ಕುಗ್ಗಿದ ಬೇಡಿಕೆ: ಭಾರತೀಯ ಅಕ್ಕಿ ರಫ್ತು ದರದಲ್ಲಿ ಇಳಿಕೆ
ಬೆಂಗಳೂರು ಆಗಸ್ಟ್ 13: ಅಕ್ಕಿ ರಫ್ತುನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ದೇಶದ ಬ್ರೋಕನ್ ಪಾರ್ಬಾಯಿಲ್ಡ್ (ನುಚ್ಚಕ್ಕಿ) ರೈಸ್ಗೆ ಕಳೆದ ಒಂದುವಾರದಿಂದ ರಫ್ತಿನ ದರದ ಇಳಿಕೆ ಆಗಿದೆ.
ಕೇಂದ್ರ ಸರ್ಕಾರ ಇಂಧನ ಮೇಲಿನ ಬೆಲೆ ಹೆಚ್ಚಿಸಿದ ಬಳಿಕ ದೇಶದ ಒಳಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆ ಉಂಟಾಯಿತಲ್ಲದೇ ಇದೀಗ ಅಕ್ಕಿ ರಫ್ತಿನ ಮೇಲೂ ಪರಿಣಾಮ ಬೀರಿದೆ. ಈ ಅರ್ಧ ಕಾಳಿನ ಅಕ್ಕಿಗೆ ಬೇಡಿಕೆ ತೀರಾ ಕಡಿಮೆ ಇತ್ತು. ಮಾರುಕಟ್ಟೆಗಳಲ್ಲಿ ಆಫ್ರಿಕನ್ ಖರೀದಿದಾರರು ಸಕ್ರಿಯವಾಗಿರಲಿಲ್ಲ. ಇದು ಸಹ ಬೇಡಿಕೆ ಇಳಿಕೆಯಾಗಲು ಕಾರಣವಾಗಿದೆ ಎಂದು ಭಾರತದ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಕ್ಕಿ ರಫ್ತುದಾರರೊಬ್ಬರು ಮಾಹಿತಿ ನೀಡಿದರು.
ಅಕ್ಕಿ ರಫ್ತುದಾರ ಅಗ್ರ ದೇಶ ಭಾರತವು ಶೇ.5ರಷ್ಟು ಬ್ರೋಕನ್ ಪಾರ್ಬಾಯಿಲ್ಡ್ ವಿಧದ ಅಕ್ಕಿ ಪ್ರತಿ ಟನ್ಗೆ ಪ್ರಸ್ತುತದಲ್ಲಿ 360ರಿಂದ 366 ಡಾಲರ್ ಎಂದು ಉಲ್ಲೇಖಿಸಿದ್ದು, ಇದೇ ಅಕ್ಕಿಗೆ ಒಂದು ವಾರದ ಹಿಂದೆ 364ರಿಂದ 370 ಡಾಲರ್ಗಿಂತ ನಷ್ಟು ಹೆಚ್ಚು ದರ ಇತ್ತು. ಈ ಮಧ್ಯೆ ಭತ್ತ ಬೆಳೆಯುವ ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ ಉತ್ಪಾದನೆಯು ಇಳಿಕೆ ಕಂಡಿದೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶವು ನಿರೀಕ್ಷಿತ ಅಕ್ಕಿಯನ್ನು ಆಮದು ಮಾಡಿಕೊಳ್ಳದೇ ಜುಲೈನಲ್ಲಿ ಕೇವಲ 15,500 ಟನ್ಗಳಷ್ಟು ಅಕ್ಕಿ ಖರೀದಿಸುವ ಮೂಲಕ ಆಮದಿನಲ್ಲಿ ಹಿನ್ನಡೆ ಅನುಭವಿಸಿದೆ. ಕೇಂದ್ರ ಸರ್ಕಾರವು ಖಾಸಗಿ ವ್ಯಾಪಾರಿಗಳಿಗೆ ಆಮದು ಖರೀದಿಗೆ ಶೇ.62.5% ಇದ್ದು ಸುಂಕವನ್ನು ರಿಂದ ಶೇ.25.0ಕ್ಕೆ ಇಳಿಕೆ ಮಾಡಿತು. ಈ ಸುಂಕ ಕಡಿತವು ಸುಮಾರು ಒಂದು ಮಿಲಿಯನ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಕಾಣವಾಯಿತು. ಸುಂಕ ಕಡಿತವಾಗದಿದ್ದರೆ, ಅದು ಆಮದಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯು ಇತ್ತು.
ಅಕ್ಕಿ ಆಮದು ಸುಂಕವನ್ನು ಸರ್ಕಾರ ಸಂಪೂರ್ಣ ಕಡಿತಗೊಳಿಸಬೇಕಿದೆ. ಇಲ್ಲವಾದರೆ ಆಮದುಗಾರನಿಗೆ ಲಾಭವಾಗದೇ ಆತ ಖರೀದಿಗೆ ಹಿಂದೇಟು ಹಾಕಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ವಿಯೆಟ್ನಾಂ ಶೇ. 5ರಷ್ಟು ಅರ್ಧಕಾಳಿನ ಅಕ್ಕಿಯ ಪ್ರತಿ ಟನ್ಗೆ 390ರಿಂದ ಶೇ.393ರಷ್ಟು ಡಾಲರ್ಗೆ ನೀಡಿದೆ. ಈ ಬೆಲೆ ತುಸು ಉತ್ತಮವಾದ ಬೆಲೆ ಎನ್ನಬಹುದಾಗಿದೆ. ಖಾರೀಫ್ ಋತುವಿನಲ್ಲಿ ಗುಣಮಟ್ಟದ ಕೊರತೆ ಹಿನ್ನೆಲೆ ದರಗಳು ಕಡಿಮೆಯಾಗಿರುತ್ತವೆ. ಹೀಗಿದ್ದರೂ ಜಾಗತಿಕವಾಗಿ ಅಕ್ಕಿಗೆ ಬೇಡಿಕೆ ಪ್ರಬಲವಾಗಿರುವುದರಿಂದ ಆಮದಿನ ಬೆಲೆಗಳು ಇದೇ ರೀತಿ ಸ್ಥಿರವಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ದರದಲ್ಲಿ ಇನ್ನಷ್ಟು ಇಳಿಕೆ ಅನುಮಾನ ಎನ್ನಲಾಗಿದೆ. ಮುಂದಿನ ಬೇಸಿಗೆಗೆ ಅಕ್ಕಿ ಪೂರೈಕೆಯಲ್ಲಿ ಕುಸಿತ ಕಂಡು ಬಂದರೆ ಆಗ ಅವುಗಳ ಬೆಲೆಯಲ್ಲಿ ಬದಲಾವಣೆಗಳು ಆಗಬಹುದು ಎನ್ನಲಾಗಿದೆ.
ಭಾರತದಿಂದ ಆಗಸ್ಟ್1ರಿಂದ 17 ರ ಅವಧಿಯಲ್ಲಿ ವಿಯೇಟ್ನಾಂನ ಹೂ ಚಿ ಮಿನ್ಹ್ ಬಂದರು ಮೂಲಕ ಫಿಲಿಫೈನ್ಸ್ ಹಾಗೂ ಆಫ್ರಿಕಾಕ್ಕೆ 318,750 ಟನ್ ಅಕ್ಕಿಯನ್ನು ರಫ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಪ್ರಮುಖ ವ್ಯವಹಾರ ನಡೆಯದಿದ್ದರೂ ಅಂತಾರಾಷ್ಟ್ರೀಯ ಮತ್ತು ದೇಶೀಯವಾಗಿ ಅಕ್ಕಿ ಬೇಡಿಕೆ ಕ್ರಮೇಣ ಹೆಚ್ಚಳವಾಗಿ ರಫ್ತು ದರಗಳು ಹೆಚ್ಚುವ ಸಾಧ್ಯತೆ ಇದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications