Guru Dosha in Horoscope: ನಿಮ್ಮ ಜಾತಕದಲ್ಲಿ ಗುರು ಬಲವಿರಲು ಈ ವಸ್ತುಗಳನ್ನು ದಾನ ಮಾಡಿ..!
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಗ್ರಹವು ಮಹಾದಶಾ ಮತ್ತು ಅಂತರದಶಾ ಅವಧಿಗಳನ್ನು ಹೊಂದಿರುತ್ತದೆ. ಗುರುವಿನ ಮಹಾದಶಾ 16 ವರ್ಷಗಳವರೆಗೆ ಇರುತ್ತದೆ. ಒಬ್ಬರ ಜಾತಕದಲ್ಲಿ ಗುರು ಬಲಿಷ್ಠನಾಗಿದ್ದರೆ ಮತ್ತು ಮಂಗಳ ಮಹಾದಶದಲ್ಲಿದ್ದರೆ ಅವರ ಅದೃಷ್ಟ ಉಜ್ವಲವಾಗಿರುತ್ತದೆ.
ಗುರುವಿನ ಮಹಾದಶಾ ಕಾಲದಲ್ಲಿ ಒಬ್ಬ ವ್ತಕ್ತಿ ಅಪಾರ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಪಡೆಯುತ್ತಾನೆ. ಹಾಗಾದರೆ ನಿಮ್ಮ ಜಾತಕದಲ್ಲಿ ಗುರು ಬಲವಿರಲು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂದು ತಿಳಿಯೋಣ.

ಗುರು ಮಹದಾಸೆ ಎಂದರೇನು?
ಶನಿ, ಬುಧ, ಗುರು ಮುಂತಾದ ವಿವಿಧ ಗ್ರಹಗಳ ಅಂತರ ದಶಾ ಹೊಂದಿದ್ದರೆ, ಅಂಥವರು ಶುಭ ಮತ್ತು ಅಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗುರುವಿನ ಅಂತರ ದಶಾ ಗುರುವಿನ ಮಹಾ ದಶಾದಲ್ಲಿ ಸಂಭವಿಸಿದರೆ, ವ್ಯಕ್ತಿಯು ಅದೃಷ್ಟಶಾಲಿಯಾಗಿರುತ್ತಾನೆ. ಸಮಾಜದಲ್ಲಿ ಗೌರವ ಸಿಗಲಿದೆ. ಎಲ್ಲಾ ಆಸೆಗಳು ಈಡೇರುತ್ತವೆ. ಹಾಗಾದರೆ ಜಾತಕದಲ್ಲಿ ಗುರು ಉನ್ನತ ಸ್ಥಾನದಲ್ಲಿರಲು ಏನು ಮಾಡಬೇಕು ಎಂದು ನೋಡೋಣ.
ಗುರುವಿನ ಮಹದಾಸೆಯು ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಗುರುವಿನ ಮಹಾದಶಾ ಸಂಭವಿಸಿದಾಗ, ವ್ಯಕ್ತಿಯು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ತೋರಿಸಲು ಪ್ರಾರಂಭಿಸುತ್ತಾನೆ. ನೀವು ಅಧ್ಯಯನದಲ್ಲಿ ಅಂದುಕೊಮಡ ಫಲಿತಾಂಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಿರಿ. ಬಹಳಷ್ಟು ಹಣವನ್ನು ಗಳಿಸುವಿರಿ.
ಹಣದ ಕೊರತೆ ಇರಲ್ಲ. ಎಲ್ಲಾ ರೀತಿಯಲ್ಲೂ ಸಂತೋಷ ಇರುತ್ತದೆ. ಯಾವುದೇ ಕಾರ್ಯವನ್ನು ಸುಲಭವಾಗಿ ಮತ್ತು ಸುಗಮವಾಗಿ ಪೂರ್ಣಗೊಳಿಸುವಿರಿ. ಮಕ್ಕಳಿಗೆ ಸಂತೋಷ ಸಿಗಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ.

ಒಂದು ವೇಳೆ ಗುರುವು ಮಹಾದಶಾದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಮಾಡಲು ಆಗದೇ ಇರಬಹುದು.. ನಾನಾ ರೋಗಗಳು ಸುತ್ತುವರಿದಿವೆ. ಅಲ್ಲದೆ ಮಾರಣಾಂತಿಕ ಕಾಯಿಲೆಗಳ ಹೊರೆ ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿ, ಪತಿ ಮತ್ತು ಹೆಂಡತಿಯ ನಡುವೆ ಹೆಚ್ಚು ಅಸಮಾಧಾನಗಳು ಮತ್ತು ಗಂಭೀರ ಸಮಸ್ಯೆಗಳು ಉಂಟಾಗಬಹುದು. ಮದುವೆಗೆ ಅಡ್ಡಿಯಾಗಬಹುದು.
ಜಾತಕದಲ್ಲಿ ಗುರು ಬಲವಾಗಲು ಮಾಡಬೇಕಾದ ಕೆಲಸಗಳು...
1. ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸಲು ಪ್ರತಿ ಗುರುವಾರ ವಿಷ್ಣು ಸಹಸ್ರನಾಮ ಅಥವಾ ಸದ್ನಾಮ ಸ್ತೋತ್ರವನ್ನು ಪಠಿಸಬೇಕು. ಇವುಗಳನ್ನು ಪಠಿಸುವುದರಿಂದ ಪಾಪಗಳು ನಾಶವಾಗುತ್ತವೆ.
2. ಜಾತಕದಲ್ಲಿ ಗುರುಗಳು ಉತ್ತಮವಾಗಿರಲು ಬಾಳೆಗಿಡದ ಬೇರನ್ನು ಕಟ್ಟಿಕೊಳ್ಳಬೇಕು. ವಿಶೇಷವಾಗಿ ಮದುವೆಯಾಗದ ಅಥವಾ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಮಹಿಳೆಯರು ಬಲಗೈಗೆ ಮತ್ತು ಪುರುಷರು ಎಡಗೈಗೆ ಬಾಳೆ ಬೇರನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಇದರಿಂದ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಂಡು ಮನೆಯಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ.
3. ಗುರುಗ್ರಹದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬೇಕಾದರೆ ಇದಕ್ಕಾಗಿ ಗುರು ಮಂತ್ರವನ್ನು ಪಠಿಸಿ. ಇದು ಆಧ್ಯಾತ್ಮಿಕ ಪ್ರಗತಿಗೆ ಕಾರಣವಾಗುತ್ತದೆ. ಇದರಿಂದ ದೇವತೆಗಳು ತೃಪ್ತರಾಗುತ್ತಾರೆ ಮತ್ತು ಸಂತೋಷಪಡುತ್ತಾರೆ. "ದೇವಾನಾಂ ಸ ಋಷಿಣಾಂ ಸ ಗುರು ಕಂಚಸಾನಿಪಂ.ಬುದ್ಧಿಬೂತಂ ತ್ರಿಲೋಕೇಶಂ ನಮಾಮಿ ಬೃಹಸ್ಪತಿಯಂ" ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ದೇವತೆಗಳಿಗೆ ಸಂತೋಷವಾಗುತ್ತದೆ.
4. ಇದು ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡುತ್ತದೆ.. ಗುರು ಜಾತಕದಲ್ಲಿ ಉನ್ನತ ಸ್ಥಾನದಲ್ಲಿರಲು ತಂದೆತಾಯಿ ಮತ್ತು ಸಹೋದರರನ್ನು ಗೌರವಿಸಬೇಕು. ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಇದನ್ನು ಮಾಡುವುದರಿಂದ, ನೀವು ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಾವುದೇ ಅಡೆತಡೆಗಳನ್ನು ಸುಲಭವಾಗಿ ನಿವಾರಿಸಬಹುದು. ಜೀವನದಲ್ಲಿ ಯಾವುದೇ ವೈಫಲ್ಯವಿಲ್ಲದೆ, ಅವನು ಯಶಸ್ವಿಯಾಗುತ್ತಾನೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ.
5. ಗುರುವಿನ ಬಲವು ಬಲವಾಗಿರಲು ಗುರುವಾರ ಉಪವಾಸವನ್ನು ಇಟ್ಟುಕೊಳ್ಳಿ. ಗುರುವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗುರುವಾರದಂದು ಅರಿಶಿನ ಹಚ್ಚಿ ಸ್ನಾನ ಮಾಡಿದರೆ ಅದೃಷ್ಟ ಹೆಚ್ಚುತ್ತದೆ. ಗುರುವಾರವೂ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದರಿಂದ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿ ಇರುತ್ತದೆ.
ಗುರುವಾರದಂದು ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಗುರುವಾರದಂದು ಗುರು ಗ್ರಹದ ಕಂಪನಗಳು ಅಧಿಕವಾಗಿರುವುದರಿಂದ ಆ ದಿನ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಜಾತಕದಲ್ಲಿ ಗುರುವಿನಿಂದ ಉಂಟಾಗುವ ಗ್ರಹದೋಷಗಳು ನಿವಾರಣೆಯಾಗುತ್ತವೆ.
ಬಡವರಿಗೆ ಮತ್ತು ಅನಾಥರಿಗೆ ಬೆಲ್ಲ, ಬೇಳೆ ಮತ್ತು ಸಿಹಿತಿಂಡಿಗಳು, ಹಳದಿ ಬಟ್ಟೆ, ಪುಸ್ತಕಗಳು, ಚಿನ್ನ, ಧಾನ್ಯಗಳನ್ನು ದಾನ ಮಾಡಿ. ಇದರಿಂದ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಪುಷ್ಯರಾಗವನ್ನು ಧರಿಸಬೇಕು. ಪುಷ್ಯರಾಗವನ್ನು ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಧರಿಸಬಹುದು.
-
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ












Click it and Unblock the Notifications