ಸುಳ್ಳಿನ ಕೋಟೆಗಿಂತ ಸತ್ಯದ ಗುಡಿಸಲೇ ಮೇಲು!

* ಧವಳ
ಮಿಥುನ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ವಿಷಯ ಎಷ್ಟೇ ಚಿಕ್ಕದಾದರೂ ಸಹ ಇಬ್ಬರೂ ತಪ್ಪದೆ ಅದರ ಬಗ್ಗೆ ಗಂಟೆಗಟ್ಟಲೆ ಮಾತಾಡುವ ಗುಣ ಹೊಂದಿರುತ್ತಾರೆ. ಅಂದ್ರೆ ಇಬ್ಬರು ಬ್ಲೇಡ್ ಪಾರ್ಟಿಗಳು. ಆದರೆ ಕನ್ಯಾ ರಾಶಿಯವರ ವಿಚಿತ್ರ ಗುಣ ಅಂದ್ರೆ ತಮ್ಮ ಸಂಗಾತಿ ಏನೇ ಹೇಳಿದ್ರು ಸುಳ್ಳು ಹೇಳ್ತಾ ಇದ್ದಾರೆ ಎಂದು ತಿಳಿಯುವುದು. ಯಾವಾಗ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆಯೋ ಆಗ ಸಿಟ್ಟು ಮೂಗಿನ ಮೇಲೆ ಕುಣಿದಾಡುತ್ತದೆ. ಬೇರೆಯವರ ವಿಷಯ ಪಕ್ಕಕ್ಕೆ ಇಡಿ, ತಮ್ಮ ಸಂಗಾತಿಯನ್ನೇ ಹುರಿದು ಮುಕ್ಕಿಬಿಡ್ತಾರೆ. ತಮ್ಮ ಮೂಗಿನ ನೇರಕ್ಕೆ ನಡೆಯುವ ಗುಣ ಇವರ ಬದುಕಿನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಆಗ ಮೊಟ್ಟ ಮೊದಲು ಈ ಗುಣಕ್ಕೆ ಬಲಿಪಶು ಆಗುವುದು ಸಂಗಾತಿ ಅಲ್ಲದೆ ಮತ್ಯಾರು? ಅದೇನೋ ಹೇಳ್ತಾರೆ, ಜಗಳ ಇದ್ದ ಕಡೆ ಪ್ರೀತಿ ಹೆಚ್ಚು ಅಂತ. ಆದರೆ ಇವರ ವಿಷಯದಲ್ಲೂ ಸಹ ಸಿಕ್ಕಾಪಟ್ಟೆ ಕೋಪತಾಪ ಇದ್ರೂ ಪ್ರೀತಿಗೇನು ಕೊರತೆ ಇರಲ್ಲ. ಕೋಪಿಸಿಕೊಂಡೆ ಪ್ರೀತಿ ಮಾಡುವ ಗುಣ ಈ ಜೋಡಿಯಲ್ಲಿದೆಯಾದ್ರೂ, ನನಗೆ ನೀನಂದ್ರೆ ತುಂಬಾ ಇಷ್ಟ ಕಣೆ ಚಿನ್ನ, ಅಯ್ಯೋ ನೀವೂ ಅಂದ್ರೆ ನನ್ ಜೀವ ದೇವ್ರು ಎಂದು ಒಬ್ಬರಿಗೊಬ್ಬರಿಗೆ ಹೇಳಿಕೊಳ್ಳಲು ಬರೋದೆ ಇಲ್ಲ. ಆ ವಿಷಯದಲ್ಲಿ ಸ್ವಲ್ಪ ಡಲ್ಲು, ತುಂಬಾ ಪೂರು! ಮಾತು ಮಾತಿಗೂ ಜಗಳ ಆಡುವ ಈ ಜೋಡಿಗಳು ತಮ್ಮ ಪ್ರೀತಿಯನ್ನು ಹೇಳಿಕೊಂಡಾಗ ಮಾತ್ರ ಸಂಬಂಧ ಉಳಿಯೋದು. ಕೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಯಾಕೆ ಅಲಿತೀರಿ!
ಮಿಥುನ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ಇವರಿಬ್ಬರ ಆಲೋಚನೆಗಳು, ಭಾವಗಳೆರಡೂ ಒಂದೇ ಆಗಿದೆ. ಇಬ್ಬರೂ ಸಮಾನತೆಗೆ ಆದ್ಯತೆ ಕೊಡ್ತಾರೆ. ಈ ಸಂಗತಿಯು ಜಗಳಕ್ಕೆ ಕಾರಣ ಆಗುತ್ತದೆ. ಮೇಲೆ ಕಂಡಷ್ಟು ಅಮಾಯಕರು ಹಾಗೂ ಶಾಂತ ಸ್ವಭಾವದವರಲ್ಲ ಈ ತುಲಾ ರಾಶಿಯವರು. ಕೇವಲ ಒಂದು ನಿರ್ಣಯ ತೆಗೆದುಕೊಳ್ಳಬೇಕಾದರೆ ವರ್ಷಗಟ್ಟಲೆ ತೆಗೆದುಕೊಂಡರೂ ಆಶ್ಚರ್ಯವಿಲ್ಲ. ತಾವು ಗೆಲ್ಲಲೇಬೇಕು ಎನ್ನುವ ಹಠ ಇವರದು. ಅದಕ್ಕಾಗಿ ಸುಳ್ಳು ಹೇಳುವುದಕ್ಕೂ ಹಿಂದೂ ಮುಂದೆ ನೋಡಲ್ಲ. ಸಂಗಾತಿಯ ಈ ಗುಣವೇ ಮಿಥುನ ರಾಶಿಯವರ ಸ್ತ್ರೀಯರ ಮೈ ಉರಿಯೋದು, ಸಿಟ್ಟು ಬರಲು ಕಾರಣ ಆಗೋದು. ಸಂಸಾರ ಸಾಗರದಲ್ಲಿ ನಿಮ್ಮ ಜೊತೆ ದಡ ಸೇರಲು ಬಂದ ಸಂಗಾತಿಯ ವಿಷಯದಲ್ಲಿ ಸ್ವಲ್ಪ ಗಮನ ಇರಲಿ! ಸುಳ್ಳು ಪೊಳ್ಳಾದ ಕೋಟೆಗಿಂತ ಸತ್ಯದ ಗುಡಿಸಲು ಕಟ್ಟುವ ಪ್ರಯತ್ನ ಮಾಡಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications