ನಗುವಿನಿಂದಲೇ ಎಲ್ಲ ಗೆಲ್ಲಬಲ್ಲ ತುಲಾ ರಾಶಿಯ ಮಕ್ಕಳು
ತುಲಾ ರಾಶಿಯ ಮಕ್ಕಳಿಗೆ ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಇರುತ್ತದೆ. ಯಾವುದೇ ಮಕ್ಕಳು ಹೀಗೆ ಇರುತ್ತವೆ ಎಂದು ನೀವು ಹೇಳುವುದಾದರೆ, ತುಲಾ ರಾಶಿಯ ಮಕ್ಕಳು ಮತ್ತೂ ವಿಶೇಷ. ಈ ಮಕ್ಕಳು ತುಂಬ ಪ್ರಶಾಂತವಾಗಿರುತ್ತವೆ. ಯಾವುದೇ ಕಾರಣವಿಲ್ಲದೆ ಅಳುವಂಥ ಸಂದರ್ಭ ಸಹ ವಿರಳ. ಹೃದಯ ಮತ್ತು ಮನಸಿನಿಂದಲೂ ಪ್ರಾಮಾಣಿಕವಾಗಿರುತ್ತವೆ.
ಈ ಮಕ್ಕಳು ನಿಯಮಗಳನ್ನು ಮೀರುವಂಥವಲ್ಲ. ಆದರೆ ಆ ನಿಯಮಗಳನ್ನು ಪಾಲಿಸಬೇಕು ಅಂದರೆ ಅದಕ್ಕೆ ಸರಿಯಾದ ಕಾರಣ ಕೊಡಲೇಬೇಕು. ನೀವು ಹೇಳುವ ವಿಚಾರದಲ್ಲಿ ತರ್ಕವಿದ್ದರೆ ಮಾತ್ರ ತುಲಾ ರಾಶಿಯ ಮಕ್ಕಳು ಅನುಸರಿಸುತ್ತವೆ. ಯಾವುದೇ ನಿರ್ಧಾರ ನ್ಯಾಯಯುತವಾಗಿರುತ್ತದೆ ಎಂಬುದು ಬಾಲ್ಯದಿಂದಲೇ ಈ ಮಕ್ಕಳಲ್ಲಿ ಕಾಣಬಹುದು.
ತುಲಾ ರಾಶಿಯ ಚಿಹ್ನೆಯೇ ತಕ್ಕಡಿ. ಆದ್ದರಿಂದ ಅಳೆದು- ತೂಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ಮಕ್ಕಳು ಬಹಳ ಸಮಯ ತೆಗೆದುಕೊಳ್ಳುತ್ತವೆ. ಯಾವುದೇ ಒತ್ತಡ ಹೇರದೆ ಪೋಷಕರು ಹಾಗೇ ಈ ಮಕ್ಕಳನ್ನು ಬಿಡಬೇಕು. ಇಲ್ಲದಿದ್ದರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯೇ ಕುಂದುತ್ತಾ ಹೋಗುತ್ತದೆ.

ಪ್ರೀತಿಯಿಂದಲೇ ಹೇಳಿಕೊಡಬೇಕು
ಈ ಮಕ್ಕಳಿಗೆ ಏನಾದರೂ ಕಲಿಸಬೇಕು ಅಂದರೆ ಪ್ರೀತಿಯಿಂದಲೇ ಹೇಳಿಕೊಡಬೇಕು. ಸ್ವಲ್ಪ ಕಠಿಣವಾದರೂ ಸಮಸ್ಯೆ ಬಿಗಡಾಯಿಸುತ್ತದೆ. ಈ ಮಕ್ಕಳ ತಿಳಿವಳಿಕೆ ಮಟ್ಟ ಹೆಚ್ಚಿರುತ್ತದೆ. ಇದರಿಂದ ಪೋಷಕರು ಸಿಟ್ಟಾಗುವ ಸಾಧ್ಯತೆಯೂ ಉಂಟು. ಈ ಗುಣವನ್ನು ಆ ಮಕ್ಕಳಲ್ಲಿ ಆಶಾವಾದದಂತೆಯೇ ನೋಡಬೇಕು.

ನಗುವಿಗೆ ಗೆಲ್ಲುವ ಶಕ್ತಿ
ಇವರು ಬಲೇ ಕ್ಲೀನು. ಗಲೀಜಾದ ಜಾಗದಲ್ಲಿ ಕೂತಂಥ ಸಂದರ್ಭ ಕಾಣುವುದೇ ಅಪರೂಪ. ತುಂಬ ಉದಾರ ಬುದ್ಧಿ ಇರುವ 'ತುಲಾ' ಬೇರೆಯವರಿಗೆ ತೊಂದರೆ ಕೊಡುವ ಪೈಕಿ ಅಲ್ಲ. ಯಾವುದೇ ವಿಚಾರವನ್ನು ಪಟ್ಟನೆ ಅರ್ಥ ಮಾಡಿಕೊಳ್ಳಬಲ್ಲ ಈ ಮಕ್ಕಳ ನಗುವಿಗೆ ಏನನ್ನಾದರೂ ಗೆಲ್ಲಬಲ್ಲ ಶಕ್ತಿ ಇರುತ್ತದೆ.

ಸಲೀಸಾಗಿ ಬೆರೆಯುತ್ತವೆ
ಬುದ್ಧಿವಂತಿಕೆಯ ಕಾರಣಕ್ಕೂ ಗಮನ ಸೆಳೆಯುವ ಈ ಮಕ್ಕಳು ಬೇರೆಯವರ ಜತೆಗೆ ಸಲೀಸಾಗಿ ಬೆರೆಯುತ್ತವೆ. ತನಗೆ ಪ್ರಾಮುಖ್ಯ ಇಲ್ಲದ ಜಾಗದಲ್ಲಿ ಹೆಜ್ಜೆ ಕೂಡ ಹಾಕಲ್ಲ. ಸ್ವಲ್ಪ ದುಬಾರಿ ಸಂಗತಿ- ವಿಚಾರಗಳ ಬಗ್ಗೆ ಸೆಳೆತ ಹೆಚ್ಚಿರುತ್ತದೆ. ಕ್ರೀಡೆ, ನಾಟಕ ಮತ್ತು ಇತರ ಕಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತವೆ.

ವಿಪರೀತ ಸ್ನೇಹಿತರು
ವಿಪರೀತ ಸ್ನೇಹಿತರಿರುತ್ತಾರೆ. ಈ ಮಕ್ಕಳಲ್ಲಿ ಕೋಪ ಕಡಿಮೆ. ಆದರೆ ಸಿಟ್ಟಿನ ಭರದಲ್ಲಿ ಏನಾದರೂ ಮಾತನಾಡಿ, ಆ ನಂತರ ಸಂಕಟ ಪಡುತ್ತವೆ. ಈ ಮಕ್ಕಳ ಸಿಟ್ಟನ್ನು ಕಡಿಮೆ ಮಾಡುವುದೇ ಸವಾಲು. ಅಪರೂಪದಲ್ಲಿ ಅಪರೂಪ ಎಂಬಂತೆ ಸೋಮಾರಿತನ ಕಾಣಿಸಿಕೊಳ್ಳುತ್ತದೆ. ಯಾವುದೇ ಕ್ರೀಡೆ ಅಥವಾ ಚಟುವಟಿಕೆ ಆದರೂ ಸಾಧನೆ ಕಡೆಗೆ ಈ ಮಕ್ಕಳ ಗುರಿ ಇರುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications