ಬೀರು ತರುವವರ ಮನೆಗೆ ನೀರಾ ತರುವಾ!

ಮಂಗಳೂರಿನಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಜ್ಯೂಸ್ ತಯಾರಿಕಾ ಘಟಕಾ ಅಸ್ತಿತ್ವಕ್ಕೆ ಬರಲಿದೆ. ನೀರಾ ತಯಾರಿಕೆಗೆ ಬಳಸಲಾಗುವ ತಂತ್ರಜ್ಞಾನವನ್ನು ಸುರಕ್ಷಿತ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್) ಮತ್ತು ಮೈಸೂರಿನ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಅಭಿವೃದ್ಧಿ (ಸಿಎಫ್ ಟಿಆರ್ಐ) ಪಡೆಸಿದೆ. ಈ ತಂತ್ರಜ್ಞಾನದಿಂದ ದಿನವೊಂದಕ್ಕೆ 1,000 ಲೀಟರ್ ನೀರಾ (ಜ್ಯೂಸ್) ತಯಾರಿಸುವ ಸಾಮರ್ಥ್ಯವಿದೆ ಎಂದು ರಾಜ್ಯ ಕೃಷಿ ನಿರ್ದೇಶಕ ಎನ್ ಜಯರಾಮ್ ಹೇಳುತ್ತಾರೆ.
ನೀರಾಗೆ ಇಲ್ಲ ಅಧಿಕೃತ ಮಾನ್ಯತೆ: ರಾಜ್ಯ ಸರ್ಕಾರ ಅಬಕಾರಿ ಕಾಯ್ದೆಯಲ್ಲಿ ನೀರಾ ಕುರಿತಾದ ತಿದ್ದುಪಡಿ ಇನ್ನೂ ಆಗಿಲ್ಲ. ಕಾಯಿದೆಯಲ್ಲಿ ತಿದ್ದುಪಡಿ ಆದ ನಂತರವಷ್ಟೆ ಇಲಾಖೆ ಘಟಕಕ್ಕಾಗಿ ಟೆಂಡರು ಕರೆಯಲು ಸಾಧ್ಯ. ಸದ್ಯದ ಅಬಕಾರಿ ಕಾಯ್ದೆಯಂತೆ ಹುಳಿ ಬರಿಸಿದ ನೀರಾವನ್ನು ಸಾರಾಯಿ ಎಂದೇ ಪರಿಗಣಿಸಲಾಗಿದೆ. ಜೊತೆಗೆ ಇದನ್ನು ಸಾರ್ವಜನಿಕವಾಗಿ ಮಾರುವಂತಿಲ್ಲ ಎಂದು ಸೂಚಿಸಿದೆ.
ನಾವು ಪ್ರಾರಂಭದಲ್ಲಿ ಮಂಗಳೂರು ಸಮೀಪ 29 ಎಕರೆ ಭೂ ಪ್ರದೇಶದಲ್ಲಿ ಬೆಳೆದಿರುವ 400 ತೆಂಗಿನ ಮರಗಳನ್ನು ನೀರಾಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ತೆಂಗಿನ ಮರದ ಸುಳಿಯ ಭಾಗದಲ್ಲಿ ಮಾಡಲಾಗುವ ರಂಧ್ರಗಳಿಂದ ಸೂರ್ಯ ಉದಯಿಸುವ ಮುನ್ನ ರಸ ಸುರಿಯುತ್ತದೆ. ಪ್ರತಿಯೊಂದು ಮರದಿಂದ ದಿನವೊಂದಕ್ಕೆ 2 ರಿಂದ 3 ಲೀಟರ್ ನೀರು ಸಂಗ್ರಹಿಸಬಹುದಾಗಿದೆ.
ಇದನ್ನು ಸಂಗ್ರಹಿಸಿ ತಂತ್ರಜ್ಞಾನದ ಮೂಲಕ ಜ್ಯೂಸ್ ತಯಾರಿಸಲಾಗುವುದು. 6 ರಿಂದ 9 ತಿಂಗಳಲ್ಲಿ ಜ್ಯೂಸ್ ಸಿದ್ಧಗೊಳ್ಳುವುದು. ಈ ಜ್ಯೂಸ್ ಸಕ್ಕರೆ ಅಂಶ ರಹಿತವಾದುದು ಮಾತ್ರವಲ್ಲ ದೇಹಕ್ಕೆ ಆರೋಗ್ಯಕರವಾದುದು ಎಂದು ಜಯರಾಮ್ ಹೇಳಿದ್ದಾರೆ.
ನೀರಾ ನೀತಿಗೆ ಒತ್ತಾಯ: ಈ ಮಧ್ಯೆ ರಾಜ್ಯ ರೈತ ಸಂಘ ಕೂಡ "ನೀರಾ ನೀತಿ" ಶೀಘ್ರವಾಗಿ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಸುಮಾರು ಹತ್ತು ವರ್ಷಗಳಿಂದಲೂ ನೀರಾ ನೀತಿಯನ್ನು ಘೋಷಿಸುವಂತೆ ಒತ್ತಾಯಿಸುತ್ತಿದ್ದೇವೆ. ತೆಂಗಿನ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ವಿವಿಧ ರೋಗಗಳಿಂದ ರೈತರು ಕೃಷಿ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಕಾಡು ಪ್ರಾಣಗಳಿಂದ, ಕೀಟಗಳಿಂದ ತೆಂಗಿನ ಕಾಯಿ ನಷ್ಟವಾದರೂ ನೀರಾ ತೆಗೆಯುವ ಮೂಲಕ ರೈತನಿಗೆ ಲಾಭವಾಗಲಿದೆ' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎ ಎಂ ಮಹೇಶ್ ಪ್ರಭು ಹೇಳಿದ್ದಾರೆ. [ರೈತ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications