ಬೆಂಗಳೂರಿನ ಹಾಪ್ ಕಾಪ್ಸ್ ನಲ್ಲಿ ಮಾವು ಮತ್ತು ಹಲಸು ಮೇಳ
ಬೆಂಗಳೂರು, ಮೇ 22: ಉದ್ಯಾನನಗರಿ ಬೆಂಗಳೂರಿಗೆ ತಡವಾಗಿಯಾದರೂ ಹಣ್ಣುಗಳ ರಾಜನ ಆಗಮನವಾಗಿದೆ. ಇಂದಿನಿಂದ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ. ಮಾವು ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆಗೊಂಡರುವ ಈ ಮೇಳದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ.
ನಗರ ಒಟ್ಟು 325 ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮೇಳ ಆಯೋಜಿಸಲಾಗಿದೆ. ಈ ಬಾರಿ ತಡವಾಗಿ ಮಾರುಕಟ್ಟೆಗೆ ಮಾವಿನ ಆಗಮನವಾಗಿದೆ. ಈ ಮೇಳದಲ್ಲಿ ಒಟ್ಟು 10ಕ್ಕೂ ಹೆಚ್ಚು ಬಗೆಯ ಮಾವಿನ ತಳಿ ಸಿಗಲಿವೆ,ಕಳೆದ ಬಾರಿ 635 ಟನ್ನಷ್ಟು ವಹಿವಾಟು ನಡೆದಿತ್ತು ಎಂದು ಹಾಪ್ ಕಾಪ್ಸ್ ಅಧ್ಯಕ್ಷ ಚಂದ್ರೇಗೌಡ ಹೇಳಿದರು.

ಐಟಿ ಕಂಪನಿಗಳಿಗೂ ಮಾವಿನ ಘಮ ಹರಡುತ್ತಿದ್ದು, ಇನ್ಫೋಸಿಸ್ ಹಾಗೂ ಯುಬಿ ಸಿಟಿಯ ಮ್ಯಾನೇಜ್ಮೆಂಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಮಾವು ಮಾರಾಟ ಮಳಿಗೆ ಇಡಲು ಮುಂದಾಗಿವೆ. ಅಪಾರ್ಟ್ಮೆಂಟ್, ಮೊಬೈಲ್ ವ್ಯಾನ್ ಗಳಲ್ಲಿ ಮೌ ಮಾರಾಟಕ್ಕೂ ಹಾಪ್ ಕಾಪ್ಸ್ ಮುಂದಾಗಿದೆ.
ಲಾಲ್ ಬಾಗ್ ನಲ್ಲಿ ಮೇ 25ರಿಂದ ಜೂನ್ 15ರ ತನಕ ಮಾವು ಮತ್ತು ಹಲಸು ಮೇಳ ನಡೆಯಲಿದೆ. 128ಕ್ಕೂ ಅಧಿಕ ರೈತರು, 250ಕ್ಕೂ ಅಧಿಕ ಟನ್ ಮಾವು ಮಾರಾಟದ ನಿರೀಕ್ಷೆ ಹೊಂದಿದ್ದಾರೆ.
ರಸಪುರಿ, ಕಾಲಾಪಾಡ್, ದಶೇರಿ, ಬಾದಾಮಿ, ಅಮ್ರಪಾಲಿ, ಮಲಗೋವಾ ಸೇರಿ ಅನೇಕ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ. ಮೊದಲ ದಿನವೇ ಮಾವು ಮತ್ತು ಹಲಸು ಖರೀದಿಸಲು ಜನ ಮುಗಿಬಿದ್ದಿರುವುದು ಕಂಡುಬಂತು.
ತಳಿ: ಎಷ್ಟು ದರ (ಪ್ರತಿ ಕೆಜಿ)
ಆಲ್ಫಾನ್ಸ್ : 100 ರೂಪಾಯಿ
ಆಲ್ಫಾನ್ಸ್ ಬಾಕ್ಸ್ : 90
ಅಮ್ರಪಾಲಿ : 75
ಬಾದಾಮಿ : 78
ಬಗನಪಲ್ಲಿ : 62
ದಶೇರಿ - 115
ಕಾಲಾಪಾಡ್ - 95
ಕೇಸರ್: 53
ಮಲಗೋವಾ - 125
ಮಲ್ಲಿಕಾ - 88
ನೀಲಂ: 60
ರಸಪುರಿ - 65
ಸಕ್ಕರೆಗುಟ್ಟಿ - 100
ಸಿಂಧೂರ: 50
ತೋತಾಪುರಿ : 30
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications