ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ಅಂತ್ಯಕ್ಕೆ ಮುಂಗಾರು ಹಂಗಾಮು ಬಿತ್ತನೆಯಲ್ಲಿ ಶೇ 7ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಜು.3: ದೇಶಾದ್ಯಂತ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಕಾರಣದಿಂದಲೇ ಕಳೆದ ಜೂನ್ ಅಂತ್ಯದ ವರೆಗೆ ದೇಶದಲ್ಲಿ ಮುಂಗಾರಿನ ಹಂಗಾಮಿನ (ಖಾರೀಫ್) ಬಿತ್ತನೆ ಏರಿಕೆ ಆಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಜೂನ್ ಅಂತ್ಯಕ್ಕೆ ಹತ್ತಿ, ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಯಲ್ಲಿ ಶೇ.7ರಷ್ಟು ಏರಿಕೆ ಕಂಡು ಬಂದಿದೆ. ಮುಂಗಾರು ಆರಂಭವಾದ ಹೊಸತರದಲ್ಲಿ ಮಂಕಾಗಿದ್ದ ಮಳೆ ನಂತರ ಚುರುಕೊಂಡಿದ್ದೆ ಖಾರಿಫ್ ಬೆಳೆ ಅಧಿಕ ಬಿತ್ತನೆಗೆ ಕಾರಣವಾಗಿದೆ.

ಮುಂಗಾರು ಮಳೆ ಸರಾಸರಿಗಿಂತ ಕಡಿಮೆ; ಕೃಷಿ ಮೇಲೆ ಪರಿಣಾಮ ಮುಂಗಾರು ಮಳೆ ಸರಾಸರಿಗಿಂತ ಕಡಿಮೆ; ಕೃಷಿ ಮೇಲೆ ಪರಿಣಾಮ

ಆದರೆ ಭತ್ತಕ್ಕೆ ಹೆಚ್ಚು ನೀರಿನ ಅಗತ್ಯವಿದ್ದು ಅಷ್ಟಾಗಿ ಭತ್ತ ಬೆಳೆದಿರುವುದು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮುಂಗಾರು ಹಂಗಾಮಿನ ಬೆಳೆಗಳಲ್ಲಿ ದ್ವಿದಳ ಧಾನ್ಯಗಳ ಬೆಳೆಗಳು ಬಿತ್ತನೆಯಲ್ಲಿ ಕಳೆದ ವರ್ಷ ಶೇ.4ರಷ್ಟು ಏರಿಕೆ ಕಂಡು ಬಂದಿತ್ತು.

ಈ ವರ್ಷ ಅದರ ಪ್ರಮಾಣ ಶೇ. 7ಕ್ಕೆ ಏರಿಕೆ ಕಂಡಿದೆ. ಜೂನ್ ಮೂರು ವಾರದಲ್ಲಿ ಬಿತ್ತನೆ ಅಷ್ಟಾಗಿ ಕಾಣದಿದ್ದರೂ ನಾಲ್ಕನೆ ವಾರದ ಜೂನ್ ಅಂತ್ಯಕ್ಕೆ ಭೂಮಿ ಹದವಾದ ಹಿನ್ನೆಲೆ ರೈತರು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ.

ಭತ್ತ ನೇರ ಬಿತ್ತನೆ ವಿಧಾನ ಅಳವಡಿಸಿಕೊಳ್ಳಲು ರೈತರಿಗೆ ಗಡುವು ವಿಸ್ತರಣೆ ಭತ್ತ ನೇರ ಬಿತ್ತನೆ ವಿಧಾನ ಅಳವಡಿಸಿಕೊಳ್ಳಲು ರೈತರಿಗೆ ಗಡುವು ವಿಸ್ತರಣೆ

ಹತ್ತಿ ಬಿತ್ತನೆಯಲ್ಲಿ ಶೇ. 4ಏರಿಕೆ

ಹತ್ತಿ ಬಿತ್ತನೆಯಲ್ಲಿ ಶೇ. 4ಏರಿಕೆ

ಕಡಲೆಕಾಯಿ, ಕಡಲೆ, ಸೋಯಾ, ಯಹೂದಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ಏರಿಕೆ ಕಂಡು ಬಂದರೂ, ಉದ್ದಿನ ಬೇಳೆ, ತೊಗರಿ ಬೇಳೆ ಬೆಳೆಯ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತಲೂ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಬೆಳೆಗಳ ಬಿತ್ತನೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಜೂನ್ ಅಂತ್ಯಕ್ಕೆ ಹತ್ತಿ ಬಿತ್ತನೆಯಲ್ಲಿ ಶೇ.4ರಷ್ಟು ಏರಿಕೆ ಕಂಡು ಬಂದಿದೆ. ಈ ಅಂಕಿ ಅಂಶಗಳಿಗೆ ಪೂರಕವಾಗುವಷ್ಟು ಈ ಭಾರೀ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹತ್ತಿಯ ಅಧಿಕ ಬಿತ್ತನೆ ಆಗಿದೆ.

ಹಿಂದುಳಿದ ಬೃಹತ್ ಆಹಾರ ಧಾನ್ಯ

ಹಿಂದುಳಿದ ಬೃಹತ್ ಆಹಾರ ಧಾನ್ಯ

ಮುಂಗಾರು ಹಂಗಾಮಿನಲ್ಲಿ ಬಿತ್ತಲಾಗುವ ಬೃಹತ್ ಆಹಾರ ಧಾನ್ಯವಾದ ಭತ್ತ ಭಿತ್ತನೆಯಲ್ಲಿ ಅಷ್ಟಾಗಿ ಏರಿಕೆ ಕಂಡು ಬಂದಿಲ್ಲ. ಭತಕ್ಕೆ ಇತರ ಬೆಳೆಗಳಿಗಿಂತಲೂ ಹೆಚ್ಚಿಗೆ ನೀರು ಬೇಕಿರುವುದರಿಂದ ಪ್ರಸ್ತುತದಲ್ಲಿ ಭತ್ತ ಬಿತ್ತನೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಮಳೆ ಬಂದು ಅಗತ್ಯ ನೀರು ನೋಡಿಕೊಂಡು ಭತ್ತ ಬಿತ್ತಲು ರೈತು ಕಾತರರಾಗಿದ್ದಾರೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ತಿಂಗಳಲ್ಲಿ ನಿರೀಕ್ಷಿತ ಭತ್ತ ಭಿತ್ತನೆ ಆಗಲಿದೆ ಎಂದು ತಿಳಿದು ಬಂದಿದೆ.

ಜುಲೈನಲ್ಲಿ ಉತ್ತಮ ಮಳೆ

ಜುಲೈನಲ್ಲಿ ಉತ್ತಮ ಮಳೆ

ಪ್ರಸಕ್ತ ಜುಲೈ ತಿಂಗಳ ಹೊತ್ತಿಗಾಗಲೇ ದೇಶಾದ್ಯಂತ ಬಿತ್ತನೆ ಬಹುತೇಕ ಪೂರ್ಣಗೊಂಡಿರಬೇಕಿತ್ತು. ಆದರೆ ಮುಂಗಾರಿನ ಹೊಯ್ದಾಟದಿಂದ ಅದು ಸಾಧ್ಯವಾಗಿಲ್ಲ. ಇನ್ನು ಜುಲೈನಲ್ಲಿ ವಾಡಿಕೆ 28.4ಸೆಂ.ಮೀ.ನಷ್ಟು ಮಳೆಯಾಗಬೇಕಿದೆ. ಆದರೆ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆ ಗಮನಿಸಿದರೆ ಈ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಆಗಬಹುದು. ಇದರಿಂದ ಜುಲೈ ಎರಡನೆ ವಾರದಲ್ಲಿ ಕೃಷಿ ಉತ್ಪನ್ನಗಳ ಹಂಗಾಮು ಬೆಳೆ ಬಿತ್ತನೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಜುಲೈ, ಆಗಸ್ಟ ನೀರ್ಣಾಯಕ?

ಜುಲೈ, ಆಗಸ್ಟ ನೀರ್ಣಾಯಕ?

ನೈಋತ್ಯ ಮುಂಗಾರು ಅವಧಿಯಲ್ಲಿ ಅತ್ಯಧಿಕ ಮಳೆ ಆಗಮನದ ತಿಂಗಳಾದ ಜುಲೈ ಮತ್ತು ಆಗಸ್ಟ್ ಮಳೆ ಕೃಷ್ಟಿ ಮಟ್ಟಿಗೆ ನೀರ್ಣಾಯಕ ಎಂದು ಹೇಳಲಾಗುತ್ತಿದೆ. ಈ ಎರಡು ತಿಂಗಳಲ್ಲಿ ಋತುವಿನ ಪ್ರತಿಶತ ಶೇ.60ರಷ್ಟು ಅಧಿಕ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಇದೆ. ಹೀಗಾಗಿಯೇ ಜುಲೈನಲ್ಲಿ ದೇಶದ ಉತ್ತರ, ಮಧ್ಯ, ದಕ್ಷಿಣ ಪರ್ಯಾಯ ದ್ವೀಪ ಭಾಗದ ರಾಜ್ಯಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Recommended Video

Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada

English summary
Include cotton Kharif crops sowing by the July end 7 per cent rise have been grown compared to last year. But rice sowing no increase in last month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X