ಹೊಸ ವರ್ಷದಲ್ಲಿ ನಿಮ್ಮ ಬಾಳು ಇನ್ನೂ ಹಸನಾಗಿರಲಿ

ಕರ್ಕಾಟಕ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ : ಧನಸ್ಸು ರಾಶಿ ಸ್ತ್ರೀ ತುಂಬಾ ಆಶಾವಾದಿ. ಆಕೆಯು ತನ್ನ ಬದುಕಲ್ಲಿ ಅತಿ ಶ್ರೀಮಂತ ಪತಿಯನ್ನು ಬಯಸುತ್ತಾಳೆ. ತನ್ನನ್ನು ಕರೆದೊಯ್ಯಲು ರಾಜಕುಮಾರ ಬಂದೆ ಬರ್ತಾನೆ ಎನ್ನುವ ಕನಸು ಕಾಣ್ತಾ ಇರ್ತಾಳೆ. ಒಟ್ಟಾರೆ ವೈಭವಯುತ ಜೀವನದ ಮೆಲುಕು ಹಾಕ್ತಾ ಇರ್ತಾಳೆ ಆಕೆ. ಆದರೆ ಬದುಕು ನಾವು ತಿಳಿದಂತೆ ಇರದಲ್ಲ, ಆಕೆಯ ಅದೃಷ್ಟ ಹೇಗಿರುತ್ತದೆ ಅಂದ್ರೆ ಮದುವೆಯಾಗುವುದು ಅತಿ ಸಾಧಾರಣ ಮನೆಯ ಯುವಕನನ್ನು. ಅದರಲ್ಲೂ ಆತ ಕರ್ಕಾಟಕ ರಾಶಿ ಪುರುಷನಾಗಿ ಬಿಟ್ಟರೆ, ಇರುವ ಅಲ್ಪ ಸ್ವಲ್ಪ ಆಸೆಯನ್ನು ಸಹ ಬಿಟ್ಟು ಬಿಡಬೇಕು. ಯಾಕಂದ್ರೆ ಆಕೆಯ ಪುಟ್ಟ ಕನಸನ್ನು ಸಹ ಆತ ಪೂರ್ಣಗೊಳಿಸಲಾರ. ಆದರೆ ಈಕೆಯೂ ಆಶಾವಾದಿ, ಇಂದಲ್ಲ ನಾಳೆ ತನ್ನ ಕನಸು ನನಸಾಗಿಯೇ ತೀರುತ್ತದೆ ಎಂದು ಆಕೆ ಕಾಯುತ್ತ ಕೂರುತ್ತಾಳೆ. ವಾಸ್ತವಾಂಶ ಬೇರೆಯೇ ಆಗಿರುತ್ತದೆ. ಹೀಗೆಲ್ಲ ಕನಸು ಕಾಣುವ ಹೆಣ್ಣುಮಗಳ ಬದುಕಲ್ಲಿ ಇಂತಹ ಪತಿ ಸಿಕ್ಕರೆ ಜಗಳ ಇದ್ದೆ ಇರುತ್ತದೆ, ಇವರು ಎರಡು ದಿನಗಳು ನೆಟ್ಟಗೆ ಬಾಳಲ್ಲ ಎಂದು ನೀವು ತಿಳಿದರೆ ನಿಮ್ಮ ಎಣಿಕೆ ತಪ್ಪಾಗುತ್ತದೆ. ಏಕೆಂದರೆ ಇವರ ಜಗಳ ಸಮುದ್ರದ ಮರಳ ದಂಡೆಯ ಮೇಲಿನ ಮರಳಿನ ಮನೆಯಂತೆ, ಹಾಗೆ ಬಂದ ಕೋಪ ಹೀಗೆ ಕರಗಿ ಬಿಡುತ್ತದೆ. ಇವರ ಸಫಲ ದಾಂಪತ್ಯಕ್ಕೆ ಬುನಾದಿ ನೆಮ್ಮದಿಯ ಬದುಕು. ತುಂಬಾ ಆಶ್ಚರ್ಯ ಅನ್ನಿಸಿದರೂ ಸತ್ಯ.
ಕರ್ಕಾಟಕ ರಾಶಿ ಸ್ತ್ರೀ - ಮಕರ ರಾಶಿ ಪುರುಷ : ಹೆಣ್ಣುಮಕ್ಕಳಿಗೆ ಆಸೆ, ಕನಸುಗಳು ದೊಡ್ದ ದೊಡ್ದದಾಗಿರುತ್ತವೆ. ಕೆಲವರ ಕನಸು ತುಂಬಾ ದೊಡ್ಡದಾಗಿರದಿದ್ದರೂ ಬಯಕೆಗೆ ಕೊರತೆ ಇರಲ್ಲ. ಈ ರಾಶಿ ಸ್ತ್ರೀ ಬಯಸುವುದು ಮೂರು ಮುಖ್ಯ ಸಂಗತಿಗಳನ್ನು - ಮದುವೆ, ಹಣ, ಸಂತಾನ. ಇವೆಲ್ಲವೂ ತನಗೊಂದು ಪರಿಪೂರ್ಣ ವ್ಯಕ್ತಿತ್ವ ನೀಡುತ್ತದೆ ಎಂದು ಆಕೆ ತಿಳಿಯುತ್ತಾಳೆ. ಪ್ರೀತಿ, ನಂಬಿಕೆ, ಸಹಾನುಭೂತಿ ಸದಾ ತನ್ನ ಬದುಕಲ್ಲಿ ಸಂಗಾತಿ ನೀಡಲಿ ಎಂದು ಆಕೆ ಬಯಸುತ್ತಾಳೆ. ಆದರೆ ಮಕರ ರಾಶಿ ಪುರುಷರು ತಮ್ಮ ಬಗ್ಗೆ ಸದಾ ಯೋಚಿಸುತ್ತಾರೆ. ನೇರವಾಗಿ ಹೇಳುವುದಾದರೆ ಸ್ವಲ್ಪ ಸ್ವಾರ್ಥಿಗಳು. ಆದ್ರೆ ಹಾಗೆಂದು ಇವರು ಬದುಕನ್ನು ಹಾಳುಗೆಡವುದಿಲ್ಲ. ಅಕಸ್ಮಾತ್ ಮನಕ್ಕೆ ಗಾಯ ಮಾಡಿದರೂ ಮುಲಾಂ ಹಚ್ಚುವ ಕಲೆಯನ್ನು ಚೆನ್ನಾಗಿ ಬಲ್ಲರು. ಈ ಸಂಗತಿಯು ಅವರ ಬದುಕನ್ನು ನೆಮ್ಮದಿಯಿಂದ ಇಡುತ್ತದೆ. ಬದುಕು ನಾವು ಬದುಕಿದಂತೆ ಇರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications