ಬೆಂಗಳೂರಿನ ಹಾಪ್ ಕಾಪ್ಸ್ ನಲ್ಲಿ ಮಾವು ಮತ್ತು ಹಲಸು ಮೇಳ
ಬೆಂಗಳೂರು, ಮೇ 22: ಉದ್ಯಾನನಗರಿ ಬೆಂಗಳೂರಿಗೆ ತಡವಾಗಿಯಾದರೂ ಹಣ್ಣುಗಳ ರಾಜನ ಆಗಮನವಾಗಿದೆ. ಇಂದಿನಿಂದ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ. ಮಾವು ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆಗೊಂಡರುವ ಈ ಮೇಳದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ.
ನಗರ ಒಟ್ಟು 325 ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮೇಳ ಆಯೋಜಿಸಲಾಗಿದೆ. ಈ ಬಾರಿ ತಡವಾಗಿ ಮಾರುಕಟ್ಟೆಗೆ ಮಾವಿನ ಆಗಮನವಾಗಿದೆ. ಈ ಮೇಳದಲ್ಲಿ ಒಟ್ಟು 10ಕ್ಕೂ ಹೆಚ್ಚು ಬಗೆಯ ಮಾವಿನ ತಳಿ ಸಿಗಲಿವೆ,ಕಳೆದ ಬಾರಿ 635 ಟನ್ನಷ್ಟು ವಹಿವಾಟು ನಡೆದಿತ್ತು ಎಂದು ಹಾಪ್ ಕಾಪ್ಸ್ ಅಧ್ಯಕ್ಷ ಚಂದ್ರೇಗೌಡ ಹೇಳಿದರು.

ಐಟಿ ಕಂಪನಿಗಳಿಗೂ ಮಾವಿನ ಘಮ ಹರಡುತ್ತಿದ್ದು, ಇನ್ಫೋಸಿಸ್ ಹಾಗೂ ಯುಬಿ ಸಿಟಿಯ ಮ್ಯಾನೇಜ್ಮೆಂಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಮಾವು ಮಾರಾಟ ಮಳಿಗೆ ಇಡಲು ಮುಂದಾಗಿವೆ. ಅಪಾರ್ಟ್ಮೆಂಟ್, ಮೊಬೈಲ್ ವ್ಯಾನ್ ಗಳಲ್ಲಿ ಮೌ ಮಾರಾಟಕ್ಕೂ ಹಾಪ್ ಕಾಪ್ಸ್ ಮುಂದಾಗಿದೆ.
ಲಾಲ್ ಬಾಗ್ ನಲ್ಲಿ ಮೇ 25ರಿಂದ ಜೂನ್ 15ರ ತನಕ ಮಾವು ಮತ್ತು ಹಲಸು ಮೇಳ ನಡೆಯಲಿದೆ. 128ಕ್ಕೂ ಅಧಿಕ ರೈತರು, 250ಕ್ಕೂ ಅಧಿಕ ಟನ್ ಮಾವು ಮಾರಾಟದ ನಿರೀಕ್ಷೆ ಹೊಂದಿದ್ದಾರೆ.
ರಸಪುರಿ, ಕಾಲಾಪಾಡ್, ದಶೇರಿ, ಬಾದಾಮಿ, ಅಮ್ರಪಾಲಿ, ಮಲಗೋವಾ ಸೇರಿ ಅನೇಕ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ. ಮೊದಲ ದಿನವೇ ಮಾವು ಮತ್ತು ಹಲಸು ಖರೀದಿಸಲು ಜನ ಮುಗಿಬಿದ್ದಿರುವುದು ಕಂಡುಬಂತು.
ತಳಿ: ಎಷ್ಟು ದರ (ಪ್ರತಿ ಕೆಜಿ)
ಆಲ್ಫಾನ್ಸ್ : 100 ರೂಪಾಯಿ
ಆಲ್ಫಾನ್ಸ್ ಬಾಕ್ಸ್ : 90
ಅಮ್ರಪಾಲಿ : 75
ಬಾದಾಮಿ : 78
ಬಗನಪಲ್ಲಿ : 62
ದಶೇರಿ - 115
ಕಾಲಾಪಾಡ್ - 95
ಕೇಸರ್: 53
ಮಲಗೋವಾ - 125
ಮಲ್ಲಿಕಾ - 88
ನೀಲಂ: 60
ರಸಪುರಿ - 65
ಸಕ್ಕರೆಗುಟ್ಟಿ - 100
ಸಿಂಧೂರ: 50
ತೋತಾಪುರಿ : 30
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications