ ದುರ್ಮರಣಕ್ಕೆ ಈಡಾದವರಿಗೆ ತರ್ಪಣ ನೀಡಬೇಕು. ನೀರಿನಲ್ಲಿ ಮುಳುಗಿ ತೀರಿಕೊಂಡವರು, ಅಪಘಾತ, ಆತ್ಮಹತ್ಯೆ ಹೀಗೆ ದುರ್ಮರಣಕ್ಕೆ ಈಡಾದವರಿಗೆ ತರ್ಪಣವನ್ನು ನೀಡಬೇಕು.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications