ಹೊಸ ವರ್ಷದಲ್ಲಿ ನಿಮ್ಮ ಬಾಳು ಇನ್ನೂ ಹಸನಾಗಿರಲಿ

ಕರ್ಕಾಟಕ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ : ಧನಸ್ಸು ರಾಶಿ ಸ್ತ್ರೀ ತುಂಬಾ ಆಶಾವಾದಿ. ಆಕೆಯು ತನ್ನ ಬದುಕಲ್ಲಿ ಅತಿ ಶ್ರೀಮಂತ ಪತಿಯನ್ನು ಬಯಸುತ್ತಾಳೆ. ತನ್ನನ್ನು ಕರೆದೊಯ್ಯಲು ರಾಜಕುಮಾರ ಬಂದೆ ಬರ್ತಾನೆ ಎನ್ನುವ ಕನಸು ಕಾಣ್ತಾ ಇರ್ತಾಳೆ. ಒಟ್ಟಾರೆ ವೈಭವಯುತ ಜೀವನದ ಮೆಲುಕು ಹಾಕ್ತಾ ಇರ್ತಾಳೆ ಆಕೆ. ಆದರೆ ಬದುಕು ನಾವು ತಿಳಿದಂತೆ ಇರದಲ್ಲ, ಆಕೆಯ ಅದೃಷ್ಟ ಹೇಗಿರುತ್ತದೆ ಅಂದ್ರೆ ಮದುವೆಯಾಗುವುದು ಅತಿ ಸಾಧಾರಣ ಮನೆಯ ಯುವಕನನ್ನು. ಅದರಲ್ಲೂ ಆತ ಕರ್ಕಾಟಕ ರಾಶಿ ಪುರುಷನಾಗಿ ಬಿಟ್ಟರೆ, ಇರುವ ಅಲ್ಪ ಸ್ವಲ್ಪ ಆಸೆಯನ್ನು ಸಹ ಬಿಟ್ಟು ಬಿಡಬೇಕು. ಯಾಕಂದ್ರೆ ಆಕೆಯ ಪುಟ್ಟ ಕನಸನ್ನು ಸಹ ಆತ ಪೂರ್ಣಗೊಳಿಸಲಾರ. ಆದರೆ ಈಕೆಯೂ ಆಶಾವಾದಿ, ಇಂದಲ್ಲ ನಾಳೆ ತನ್ನ ಕನಸು ನನಸಾಗಿಯೇ ತೀರುತ್ತದೆ ಎಂದು ಆಕೆ ಕಾಯುತ್ತ ಕೂರುತ್ತಾಳೆ. ವಾಸ್ತವಾಂಶ ಬೇರೆಯೇ ಆಗಿರುತ್ತದೆ. ಹೀಗೆಲ್ಲ ಕನಸು ಕಾಣುವ ಹೆಣ್ಣುಮಗಳ ಬದುಕಲ್ಲಿ ಇಂತಹ ಪತಿ ಸಿಕ್ಕರೆ ಜಗಳ ಇದ್ದೆ ಇರುತ್ತದೆ, ಇವರು ಎರಡು ದಿನಗಳು ನೆಟ್ಟಗೆ ಬಾಳಲ್ಲ ಎಂದು ನೀವು ತಿಳಿದರೆ ನಿಮ್ಮ ಎಣಿಕೆ ತಪ್ಪಾಗುತ್ತದೆ. ಏಕೆಂದರೆ ಇವರ ಜಗಳ ಸಮುದ್ರದ ಮರಳ ದಂಡೆಯ ಮೇಲಿನ ಮರಳಿನ ಮನೆಯಂತೆ, ಹಾಗೆ ಬಂದ ಕೋಪ ಹೀಗೆ ಕರಗಿ ಬಿಡುತ್ತದೆ. ಇವರ ಸಫಲ ದಾಂಪತ್ಯಕ್ಕೆ ಬುನಾದಿ ನೆಮ್ಮದಿಯ ಬದುಕು. ತುಂಬಾ ಆಶ್ಚರ್ಯ ಅನ್ನಿಸಿದರೂ ಸತ್ಯ.
ಕರ್ಕಾಟಕ ರಾಶಿ ಸ್ತ್ರೀ - ಮಕರ ರಾಶಿ ಪುರುಷ : ಹೆಣ್ಣುಮಕ್ಕಳಿಗೆ ಆಸೆ, ಕನಸುಗಳು ದೊಡ್ದ ದೊಡ್ದದಾಗಿರುತ್ತವೆ. ಕೆಲವರ ಕನಸು ತುಂಬಾ ದೊಡ್ಡದಾಗಿರದಿದ್ದರೂ ಬಯಕೆಗೆ ಕೊರತೆ ಇರಲ್ಲ. ಈ ರಾಶಿ ಸ್ತ್ರೀ ಬಯಸುವುದು ಮೂರು ಮುಖ್ಯ ಸಂಗತಿಗಳನ್ನು - ಮದುವೆ, ಹಣ, ಸಂತಾನ. ಇವೆಲ್ಲವೂ ತನಗೊಂದು ಪರಿಪೂರ್ಣ ವ್ಯಕ್ತಿತ್ವ ನೀಡುತ್ತದೆ ಎಂದು ಆಕೆ ತಿಳಿಯುತ್ತಾಳೆ. ಪ್ರೀತಿ, ನಂಬಿಕೆ, ಸಹಾನುಭೂತಿ ಸದಾ ತನ್ನ ಬದುಕಲ್ಲಿ ಸಂಗಾತಿ ನೀಡಲಿ ಎಂದು ಆಕೆ ಬಯಸುತ್ತಾಳೆ. ಆದರೆ ಮಕರ ರಾಶಿ ಪುರುಷರು ತಮ್ಮ ಬಗ್ಗೆ ಸದಾ ಯೋಚಿಸುತ್ತಾರೆ. ನೇರವಾಗಿ ಹೇಳುವುದಾದರೆ ಸ್ವಲ್ಪ ಸ್ವಾರ್ಥಿಗಳು. ಆದ್ರೆ ಹಾಗೆಂದು ಇವರು ಬದುಕನ್ನು ಹಾಳುಗೆಡವುದಿಲ್ಲ. ಅಕಸ್ಮಾತ್ ಮನಕ್ಕೆ ಗಾಯ ಮಾಡಿದರೂ ಮುಲಾಂ ಹಚ್ಚುವ ಕಲೆಯನ್ನು ಚೆನ್ನಾಗಿ ಬಲ್ಲರು. ಈ ಸಂಗತಿಯು ಅವರ ಬದುಕನ್ನು ನೆಮ್ಮದಿಯಿಂದ ಇಡುತ್ತದೆ. ಬದುಕು ನಾವು ಬದುಕಿದಂತೆ ಇರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications