ಅತಿಯಾದ ಸಿಹಿಯೂ ಬಾಳಲ್ಲಿ ಕಹಿಯಾಗಬಲ್ಲದು

ಕರ್ಕಾಟಕ ರಾಶಿ ಪುರುಷ - ಮಕರ ರಾಶಿ ಸ್ತ್ರೀ : ಕರ್ಕಾಟಕ ರಾಶಿ ಪುರುಷರು ಸಿಕ್ಕಾಪಟ್ಟೆ ಭಾವುಕರು. ತುಂಬಾ ಶೀಘ್ರವಾಗಿ ದಣಿದು ಹೋಗ್ತಾರೆ. ಮಕರ ರಾಶಿ ಸ್ತ್ರೀಯರ ವಿಷಯಕ್ಕೆ ಬರುವುದಾದರೆ ಅವರು ಪಕ್ಕಾ ಮಾಡರ್ನ್ ಹೆಣ್ಣುಮಗಳು. ಎಲ್ಲದಕ್ಕೂ ಸೈ. ಏನು ಮಾಡುವುದಕ್ಕೂ ಹೆದರುವುದಿಲ್ಲ. ಎಲ್ಲಾ ಬಗೆಯ ಚಾಲೆಂಜ್ ಸುಲಭವಾಗಿ ನಿಭಾಯಿಸುವ ಮನಸ್ಥಿತಿ ಹೊಂದಿರುತ್ತಾಳೆ. ಇಷ್ಟೆ ಅಲ್ಲದೆ, ಯಾವುದೇ ಕೆಲಸವನ್ನು ತಡ ಮಾಡದೆ ಬೇಗ ಬೇಗ ಮುಗಿಸಬೇಕು ಎನ್ನುವ ಮನೋಭಾವ ಹೊಂದಿರುತ್ತಾಳೆ. ಈಕೆಯ ಬಳಿ ಅತಿ ಭಾವುಕತೆಗೆ ಜಾಗ ಇಲ್ಲ. ಆಲೋಚನೆಗಳು ಅಷ್ಟೆ ಫಟ್ ಫಟ್ ಎಂದು ಬರುತ್ತವೆ. ಈಕೆಯ ಈ ಸ್ವಭಾವ ಈ ಭಾವುಕ ಗಂಡಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಆಗ ಜಗಳ-ವಾದ ವಿವಾದ ಎಲ್ಲವು ಹುಟ್ಟುತ್ತವೆ. ಒಂದು ಪ್ಲಸ್ ಪಾಯಿಂಟ್ ಅಂದರೆ, ಆ ಜಗಳ, ಕದನ ವಿಪರೀತಕ್ಕೆ ತಿರುಗುವುದಿಲ್ಲ, ತಿರುಗಲು ಇವರು ಬಿಡುವುದಿಲ್ಲ. ಇದು ಅವರ ಬದುಕನ್ನು ತುಂಬಾ ಚೆನ್ನಾಗಿಡುವಲ್ಲಿ ಸಫಲ ಆಗುತ್ತದೆ.
ಕರ್ಕಾಟಕ ರಾಶಿ ಸ್ತ್ರೀ - ಕುಂಭ ರಾಶಿ ಪುರುಷ : ಸ್ವತಂತ್ರ ಮನದ ಜೋಡಿ ಹಕ್ಕಿಗಳು. ತಮ್ಮ ಸ್ವಾತಂತ್ರಕ್ಕೆ ಅಡ್ಡಿ ಬರುವುದನ್ನು ಸಹಿಸರು. ಕುಂಭ ರಾಶಿ ಪುರುಷನ ವಿಷಯಕ್ಕೆ ಬರುವುದಾದರೆ, ಈತನ ಗುಣ ಸ್ವಲ್ಪ ಅತೀ ಎನ್ನಿಸುವಂತಹ ವಿಚಿತ್ರ ಮನಸ್ಥಿತಿ. ಒಟ್ಟಾರೆ ಹೇಳುವುದಾದರೆ ಆತ ಕ್ಷಣ ಚಿತ್ತ ಕ್ಷಣ ಪಿತ್ತ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿ. ಈತನಿಗೆ ತಾನು ಮಾಡುವ ಕೆಲಸಗಳನ್ನು ಬದಲಾಯಿಸುವ ಸ್ವಭಾವ. ಇಂದು ಸಂಗೀತಗಾರನಾಗಬೇಕು ಎಂದುಕೊಂಡು ಅದಕ್ಕೆ ಪೂರಕವಾದ ಪ್ರಯತ್ನ ಆರಂಭಿಸುತ್ತಾನೆ, ಅದಾದ ಸ್ವಲ್ಪ ಕಾಲಕ್ಕೆ ಮತ್ತೆ ಇನ್ಯಾವುದು ಕೆಲಸದ ಕಡೆಗೆ ಗಮನ ಹೋಗುತ್ತದೆ. ಈ ರೀತಿಯ ಚಂಚಲ ಸ್ವಭಾವ ಅನೇಕ ಸಮಸ್ಯೆಗಳ ಹುಟ್ಟಿಗೆ ಕಾರಣ ಆಗುತ್ತದೆ. ಮದುವೆ ಆಗದೆ ಇದ್ರೆ ಇಂತಹ ಸಾಹಸಗಳಿಂದ ಯಾರಿಗೂ ತೊಂದರೆ ಇಲ್ಲ. ಮದುವೆ ಆದ್ರೆ ಆತನನ್ನು ನಂಬಿ ಬಂದ ಜೀವಕ್ಕೆ ಇಂತಹ ಹುಚ್ಚುತನಗಳಿಂದ ಕಿರಿಕಿರಿ ಉಂಟಾಗದಿರಲು ಸಾಧ್ಯವೆ? ಆಕೆ ನೆಮ್ಮದಿಯು ಕರಗುತ್ತದೆ. ಇದು ಬದುಕಿನ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯೋಚಿಸಿ ಮುಂದೆ ಹೆಜ್ಜೆ ಇಡಿ. ಕೈಯಾರೆ ಬದುಕನ್ನು ಹಾಳು ಮಾಡಿಕೊಳ್ಳುವ ಪ್ರಯತ್ನ ಮಾಡದಿರಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications