ಹೊಸ ಯೂರಿಯಾ ನೀತಿ, ರೈತ ಸ್ನೇಹಿ: ಅನಂತ್ ಕುಮಾರ್
ನವದೆಹಲಿ, ಮೇ.14: ಹೊಸ ಯೂರಿಯಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ನಾಲ್ಕು ಹಣಕಾಸು ವರ್ಷಗಳಿಗೆ ಅನ್ವಯವಾಗುವಂತೆ ಹೊಸ ಯೂರಿಯಾ ನೀತಿಗೆ (2015) ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇಂಧನ ಕ್ಷಮತೆ ಹಾಗೂ ಯೂರಿಯಾ ಉತ್ಪಾದನೆ ಹೆಚ್ಚಳ ಮುಂತಾದ ಗುರಿ ಹೊಂದಲಾಗಿದೆ. ಸಂಪೂರ್ಣ ರೈತ ಸ್ನೇಹಿಯಾಗಿದೆ ಎಂದು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಆಂತರಿಕ ಉತ್ಪಾದನೆಯನ್ನು 2 ದಶಲಕ್ಷ ಟನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ವಾರ್ಷಿಕ 4,800 ಕೋಟಿ ರೂಪಾಯಿ ಮೊತ್ತದ ಸಹಾಯಧನವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.[13 ಲಕ್ಷ ಟನ್ ಗೊಬ್ಬರ ತಯಾರಿಸಲು ಯೋಜನೆ]
ಬೇವಿನ ಲೇಪನವುಳ್ಳ ಯೂರಿಯಾ: ಯೂರಿಯಾದ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ಹೆಚ್ಚಿಸಲಾಗಿಲ್ಲ. 50 ಕೆ.ಜಿ. ತೂಕದ ಯೂರಿಯಾ ಚೀಲವು ರೈತರಿಗೆ 268 ರುಪಾಯಿಗಳಿಗೆ ಸಿಗಲಿದೆ. ಇದಕ್ಕೆ ಪ್ರಾದೇಶಿಕಗಳನ್ನು ಸೇರಿಸುವುದಿಲ್ಲ. ಕಹಿಬೇವಿನ ಲೇಪನವುಳ್ಳ ಯೂರಿಯಾ ಚೀಲವೊಂದಕ್ಕೆ 14 ರುಪಾಯಿ ಹೆಚ್ಚುವರಿ ಬೆಲೆ ತೆರಬೇಕಾಗುತ್ತದೆ.

ಇಲಾಖೆಯ ಮುಂದಿನ ಗುರಿ: ಮುಂದಿನ ನಾಲ್ಕು ಹಣಕಾಸು ವರ್ಷಗಳಿಗೆ ಅನ್ವಯವಾಗುವಂತೆ ಹೊಸ ಯೂರಿಯಾ ನೀತಿಗೆ (2015) ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಆಂತರಿಕ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವುದು, ಯೂರಿಯಾ ಘಟಕಗಳಲ್ಲಿ ಇಂಧನ ಕ್ಷಮತೆಯನ್ನು ಹೆಚ್ಚಿಸುವುದು, ಸರಕಾರದ ಸಹಾಯಧನದ ಹೊರೆಯನ್ನು ತಗ್ಗಿಸುವುದು. [ಪ್ರಮುಖ ಸ್ಥಾನದಿಂದ ಅನಂತ್ ಕುಮಾರ್ ಹೊರಕ್ಕೆ]
ಸಹಾಯಧನದ ರೂಪದಲ್ಲಿ ನೇರವಾಗಿ 2,618 ಕೋಟಿ ರೂಪಾಯಿ ಹಾಗೂ ಇಂಧನ ಉಳಿತಾಯ ಸೇರಿದಂತೆ ಬೇರೆಬೇರೆ ಕ್ರಮಗಳಿಂದ ಪರೋಕ್ಷವಾಗಿ 2,211 ಕೋಟಿ ರೂಪಾಯಿ ಉಳಿತಾಯದ ಉದ್ದೇಶವನ್ನು ಹೊಸ ಯೂರಿಯಾ ನೀತಿಯಲ್ಲಿ ಹೊಂದಲಾಗಿದೆ. ಒಟ್ಟಾರೆಯಾಗಿ 4,829 ಕೋಟಿ ರೂಪಾಯಿ ಉಳಿತಾಯದ ಗುರಿಯನ್ನು ಹೊಂದಲಾಗಿದೆ
ಹೊಸ ನೀತಿಯಲ್ಲಿ ವಾರ್ಷಿಕ 2 ದಶಲಕ್ಷ ಟನ್ ಹೆಚ್ಚುವರಿ ಯೂರಿಯಾ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ದೇಶದ ಆಂತರಿಕ ಯೂರಿಯಾ ಉತ್ಪಾದನೆಯು ವಾರ್ಷಿಕ 22 ದಶಲಕ್ಷ ಟನ್ ನಷ್ಟಿದೆ. ಇದರಿಂದಾಗಿ ವಾರ್ಷಿಕ 8 ದಶಲಕ್ಷ ಟನ್ ಯೂರಿಯಾವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. [ರಸಗೊಬ್ಬರ ಅಮೋನಿಯಂ ನೈಟ್ರೇಟಿಗೆ ನಿಷೇಧ?]
ಭಾರತದಲ್ಲಿ ಸುಮಾರು 310 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಪ್ರಮಾಣದ ರಸಗೊಬ್ಬರ ಬೇಡಿಕೆ ಇದ್ದು, 80 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ.
ಯೂರಿಯಾ ಕೊರತೆ ನಿವಾರಣೆ: ಅಗತ್ಯ ವಸ್ತು ಪೂರೈಕೆ ಕಾಯ್ದೆ 57ರ ಅನ್ವಯ ಎಲ್ಲಾ ರಸಗೊಬ್ಬರ ಪೂರೈಕೆದಾರರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಯೂರಿಯಾ, ರಸಗೊಬ್ಬರ ಕೊರತೆ ಕಂಡು ಬಂದರೂ ತಕ್ಷಣವೇ ಪೂರೈಕೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುವುದು, ಗೊಬ್ಬರ ಸಾಗಾಣಿಕೆಗೆ ಸಬ್ಸಿಡಿ ಒದಗಿಸಲಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications