Artificial intelligence: 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ AI ಸಹಾಯದಿಂದ ಅರೆಸ್ಟ್
ಕೃತಕ ಬುದ್ಧಿಮತ್ತೆ (ಎಐ) ಇಂದು ಹಲವು ರೀತಿಯಲ್ಲಿ ಕೆಲಸಗಳನ್ನು ಸರಳ ಮಾಡುತ್ತಿದೆ. ಇದು ಅಪರಾಧ ಪ್ರಕರಣಗಳನ್ನು ಭೇದಿಸುವ ಹಂತಕ್ಕೂ ತಲುಪಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಬೆಂಗಳೂರಿನಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಬಂಧಿಸಲು ಸಿಬಿಐಗೆ ಈ ಎಐ ಇಮೇಜ್ ಸರ್ಚ್ ಸಹಾಯ ಮಾಡಿದೆ. ಸುಮಾರು ಎರಡು ದಶಕಗಳ ತನಿಖೆಯ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 8 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಹೊತ್ತಿರುವ ಖಾಸಗಿ ಸಂಸ್ಥೆಯ ಮಾಜಿ ನಿರ್ದೇಶಕಿಯನ್ನು ಸಿಬಿಐ ಬಂಧಿಸಿದೆ.
ಆರೋಪಿಯನ್ನು ಬಂಧಿಸಲು ಸುಧಾರಿತ ಎಐ ಇಮೇಜ್ ಸರ್ಚ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಸಿಬಿಐ ಬಂಧಿತ ಆರೋಪಿಯನ್ನು ಮಣಿ ಎಂ ಶೇಖರ್ ಎಂದು ಗುರುತಿಸಲಾಗಿದೆ. ಅವರು ಇಂಡೋ ಮಾರ್ಕ್ಸ್ & ಬಿಟಿಸಿ ಹೋಮ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದರು. ಈ ವಂಚನೆ ಪ್ರಕರಣವು 2002-2005ರ ಹಿಂದಿನದು. ಬೆಂಗಳೂರು ಮೂಲದ ದಂಪತಿಗಳಾದ ರಾಮಾನುಜಮ್ ಮತ್ತು ಮಣಿ ಎಂ.ಶೇಖರ್ ಅವರು ಎಸ್ಬಿಐನ ವಿದೇಶಿ ಶಾಖೆಗೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಬಿಐ 2006ರಲ್ಲಿ ಎಫ್ಐಆರ್ ದಾಖಲಿಸಿ 2007ರಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು. ಆದರೂ ಇಬ್ಬರು ಆರೋಪಿಗಳು ನ್ಯಾಯಾಲಯದ ಸಮನ್ಸ್, ವಾರಂಟ್ಗೆ ಪ್ರತಿಕ್ರಿಯಿಸದೆ ಪತ್ತೆಯಾಗದೆ ಹೋದರು. 2009ರಲ್ಲಿ ಇವರನ್ನು ಪ್ರೊಕ್ಲೈಮ್ಡ್ ಆಫೆಂಡರ್ಸ್ ಎಂದು ಘೋಷಿಸಲಾಯಿತು. ಮಾನಸಿಕವಾಗಿ ಮತ್ತು ಪರಿಪೂರ್ಣವಾಗಿ ಅವರು ಹೆಸರು, ವಿಳಾಸ, ಮೊಬೈಲ್, ಇಮೇಲ್, ಪ್ಯಾನ್ ಸೇರಿ ಪೊಲೀಸರಿಗೆ ಪತ್ತೆಯಾಗದಂತೆ ಎಲ್ಲ ವಿವರಗಳನ್ನು ಬದಲಿಸಿದ್ದರು. ಪತಿ 'ಕೃಷ್ಣ ಕುಮಾರ್ ಗುಪ್ತಾ', ಮಣಿ 'ಗೀತಾ ಕೃಷ್ಣ ಕುಮಾರ್ ಗುಪ್ತಾ' ಎಂಬ ಹೊಸ ಹೆಸರಿನಲ್ಲಿ ಇಂದೋರ್ನಲ್ಲಿ ಜೀವನ ನಡೆಸುತ್ತಿದ್ದರು.
ಪತ್ತೆ ಹಚ್ಚಿದ್ದು ಹೇಗೆ?
ಸಿಬಿಐ ಅತ್ಯಾಧುನಿಕ ಇಮೇಜ್ ಸರ್ಚ್ ಮತ್ತು ಡಿಜಿಟಲ್ ವಿಶ್ಲೇಷಣಾ ಸಾಧನಗಳ ಮೂಲಕ ಇವರ ಹೊಸ ಡಿಜಿಟಲ್ ಗುರುತುಗಳನ್ನು ಪತ್ತೆ ಹಚ್ಚಿತು. ಇದರಲ್ಲಿ ಫೋಟೋ ಮ್ಯಾಚಿಂಗ್ ಶೇ 90ಕ್ಕಿಂತ ಹೆಚ್ಚು ಯಶಸ್ವಿಯಾಯಿತು. ಸ್ಥಳ ಪರಿಶೀಲನೆಯ ನಂತರ ಮಣಿಯನ್ನು ಇತ್ತೀಚೆಗೆ ಇಂದೋರ್ನಲ್ಲಿ ಬಂಧಿಸಲಾಯಿತು. ಅವರನ್ನು ಬೆಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆಯು ಭಾರತದಲ್ಲಿ ಎಐ ಆಧಾರಿತ ಫೋಟೋ ಪತ್ತೆ ಹಚ್ಚುವ ತಂತ್ರಜ್ಞಾನದಿಂದ ದೀರ್ಘ ಕಾಲದಿಂದ ತಪ್ಪಿಸಿಕೊಳ್ಳುತ್ತಿದ್ದ ಆರ್ಥಿಕ ಅಪರಾಧಿಗಳನ್ನು ಪತ್ತೆ ಹಚ್ಚಲು ದೊಡ್ಡ ಸಾಧನವಾಗಿದೆ.
ಸಿಬಿಐ ತಂಡಗಳು ಆರೋಪಿಯನ್ನು ಇಂದೋರ್ನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದವು. ತನಿಖೆಯ ಪ್ರಕಾರ ರಾಮಾನುಜಮ್ 2008ರಲ್ಲಿ ಸಾವನ್ನಪ್ಪಿದ್ದಾನೆ. ಆರೋಪಪಟ್ಟಿ ಸಲ್ಲಿಸಿದ ಕೇವಲ ಒಂದು ವರ್ಷದ ನಂತರ ಮತ್ತು ಘೋಷಿತ ಅಪರಾಧಿ ಎಂದು ಘೋಷಿಸಲ್ಪಡುವ ಒಂದು ವರ್ಷದ ಮೊದಲು ಆತ ಬೇರೆ ಹೆಸರಿನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications