ನೀರಿನಷ್ಟೇ ಸ್ವಚ್ಛವಿರಬೇಕು ಗಂಡು ಹೆಣ್ಣಿನ ಬಾಂಧವ್ಯ

ಕರ್ಕಾಟಕ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ತನ್ನ ಪರಿವಾರದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಕುಂಭ ರಾಶಿ ಸ್ತ್ರೀಯರಿಗೆ. ಮತ್ತೊಂದು ವಿಷಯದಲ್ಲಿ ಇವರು ಸ್ವಲ ಭಿನ್ನ ಗುಣವನ್ನು ಹೊಂದಿರುತ್ತಾರೆ. ಹಳೆಯದನ್ನು ಎಂದಿಗೂ ಮರೆಯೋಲ್ಲ. ಒಟ್ಟಾರೆ ಎಲ್ಲ ವಿಷಯದಲ್ಲೂ ಸಂಪೂರ್ಣವಾದ ಗಮನ ಹೊಂದಿರುತ್ತಾರೆ. ಇವರಿಗೆ ವಿರುದ್ಧವಾದ ಗುಣ ಹೊಂದಿರುವವರು ಕರ್ಕಾಟಕ ರಾಶಿ ಪುರುಷರು. ಅವರು ಹಿಂದಿನದು-ಈಗಿನದರ ಬಗ್ಗೆ ಚಿಂತಿಸಲ್ಲ. ಆದರೆ ಅವರ ಗಮನ ಭವಿಷ್ಯದತ್ತ. ಕುಂಭ ರಾಶಿ ಸ್ತ್ರೀ ಸ್ವಲ್ಪ ಜಾಸ್ತೀನೆ ಪೊಸೆಸಿವ್. ತನ್ನ ಸಂಗಾತಿ ತನ್ನ ಬಗ್ಗೆ ಹೆಚ್ಚು ಗಮನ ನೀಡಬೇಕು, ತನ್ನನ್ನು ಬಿಟ್ರೆ ಯಾರ ಬಗ್ಗೆನೂ ಚಿಂತಿಸಬಾರದು ಎಂದು ಬಯಸುತ್ತಾಳೆ. ಆದರೆ ಇದು ಸಾಧ್ಯವಿಲ್ಲದ ಸಂಗತಿ. ಕೇವಲ ಇಷ್ಟು ಮಾತ್ರವಲ್ಲ, ಪತಿಯ ಸರ್ವತೋಮುಖ ಬೆಳವಣಿಗೆಗೆ ತಾನು ಬೆನ್ನೆಲುಬಾಗಿ ನಿಲ್ಲಲು ಆಶಿಸುತ್ತಾಳೆ. ಆತನ ಏಳಿಗೆಯೇ ತನ್ನ ಗುರಿ ಎಂದು ತಿಳಿಯುವ ಹೆಣ್ಣುಮಗಳು ಈಕೆ.
ಕರ್ಕಾಟಕ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಈ ಎರಡು ರಾಶಿಗಳು ನೀರಿನಲ್ಲಿ ವಾಸಿಸುವ ಪ್ರಾಣಿಗಳು. ಆದ್ದರಿಂದ ನೀರಿನಷ್ಟೇ ಸ್ವಚ್ಛವಾಗಿರುತ್ತದೆ ಇವರಿಬ್ಬರ ಬಾಂಧವ್ಯ! ಚಿಕ್ಕ-ದೊಡ್ದ ಎಂತಹುದೇ ಸಮಸ್ಯೆಗಳಿದ್ದರೂ ಹೊಂದಿಕೊಂಡು ಹೋಗುತ್ತಾರೆ. ಈ ಸ್ತ್ರೀಯರು ಹಣವನ್ನು ಭವಿಷ್ಯಕ್ಕಾಗಿ ಕೂಡಿಡಬೇಕು ಎಂದು ಬಯಸುತ್ತಾರೆ. ಆದರೆ ಮೀನ ರಾಶಿ ಪುರುಷ ಸ್ವಲ್ಪ ಹಿಡಿತ ತಪ್ಪಿದ ವರ್ತನೆಯನ್ನು ಹೊಂದಿರುತ್ತಾರೆ. ಇರುವ ಹಣವನ್ನು ತಮ್ಮ ಆಪ್ತರು-ಸ್ನೇಹ ಬಳಗಕ್ಕೆ ನೀಡಿ ಗೋವಿಂದಾ ಎಂದು ಕುಳಿತು ಬಿಡ್ತಾರೆ. ಹೆಂಡತಿಯ ಹಿಡಿತ ಕಂಡಾಗ ಅಯ್ಯೋ ಕಂಜೂಸ್ ಎಂದು ಹೀಗಳೆಯುತ್ತಾರೆ. ಆಕೆಯೂ ಇದೇ ವರ್ತನೆಯನ್ನು ಹೊಂದಿದರೆ ಸಂಸಾರ ರಥವು ಎಂದಿಗೂ ಸುಗಮವಾಗಿ ಸಾಗದು. ಹಿಡಿತ ಬದುಕನ್ನು ಸುಂದರಾಗಿಡುತ್ತದೆ. ಭವಿಷ್ಯವನ್ನು ಆರಾಮವಾಗಿಡುತ್ತದೆ ಎನ್ನುವ ಸಂಗತಿಯನ್ನು ಎಂದಿಗೂ ಮರೆಯಬಾರದು. ಆಕೆಯ ಗುಣ ಅರಿತರೆ ಮನೆ-ಮನವು ಶಾಂತಿಯಿಂದ ಕೂಡಿರುತ್ತದೆ.
ಕರ್ಕಾಟಕ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ಕರ್ಕಾಟಕ ರಾಶಿ ಪುರುಷ ಮತ್ತು ಮೀನ ರಾಶಿ ಸ್ತ್ರೀಯದು ಅವಿನಾಭಾವ ಸಂಬಂಧ. ಬಾಲ್ಯ ಸ್ನೇಹಿತ ದಂಪತಿಗಳು ಎಂದು ಕರೆಯಬಹುದು. ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಹೆಚ್ಚಿನ ಗಮನ ಕೊಡುತ್ತಾರೆ. ಇಬ್ಬರಲ್ಲೂ ಜಗಳ-ಕದನ ಇದ್ದಿದ್ದೆ, ಆದರೆ ಅವರು ಅದನ್ನು ಹೆಚ್ಚು ಕಾಲ ಬೆಳೆಸುವುದಿಲ್ಲ. ಮನಸ್ಸುಗಳು ಬೆಸೆದಿರುವ ಈ ದಂಪತಿಗಳು ಪ್ರೀತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಕಸ್ಮಾತ್ ಇಬ್ಬರಲ್ಲೂ ಭಿನ್ನಾಭಿಪ್ರಾಯ ಇದ್ದರೆ ತಕ್ಷಣವೇ ಸರಿಪಡಿಸಿಕೊಂಡು ಬಿಡ್ತಾರೆ. ಕೂಡಿಬಾಳಿದರೆ ಸ್ವರ್ಗ ಸುಖ ಎನ್ನುವ ಅಂಶಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ದಂಪತಿಗಳು ಇವರು. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications