ಮಳೆ-ಬರ : ತ್ರಿಶಂಕು ಸ್ಥಿತಿಯಲ್ಲಿ ಚನ್ನಪಟ್ಟಣದ ರೈತರು
ಚನ್ನಪಟ್ಟಣ, ಸೆ. 7 : ಅವಾಗಾವಾಗ ಮಳೆಯಾಗುತ್ತಲೇ ಇದೆ, ಆದರೆ ಕೆರೆಗಳಲ್ಲಿ ಮಾತ್ರ ನೀರು ಸಂಗ್ರಹಣೆಯಾಗಿಲ್ಲ. ಮಳೆ ಬೀಳುವುದನ್ನು ನೋಡಿ ರೈತ ಸಮುದಾಯ ಸಂತಸದಿಂದಲೇ ಇದೆ. ಆದರೂ ಭವಿಷ್ಯದ ಬೆಳೆಯ ಬಗ್ಗೆ ಚಿಂತಾಕ್ರಾಂತವಾಗಿದೆ. ಇದು ತಾಲೂಕಿನ ಸಧ್ಯದ ಸ್ಥಿತಿ.
ಕಳೆದ ಐದಾರು ವರ್ಷಗಳಿಂದ ಅತ್ತ ಬರವೂ ಅಲ್ಲದೆ, ಇತ್ತ ಮಳೆಯೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಕಾಲ ದೂಡುತ್ತಿರುವ ತಾಲೂಕಿನ ರೈತರು ಈ ವರ್ಷವೂ ಸಹ ಇಂಥದೇ ಪರಿಸ್ಥಿತಿಯತ್ತ ಸಾಗುತ್ತಿದ್ದಾರೆ. ಕಳೆದ ಕೆಲವಾರು ವರ್ಷಗಳಿಂದ ತಾಲೂಕಿನ ಜೀವನಾಡಿ ಕಣ್ವ ಜಲಾಶಯ ಸೇರಿದಂತೆ ತಾಲೂಕಿನ ಯಾವುದೊಂದು ಕೆರೆಯೂ ಭರ್ತಿಯಾಗದೆ ತಾಲೂಕಿನ ಜನತೆ ಪರಿತಪಿಸುತ್ತಿದ್ದು, ಈ ಬಾರಿಯೂ ಇಂಥದೇ ಪರಿಸ್ಥಿತಿ ಮುಂದುವರೆಯುವುದರಲ್ಲಿ ಅನುಮಾನವಿಲ್ಲ ಎಂಬಂತಾಗಿದೆ.
ಆಗಸ್ಟ್ ಅಂತ್ಯದ ವೇಳೆಗೆ ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆಯಾದರೂ ಕೆರೆಕಟ್ಟೆಗಳು ಮಾತ್ರ ಖಾಲಿಯಾಗಿಯೇ ಇವೆ. ರೈತ ಸಮುದಾಯ ಮಾತ್ರ ಮುಂದೆಯಾದರೂ ಮಳೆರಾಯ ಕರುಣೆ ತೋರಬಹುದು ಎಂಬ ಆಶಾವಾದದಲ್ಲಿಯೇ ಇದೆ.
ಈಗಾಗಲೇ ತಾಲೂಕಿನಲ್ಲಿ ಶೇ.75ಕ್ಕಿಂತ ಅಧಿಕ ಪ್ರದೇಶದಲ್ಲಿ ರೈತ ಸಮುದಾಯ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು, ಮಳೆರಾಯನೂ ಸಹ ಅವಾಗಾವಾಗ ಸ್ಪಂದನೆ ನೀಡುತ್ತಿದ್ದಾನೆ. ಅಲ್ಪಸ್ವಲ್ಪ ಅಡೆತಡೆಗಳ ನಡುವೆಯೂ ರೈತ ಸಮುದಾಯ ಬಿತ್ತನೆ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಇನ್ನೇನಿದ್ದರೂ ಬೆಳೆಯ ಬೆಳವಣಿಗೆಯ ಹಂತದಲ್ಲಿ ಮಳೆರಾಯ ಕರುಣೆ ತೋರಬೇಕಿದ್ದು, ರೈತ ಸಮುದಾಯವೂ ಸಹ ವರುಣನ ಕೃಪೆಯನ್ನು ಎದುರುನೋಡುತ್ತಿದೆ.
ಮಳೆಯಾಧಾರಿತ ಬೆಳೆಗಳಿಗೆ ವರುಣರಾಯ ಆವಾಗವಾಗ ಕರುಣೆ ತೋರಿದರೂ, ಆ ಬೆಳೆಗಳ ಬೆಳವಣಿಗೆಗೆ ಪೂರಕ ವಾತಾವರಣ ದೊರೆಯುತ್ತಿದೆಯಾದರೂ ನೀರನ್ನೇ ನಂಬಿ ಬೆಳೆಯುವ ಭತ್ತದ ಬೆಳೆಯ ಬಗ್ಗೆ ರೈತರು ಚಿಂತಾಕ್ರಾಂತರಾಗಿದ್ದಾರೆ. ಸ್ವಂತ ಕೊಳವೆ ಬಾವಿ ಹೊಂದಿರುವ ರೈತರು ಅಲ್ಪಸ್ವಲ್ಪ ನೀರು ಹಾಯಿಸಿ, ಭತ್ತ ಬೆಳೆಯಲು ಪರಿಶ್ರಮ ಪಡಬಹುದಾದರೂ ಕೆರೆಕಟ್ಟೆಗಳಲ್ಲಿ ಸಂಗ್ರಹವಾಗುವ ನೀರನ್ನು ನಂಬಿರುವ ರೈತರು ಸಧ್ಯದ ಪರಿಸ್ಥಿತಿಯಲ್ಲಿ ಪರಿತಾಪ ಎದುರಿಸುವಂತಾಗಿದೆ.
ಇನ್ನು ಕೊಳೆವೆ ಬಾವಿ ನಂಬಿ ವ್ಯವಸಾಯ ಮಾಡುತ್ತಿದ್ದ ರೈತರೂ ಸಹ ಮಳೆಯಿಲ್ಲದೆ ಕೆರೆಕಟ್ಟೆಗಳಿಗೆ ನೀರಿಲ್ಲದೆ ಅಂತರ್ಜಲ ಕುಸಿಯುತ್ತಿರುವ ಕಾರಣ ಅವರೂ ಸಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇದಲ್ಲದೆ ವಿದ್ಯುತ್ತಿನ ಕಣ್ಣಾಮುಚ್ಚಾಲೆ ಸಹ ರೈತರ ನಿದ್ದೆಕೆಡಿಸುತ್ತಿದೆ.
ಕೆರೆ ಕಟ್ಟೆಗಳ ಬಣಗುಡುವಿಕೆಯಿಂದ ಜನಗಳಲ್ಲದೆ ಜಾನುವಾರುಗಳೂ ಸಹ ಸಮಸ್ಯೆ ಎದುರಿಸುವಂತಾಗಿದೆ ಮುಂದಾದರೂ ವರುಣ ಕೃಪೆ ತೋರಿ ಕೆರೆ ಕಟ್ಟೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕಣಕಣವೂ ನೀರಾಗಲಿ ಎಂಬ ನಿರೀಕ್ಷೆಯೊಂದಿಗೆ ತಾಲೂಕು ಕಾಯುತ್ತಿದ್ದು, ರೈತರ ಆಸೆ ಈಡೇರಲು ಮಳೆರಾಯ ಕರುಣೆ ತೋರುವನೇ ಎಂಬುದನ್ನು ಕಾದುನೋಡಬೇಕಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications