ನಾಗಾರ್ಜುನ ದೇವೇಗೌಡರ ಕೊಡುಗೆ : ಕೋಡಿಹಳ್ಳಿ

ಪಡುಬಿದ್ರಿ ಸಮೀಪ ರೈತ ಸಂಘಟನೆಯ ವಿವಿಧ ಊರುಗಳ ಘಟಕಗಳನ್ನು ಉದ್ಘಾಟಿಸಿ ನಂತರ ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಮಗ ವಿದೇಶಿ ಕಂಪೆನಿಗಳಿಗೆ ಮಾತು ಕೊಟ್ಟಂತೆ ಬೆಂಗಳೂರಿನ ಕಂಪೆನಿಗಳಿಗೆ ವಿದ್ಯುತ್ ಸರಬರಾಜು ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಯಿತೇ ಹೊರತು ಇಲ್ಲಿಯ ಜನರ ಅವಶ್ಯಕತೆಗಳಿಗಾಗಿ ಅಲ್ಲ ಎಂದರು. ಯುರೋಪ್, ಅಮೆರಿಕಾಗಳಂತಹ ರಾಷ್ಟ್ರಗಳಲ್ಲಿ ತಿರಸ್ಕೃತವಾದ ಮತ್ತು ಕಳಚಲ್ಪಟ್ಟ ಯೋಜನೆ ಸ್ಥಾವರಗಳನ್ನು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸ್ಥಾಪಿಸ ಹೊರಟಿರುವ ರಾಜಕಾರಣಿಗಳನ್ನು ಬೈಯ್ದು ಪ್ರಯೋಜನವಿಲ್ಲ. ಜನತೆ ಒಗ್ಗಟ್ಟಾಗಿ ತಿರುಗಿಬೀಳಬೇಕು ಎಂದರು.
ಇಲ್ಲಿನ ಗದ್ದೆ, ಬಯಲು, ಹಳ್ಳಕೊಳ್ಳ, ನಿಸರ್ಗ ಎಲ್ಲಾ ಜನರಿಗೆ ಸೇರಿದ್ದು. ಪ್ರಗತಿಯ ಹೆಸರಲ್ಲಿ ಅವನ್ನು ಬಳಸಿಕೊಳ್ಳಬೇಕಾದರೆ, ಜನರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಆ ಜವಾಬ್ದಾರಿಯನ್ನು ಕಂಪೆನಿ ಮತ್ತು ಸರ್ಕಾರಗಳು ಮರೆತಿವೆ. ಯಾವನೇ ಅಪ್ಪ, ಆಚಾರ್ಯರ ಪಾಳೇಗಾರಿಕೆಗೂ ಬಗ್ಗದೆ ಇಂದಲ್ಲ ನಾಳೆ ಯಾವ ತಂತ್ರಗಾರಿಕೆ, ಹೋರಾಟ ಅನುಸರಿಯಾದರೂ ಈ ಕಂಪೆನಿ ಯನ್ನು ಬಂದ್ ಮಾಡಿಯೇ ಸಿದ್ಧ ಎಂದು ಚಂದ್ರಶೇಖರ್ ಘೋಷಿಸಿದರು.











Click it and Unblock the Notifications