ಮೀನ ರಾಶಿಗೆ ಭರ್ಜರಿ ಫಲ ನೀಡಲು ಬಂದ ಗುರು!
ರಾಶಿಚಕ್ರದಲ್ಲಿ ಕಡೆಯದಾಗಿ ಬರುವ ಮೀನ ರಾಶಿಯವರಿಗೆ ಸ್ವಲ್ಪ ಸಮಾಧಾನ ಜಾಸ್ತಿಯೇ. ಏಕೆಂದರೆ ಈಗಾಗಲೇ ತಮ್ಮ ರಾಶಿಯ ಗುರುಫಲ ಕಾಯ್ದವರಿಗೆ ಸಿಹಿಸುದ್ದಿನೇ ಇದೆ. ಕಡೆಗೂ ಗುರುಬಲದ ಫಲಕ್ಕಾಗಿ ಕಾಯ್ದಿದ್ದಕ್ಕೂ ಸಮಾಧಾನ ಪಟ್ಟುಕೊಳ್ಳಬಹುದು ಸಾಮೇರ ಭಕ್ತರು.
ಈ ಹಿಂದೆ ಷಷ್ಟಮ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿದ್ದುಕೊಂಡು ಹೆಚ್ಚಿನ ಪ್ರಮಾಣದ ತೊಂದರೆಗಳನ್ನೇ ನೀಡಿದ್ದ ಗುರುವಿಗೆ 9ನೇ ಸ್ಥಾನದಲ್ಲಿದ್ದ ಶನಿಯೂ ಕೂಡ ಸಾಥ್ ನೀಡಿದ್ದ. ಹೀಗಾಗಿ ಜೀವನದಲ್ಲಿ ಇಳಿತಗಳನ್ನೇ ಕಂಡ ಮೀನ ರಾಶಿಯವರಿಗೀಗ ಶುಭ ಸಮಯ. [ಮೀನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮೊಟ್ಟ ಮೊದಲು ಹಣದ ಇಕ್ಕಟ್ಟಿನಲ್ಲಿ ಇದ್ದವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯ ಸಿಗುವಂಥ ಸಾಧ್ಯತೆಗಳೇ ಹೆಚ್ಚು. ಉದಾಹರಣೆಗೆ ಬ್ಯಾಂಕಿನಲ್ಲಿ ಮತ್ತು ಸರಕಾರಗಳಿಂದ ಆರ್ಥಿಕ ಸಹಾಯ ಪಡೆದುಕೊಳ್ಳಬೇಕೆಂದವರು ಈಗ ಚೆಕ್ ಪಡೆದುಕೊಳ್ಳಬಹುದು. ಏಕೆಂದರೆ ಅಂಥ ಸಂದರ್ಭಗಳು ಈಗ ಸಲೀಸಾಗಿ ಕಾರ್ಯಾನೂಕೂಲವಾಗುತ್ತವೆ.
ಮೀನ ರಾಶಿಯವರಿಗೆ ಗುರುವು ಯಾವ ರೀತಿ ಸಹಾಯ ಮಾಡಲಿದ್ದಾನೆ, ಈ ರಾಶಿಯವರು ಯಾವ ರೀತಿ ಲಾಭ ಪಡೆಯಬಹುದು, ಏನನ್ನು ಮಾಡಿದರೆ ಕಷ್ಟದ ದಿನಗಳನ್ನು ದೂರ ತಳ್ಳಬಹುದು, ಏನನ್ನು ಕಟ್ಟುನಿಟ್ಟಾಗಿ ಮಾಡಬಾರದು ಎಂಬುದನ್ನು ಮುಂದೆ ವಿವರಿಸಲಾಗಿದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

ಮನಸ್ಸಿನ ನೆಮ್ಮದಿಗಾಗಿ ಭಕ್ತಿ, ಆಧ್ಯಾತ್ಮ
ದೇಹಾರೋಗ್ಯದಲ್ಲಿ ಹೆಚ್ಚಿನ ಪ್ರಮಾಣದ ಹುಮ್ಮಸ್ಸು ಬಂದು ದೈವಭಕ್ತಿಯೆಡೆಗೆ ಮನಸ್ಸು ಮಾಡಿ ಆಧ್ಯಾತ್ಮದ ಕಡೆಗೂ ಗಮನ ಕೊಟ್ಟವರಿಗೆ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಜೊತೆಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗ ಅನುಕೂಲಕರ ಸಮಯ. ಮತ್ತು ಒಳ್ಳೆಯ ನಿರ್ಧಾರಗಳೆ ಜೀವನದಲ್ಲಿ ಮುಂದಿನ ಏಳ್ಗೆಗೆ ಸಹಾಯ ಮತ್ತು ಸಹಕಾರಿಯಾಗುತ್ತವೆ ಮೀನ ರಾಶಿಯವರಿಗೆ.

ಈ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿ
ಅರಿಷಿಣ ಕೊಂಬು ಕಟ್ಟಿಕೊಳ್ಳುವುದು ಯಾವಾಗ ಎಂದು ಮನಸ್ಸಿಗೆ ಹಚ್ಚಿಕೊಂಡು ಕುಳಿತವರು ಈ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿ. ಏಕೆಂದರೆ ಗುರುಬಲ ಬಂದಿದೆ ಹಣಬಲನೂ ಬರುತ್ತದೆ. ಸಂಸಾರ ಸುಖವನ್ನೂ ಅನುಭವಿಸುವ ಯೋಗವಿದು ಮೀನದವರಿಗೆ.

ಶ್ರೀರಾಮನಂಥ ಮುದ್ದಾದ ಮಗು ನಿರೀಕ್ಷಿಸಿ
ಮದುವೆಯಾಗಿ ತೊಟ್ಟಿಲು ತೂಗಲು ಕಾಯುತ್ತಿರುವವರು ಈಗ ತೊಟ್ಟಿಲಿಡಲು ಜಾಗೆ ಗುರ್ತಿಸಿಕೊಳ್ಳಿ. ಗುರು ಸಂತಾನಕಾರಕನಾಗಿರುವುದರಿಂದ ಶ್ರೀರಾಮನಂಥ ಮಗು ಹುಟ್ಟಲಿ ಎಂದು ಹರಕೆ ಹೊತ್ತವರಿಗೆ ತೊಟ್ಟಿಲು ತೂಗುವ ಭಾಗ್ಯ. ಇದಕ್ಕಾಗಿ ಮೀನ ರಾಶಿಯವರು ಸಂತಸಪಟ್ಟುಕೊಳ್ಳಬೇಕು. ಕಡೆಗೂ ದೇವರು ಗುರುವಿನ ರೂಪದಲ್ಲಿ ಬಂದು ಹರಕೆ ತೀರಿಸಿದನಲ್ಲ ಎಂದು.

ಹೆಚ್ಚಿನ ಲಾಭಕ್ಕಾಗಿ ಸ್ಟಾಕ್ ತರಿಸಿಟ್ಟುಕೊಳ್ಳಿ
ವ್ಯವಹಾರದಲ್ಲಿ ಇದ್ದವರು ಹೆಚ್ಚಿನ ಪ್ರಮಾಣದ ಲಾಭದ ಮುಖವನ್ನು ನೋಡುವದರಿಂದ ಸ್ಟಾಕ್ ತರಿಸಿಕೊಳ್ಳಬಹುದು. ಆದರೆ ಎಲ್ಲವೂ ಒಂದನೇ ನಂಬರ್ ನಿಂದ ವ್ಯವಹಾರ ಮಾಡಬೇಡಿ. 2ನೇ ನಂಬರ್ ನಿಂದ ಮಾಡಿದರೆ, ಗುರುವು ಫಲ ನೀಡಲು ಬರುವುದೇ ಇಲ್ಲ. ಏಕೆಂದರೆ ಶನಿ ಬೇರೆ ಮೀನ ರಾಶಿಯವರಿಗೆ ನವಮ ಸ್ಥಾನದಲ್ಲಿದ್ದು ಎಲ್ಲವೂ ನೋಡುತ್ತಿರುತ್ತಾನೆ. ಜೊತೆಗೆ ಅವನು ಏನೂ ಶುಭ ಫಲಗಳನ್ನು ನೀಡುತ್ತಿಲ್ಲ. ಹೀಗಿದ್ದಾಗ ಗುರು ಬಂದು ಶುಭಫಲ ನೀಡುವಾಗ ಅನ್ಯಾಯದ ಕೆಲಸ ಮಾಡಿಕೊಂಡು ಕೆಲಸ ಕೆಡಿಸಿಕೊಳ್ಳಬಾರದು.

ಕಷ್ಟ ತಡೆದುಕೊಳ್ಳುವ ಶಕ್ತಿ ಗುರು ನೀಡಲಿದ್ದಾನೆ
ಕೌಟುಂಬಿಕ ತೊಂದರೆಗಳನ್ನು ಈಗಾಗಲೇ ಶನಿ ನೀಡುತ್ತಿದ್ದಾನೆ. ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಈಗ ಗುರುವು ಕೊಡಲಿದ್ದಾನೆ. ಹೀಗಾಗಿ ಗುರುಬಲದ ಸಮಯದಲ್ಲಿ ವ್ಯಾಪಾರಿಗಳು ಅಪ್ಪಿತಪ್ಪಿಯೂ ಸರಕಾರಕ್ಕೆ ಮತ್ತು ಜನಕ್ಕೆ ಮೋಸ ಮಾಡುವಂತಹ ವ್ಯವಹಾರ ಮಾಡುವಂತಿಲ್ಲ.

ಗುರು ಒಳಿತುಕೆಡಕನ್ನು ಗಮನಿಸುತ್ತಿರುತ್ತಾನೆ
ಸರಕಾರಿ ಸೇವೆಯಲ್ಲಿರುವ ಮೀನ ರಾಶಿಯವರಿಗೆ ಇಷ್ಟು ದಿನ ತೊಂದರೆ ಇತ್ತು ಎಂದು ಟೇಬಲ್ ಕೆಳಗೆ ಕೈ ಚಾಚುತ್ತಿದ್ದರೆ ಈಗ ಕೈ ಬಿಡಬೇಕು. ಇಲ್ಲಾಂದ್ರೆ ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಗುರುಬಲ ಕೇವಲ ಒಳ್ಳೆಯದಷ್ಟನ್ನೇ ಮಾಡಿದರೂ, ಕೇಡು ಮಾಡಿದ್ದನ್ನು, ಕೆಟ್ಟ ಗುಣಗಳನ್ನು ಗಮನಿಸಿ ಒಳ್ಳೆಯದನ್ನು ಮಾಡಲು ಹಿಂದೆ ಮುಂದೆ ನೋಡುತ್ತದೆ.

ಹಣ ದುಪ್ಪಟ್ಟು ಮಾಡಲು ಸ್ವಲ್ಪ ಯೋಚಿಸಿ
ಹಣದ ಹರಿವು ಸ್ವಲ್ಪ ಹೆಚ್ಚಳವಾಗುವುದರಿಂದ ಹಣವನ್ನು ಸಂಗ್ರಹಿಸಿಕೊಳ್ಳಬೇಕು. ಅಥವಾ ಒಳ್ಳೆಯ ವ್ಯವಹಾರದಲ್ಲಿ ತೊಡಗಿಸಿಕೊಂಡು ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಮೀನ ರಾಶಿಯವರು ಈಗ.

ಕೆಂಗಣ್ಣು ಬೀರುತ್ತಿದ್ದವರೂ ಮುಗುಳ್ನಗೆ ಬೀರುತ್ತಾರೆ
ಈ ರಾಶಿಯ ಉದ್ಯೋಗಸ್ಥರಿಗೆ ಈಗ ಶುಭ ಸಮಯ. ಕಚೇರಿಯಲ್ಲಿ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಈಗ ಸಲುಗೆ, ಸ್ನೇಹ ಬೆಳೆಸಿಕೊಳ್ಳಬಹುದು. ಇಷ್ಟು ದಿನ ಕೆಂಗಣ್ಣಿನಿಂದ ನೋಡುತ್ತಿದ್ದವರು ಈಗ ಮುಗುಳ್ನಗೆ ಬೀರುತ್ತ ಮಾತನಾಡಿಸಲಾರಂಭಿಸುತ್ತಾರೆ. ಇನ್ನು ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಒಬ್ಬರೇ ಕುಳಿತುಕೊಂಡು ಚೆಸ್ ಆಟ ಆಡಿ.

ಗುರುಬಲದ ಫಲವನ್ನು ಸಾಮೇರಿಗೆ ತಿಳಿಸಿ
ಕೆಲವರು ಶನಿಯ ಪ್ರಭಾವದಿಂದ ದೇಹಕ್ಕೆ ತೊಂದರೆ ಕೊಡುವುದಿಲ್ಲವಾದರೂ ಮಾನಸಿಕ ತೊಂದರೆ ಕೊಡಲು ಆರಂಭಿಸುತ್ತಾರೆ. ಒಟ್ಟಿನಲ್ಲಿ ಗುರುಬಲದಿಂದ ಸಂತಸಗೊಂಡಿರುವ ಮೀನ ರಾಶಿಯವರು ಇನ್ನೊಂದು ವರ್ಷ ಗುರುಬಲದ ಫಲವನ್ನು ಓದಿಕೊಂಡು ಪಡೆದುಕೊಂಡ ಫಲಗಳನ್ನು ನೆನಪಿಟ್ಟು ತಿಳಿಸಿ ಸಾಮೇರಿಗೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications