ಗಂಡ ಹೆಂಡತಿ ಅಂದರೆ ಹೀಗಿರಬೇಕು

ವೃಷಭ ರಾಶಿಯ ಪುರುಷರು ಪ್ರೀತಿಸುತ್ತಾರೆ, ಆದರೆ ಅದನ್ನು ಅಷ್ಟೆ ಬೇಗ ಮರೆತು ಹೋಗ್ತಾರೆ. ಅದೇ ರೀತಿ ಮಿಥುನ ರಾಶಿ ಸ್ತ್ರೀಯರು ಅಭಿಪ್ರಾಯಗಳನ್ನು ಹರಿಬರಿಯಾಗಿ ತೆಗೆದುಕೊಳ್ತಾರೆ. ಹಾಗೆಂದು ಎಲ್ಲವೂ ಪರ್ಫೆಕ್ಟ್ ಆಗಿ ಇರುತ್ತದೆ ಎಂದು ಇದರ ಅರ್ಥ ಅಲ್ಲ. ಸಾಕಷ್ಟು ಸಂದರ್ಭಗಳಲ್ಲಿ, ತಮಾಷೆ ಅಂದ್ರೆ, ಅವರಿಗೇನು ಬೇಕು ಎನ್ನುವ ಅಂಶ ಸ್ವಯಂ ಅವರಿಗೇ ತಿಳಿದಿರುವುದಿಲ್ಲ. ಅದನ್ನು ವ್ಯಕ್ತಪಡಿಸುವ ಗುಣವೂ ಇರುವುದಿಲ್ಲ. ಆದರೆ ವೃಷಭ ರಾಶಿ ಪುರುಷ ಶಾಂತ ಸ್ವಭಾವ ಹೊಂದಿರುತ್ತಾರೆ. ಸೊ, ಅದು ಮಿಥುನ ರಾಶಿಯ ಹೆಣ್ಣಿನ ಈ ಗುಣವನ್ನು ತಾಳ್ಮೆಯಿಂದ ನೋಡಲು ಕಾರಣ ಆಗುತ್ತದೆ. ಮತ್ತೊಂದು ಸಂಗತಿ ಈ ರಾಶಿ ಪುರುಷ ಧೈರ್ಯಕ್ಕೆ ಹೆಸರುವಾಸಿ. ಯಾವುದೇ ಕೆಲಸವನ್ನು, ಸಮಸ್ಯೆಯನ್ನು ಸಹನೆಯಿಂದ ಪರಿಹರಿಸುತ್ತಾರೆ. ಈಕೆ ಆತುರಕ್ಕೆ ಈತನ ಸಮಾಧಾನ ಗುಣ ಹೊಂದಿಕೆ ಆಗುತ್ತದೆ.
ವೃಷಭ ರಾಶಿ ಸ್ತ್ರೀ - ಕರ್ಕಾಟಕ ರಾಶಿ ಪುರುಷ
ಒಬ್ಬರನ್ನೊಬ್ಬರು ಕಂಡ ತಕ್ಷಣ ಕಣ್ಣೋಟ ಬೆರೆತು ಮರುಕ್ಷಣವೇ ಲವ್ ಉಂಟಾಗದು. ಇವರಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತ ಬಳಿಕವಷ್ಟೇ ಸಮ್ಮತಿಯ ಮುದ್ರೆ ಒತ್ತುವುದು. ಆಮೇಲೆ ನೋಡ್ರಿ ಇಬ್ಬರೂ ಜಕ್ಕವಕ್ಕಿಗಳಂತೆ ಒಬ್ಬರನ್ನೊಬ್ಬರು ಬಿಡರು. ಅಷ್ಟು ಪ್ರೀತಿಸ್ತಾರೆ ಅಂದ್ರೆ ಬೇರೆಯವರು ಅಯ್ಯೋ ನಮಗೆ ಇಲ್ಲವಲ್ಲ ಇಂತಹ ಬದುಕು ಎಂದು ಹೊಟ್ಟೆ ಉರಿದು ಕೊಳ್ಳುವಷ್ಟು! ಒಬ್ಬರಿಗಾಗಿ ಒಬ್ಬರು ಹುಟ್ಟಿದ್ದಾರೆ ಎನ್ನುವಷ್ಟು ಪ್ರೀತಿಸುತ್ತಾ ಇರ್ತಾರೆ. ವೃಷಭ ರಾಶಿ ಸ್ತ್ರೀಯರಿಗೆ ಧೈರ್ಯದ ಕೊರತೆ. ಕೋಪವಂತೂ ಶೀಘ್ರವಾಗಿ ಬರುತ್ತದೆ. ಕರ್ಕಾಟಕ ರಾಶಿ ಪುರುಷರು ಇದಕ್ಕೆ ವ್ಯತಿರಿಕ್ತವಾಗಿ ಇರ್ತಾರೆ. ಸಮಚಿತ್ತ ಇವರ ಪ್ಲಸ್ ಪಾಯಿಂಟ್. ಶಾಂತವಾಗಿದ್ದು ಸಮಸ್ಯೆಯನ್ನು ನಿಭಾಯಿಸುತ್ತಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications