ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ

ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಮಾಧ್ಯಮಗಳಿಂದ ಸಿಗುತ್ತಿರುವ ಕೊಡುಗೆ ಕುರಿತು ಚರ್ಚಿಸಲು 'ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ' ವಿಚಾರ ಸಂಕಿರಣವನ್ನು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಜಂಟಿಯಾಗಿ ಏರ್ಪಡಿಸಿವೆ.
ದಿನಾಂಕ : ಫೆಬ್ರವರಿ 20ರಂದು ಶುಕ್ರವಾರ.
ಸ್ಥಳ : ಅಲುಮ್ನಿ ಅಸೋಸಿಯೇಷನ್ ಸಭಾಂಗಣ, ವೆಟರ್ನರಿ ಕಾಲೇಜಿನ ಪಕ್ಕ, ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು.
ಸಮಯ : ಬೆಳಿಗ್ಗೆ 10 ಗಂಟೆಗೆ.
ಕೃಷಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಐಟಿಬಿಟಿ, ವಾರ್ತಾ, ಅಬಕಾರಿ ಮತ್ತು ಬೆಂಗಳೂರು ಜಲಮಂಡಳಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರು ಮತ್ತು ಕೃಷಿ ನೀತಿ ವಿಶ್ಲೇಷಕರಾದ ದೇವೇಂದರ್ ಶರ್ಮಾ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಬೀದರ್, ರಾಯಚೂರು, ಬಾಗಲಕೋಟೆ, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಸಂಕಿಕರಣದಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಎರಡು ಪ್ರಮುಖ ಗೋಷ್ಠಿಗಳಲ್ಲಿ ಕೃಷಿ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ, ಕೃಷಿಕರ ನಿರೀಕ್ಷೆ, ಕೃಷಿಕರಲ್ಲಿ ಅಂತರ್ಜಾಲದ ಬಳಕೆ ಮುಂತಾದ ವಿಷಯ ಕುರಿತಂತೆ ಅನೇಕ ಗಣ್ಯರು ವಿಚಾರ ಮಂಡಿಸಲಿದ್ದಾರೆ. ಗೋಷ್ಠಿಗಳ ವಿವರ ಕೆಳಗಿನಂತಿವೆ.
ಬೆಳಗಿನ ಗೋಷ್ಠಿ : ಸಮಯ : 11 ಗಂಟೆಗೆ, ಅಧ್ಯಕ್ಷತೆ : ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕ
ಮಾತನಾಡುವವರು
1) ಡಾ.ಆರ್. ದ್ವಾರಕೀನಾಥ್ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ - ಒಂದು ಸಿಂಹಾವಲೋಕನ.
2) ಜಿ.ಆರ್. ಗುಂಡಪ್ಪ : ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದ ಅನುಭವಗಳು.
3) ಸಿ.ಯು. ಬೆಳ್ಳಕ್ಕಿ : ಕೃಷಿಕರ ಮುನ್ನಡೆಗೆ ಬಾನುಲಿ ಕೊಡುಗೆ.
4) ನಾಗೇಶ ಹೆಗಡೆ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ.
5) ಎ.ಎಸ್. ಚಂದ್ರಮೌಳಿ : ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ಕೃಷಿ ಶ್ರೋತೃಗಳ/ವೀಕ್ಷಕರ ಸ್ಪಂದನ.
ಮಧ್ಯಾಹ್ನದ ಗೋಷ್ಠಿ : ಸಮಯ : 2.30 ಗಂಟೆಗೆ, ಅಧ್ಯಕ್ಷತೆ : ಈಶ್ವರ ದೈತೋಟ, ಪತ್ರಕರ್ತ
ವಿಚಾರ ಮಂಡಿಸುವವರು
1) ಸುನಂದಾ ಜಯರಾಮ್ : ಮಾಧ್ಯಮಗಳಿಂದ ಕೃಷಿಕರ ನಿರೀಕ್ಷೆ.
2) ಟಿ.ಎನ್. ಪ್ರಕಾಶ್ ಕಮ್ಮರಡಿ : ಕೃಷಿ ವಿಸ್ತರಣೆ ಚಟುವಟಿಕೆಗಳು ಮತ್ತು ಮಾಧ್ಯಮ.
3) ಆರ್.ಎನ್. ಶ್ರೀನಿವಾಸ ಗೌಡ : ಮಾಧ್ಯಮಗಳಿಂದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ನಿರೀಕ್ಷೆ.
4) ಪಿ. ಪ್ರಶಾಂತ್ : ಕೃಷಿಕರಲ್ಲಿ ಅಂತರ್ಜಾಲ ಮತ್ತಿತರ ನೂತನ ಮಾಧ್ಯಮಗಳ ಬಳಕೆಯ ಸಾಧ್ಯತೆಗಳು.
5) ಪಿ.ವಿ. ಸತೀಶ್ : ಕೃಷಿಕರು ಮತ್ತು ಸಮುದಾಯ ಮಾಧ್ಯಮ.
6) ಅನಿತಾ ಪೈಲೂರು : ಕೃಷಿ ಬರಹಗಾರರು ಎದುರಿಸುತ್ತಿರುವ ಸವಾಲುಗಳು.
ಅಲುಮ್ನಿ ಅಸೋಸಿಯೇಷನ್ ನ ಅಧ್ಯಕ್ಷರಾದ ಜಿಕೆ ವೀರೇಶ್ ಮತ್ತು ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ಆರ್ ವಿಶುಕುಮಾರ್ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ.
(ದಟ್ಸ್ ಕನ್ನಡ ಸಭೆ ಸಮಾರಂಭ)
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications