ಕೈಕೊಟ್ಟ ಮುಂಗಾರು: ಕೃಷಿ ವಲಯದ ಮೇಲೆ ಬಿತ್ತು ಭಾರಿ ಹೊಡೆತ, ಬಿತ್ತನೆ ಅಂಕಿಅಂಶ ವಿವರ
ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಮಳೆ ಕೈಕೊಟ್ಟ ಪರಿಣಾಮ ಕೃಷಿ ವಲಯದ ಮೇಲೆ ಎರಡು ಪರಿಣಾಮ ಬೀರುತ್ತದೆ. ಸರ್ಕಾರ ನಿಗದಿಪಡಿಸಿದ ಗುರಿಗೆ ಹೋಲಿಸಿದರೆ ಬಿತ್ತನೆ ಪ್ರದೇಶವು ಸುಮಾರು 15.57 ಲಕ್ಷ ಹೆಕ್ಟೇರ್ಗಳಷ್ಟು ಕಡಿಮೆಯಾಗಿದೆ, ಆದರೆ 66.68 ಲಕ್ಷ ಹೆಕ್ಟೇರ್ ಭೂಮಿಯಲ್ಲಿನ ಇಳುವರಿಯು ಹಿಂದಿನ ವರ್ಷಕ್ಕಿಂತ ಕಡಿಮೆ ಆಗುವ ಆತಂಕ ಎದುರಾಗಿದೆ. ಬಿತ್ತನೆ ಮಾಡಿದ್ದರೂ ಮಳೆ ನಿಗದಿತವಾಗಿ ಆಗದೇ ಇರುವುದು ಇಳುವರಿ ಮೇಲೆ ಪರಿಣಾಮ ಬೀರಿದೆ, ಹಲವು ಕಡೆ ಬೆಳೆಗಳು ಒಣಗುವ ಹಂತಕ್ಕೆ ಹೋಗಿವೆ.
ಈ ಖಾರಿಫ್ ಋತುವಿನಲ್ಲಿ ಕರ್ನಾಟಕವು ಸುಮಾರು 82.35 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಬೆಳೆಗಳನ್ನು ಬಿತ್ತನೆ ಮಾಡುವ ಗುರಿಯನ್ನು ಹೊಂದಿತ್ತು. ಆದರೆ, ಜುಲೈ ಮತ್ತು ಆಗಸ್ಟ್ನಲ್ಲಿ ಅನಿಯಮಿತ ಮಳೆಯಿಂದಾಗಿ ರೈತರು ಆಗಸ್ಟ್ ಕೊನೆಯ ವಾರದವರೆಗೆ ಕೇವಲ 66.68 ಲಕ್ಷ ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ ಎಂದು ಡಿಹೆಚ್ ವರದಿಯಲ್ಲಿ ತಿಳಿಸಿದೆ.

ಈ ಹಂಗಾಮಿನ ಒಟ್ಟು ಬಿತ್ತನೆಯು ಕಳೆದ ವರ್ಷಕ್ಕಿಂತ 7.69 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ ಮತ್ತು ರಾಜ್ಯದ ಸಾಮಾನ್ಯ ವ್ಯಾಪ್ತಿ ಪ್ರದೇಶಕ್ಕಿಂತ 1.79 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ. ಭತ್ತ, ಜೋಳ, ರಾಗಿ, ಕಿರು ರಾಗಿ, ತೊಗರಿ, ಹೆಸರುಕಾಳು, ಶೇಂಗಾ ಮುಂತಾದ ಬೆಳೆಗಳ ಒಟ್ಟು ವಿಸ್ತೀರ್ಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುಗ್ಗಿದೆ. ಮೆಕ್ಕೆಜೋಳ ಕೃಷಿ ಹೆಚ್ಚಿದ್ದರೂ ನೀರಿನ ಕೊರತೆಯಿಂದ ಬೆಳೆ ನಷ್ಟವಾಗುವ ಸಾಧ್ಯತೆ ಇದೆ.
ಇಳುವರಿ ಕಡಿಮೆಯಾಗುವ ಆತಂಕ
ಕೃಷಿ ಇಲಾಖೆ ನಿರ್ದೇಶಕ ಜಿ.ಟಿ ಪುತ್ರ ಮಾತನಾಡಿ, ರಾಜ್ಯದಲ್ಲಿ ಭತ್ತ, ತೆನೆ, ಹಸಿಬೇಳೆ ಮತ್ತು ಇತರ ಬೆಳೆಗಳ ಇಳುವರಿ ತೀವ್ರವಾಗಿ ಕುಸಿದಿರುವುದರಿಂದ ಇಳುವರಿಯಲ್ಲಿ ಗಮನಾರ್ಹ ಕೊರತೆಯನ್ನು ಕಾಣಬಹುದು ಎಂದು ಹೇಳಿದ್ದಾರೆ.
"ಮುಂದಿನ ಮೂರು-ನಾಲ್ಕು ದಿನಗಳಲ್ಲಿ, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಂಟಿ ಕೃಷಿ ನಿರ್ದೇಶಕರು (ಜೆಡಿಎ) ಅವರ ಅಧ್ಯಯನದ ಆಧಾರದ ಮೇಲೆ ನಮಗೆ ವರದಿಯನ್ನು ಒದಗಿಸುವ ನಿರೀಕ್ಷೆಯಿದೆ. ಆ ವರದಿಗಳ ಆಧಾರದ ಮೇಲೆ ರಾಜ್ಯದಲ್ಲಿ ಬರದಿಂದ ಆಗಿರುವ ಒಟ್ಟು ಬೆಳೆ ನಷ್ಟವನ್ನು ಅಂದಾಜಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.
ಆಗಸ್ಟ್ 25 ರವರೆಗೆ 66.68 ಲಕ್ಷ ಹೆಕ್ಟೇರ್ ಕೃಷಿಯಲ್ಲಿ 47.74 ಲಕ್ಷ ಹೆಕ್ಟೇರ್ ಭೂಮಿ ಮಳೆಯಾಶ್ರಿತವಾಗಿದ್ದು, 18.93 ಲಕ್ಷ ಹೆಕ್ಟೇರ್ ಮಾತ್ರ ನೀರಾವರಿಯಾಗಿದೆ. ಕನಿಷ್ಠ ಆರು ಜಿಲ್ಲೆಗಳ ಜಂಟಿ ನಿರ್ದೇಶಕರು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಹಾನಿ ವರದಿಯಾಗುತ್ತಿದೆ ಎಂದು ಹೇಳಿರುವುದಾಗಿ ಡಿಹೆಚ್ ಹೇಳಿದೆ.
ಭತ್ತದ ಬಿತ್ತನೆ ಕುಂಠಿತ
ಕೃಷಿ ಇಲಾಖೆ ನೀಡಿದ ಮಾಹಿತಿ ಪ್ರಕಾರ 10.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದ ಭತ್ತ ಈ ಹಂಗಾಮಿನಲ್ಲಿ ಕೇವಲ 6.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಖಾರಿಫ್ ಹಂಗಾಮಿನಲ್ಲಿ 8.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
ಅದೇ ರೀತಿ 15.79 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತೊಗರಿ ಬೆಳೆಯಬೇಕಾಗಿದ್ದರೂ ಕೇವಲ 13.44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 7.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಿತ್ತು ಆದರೆ ಈ ಬಾರಿ 4.18 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬಿತ್ತನೆಯಾಗಿದೆ. ಜೋಳ 0.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು ಆದರೆ ಈವರೆಗೆ 0.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ಭತ್ತದ ಕೃಷಿಗೆ ಭಾರಿ ತೊಂದರೆ
ಮಂಡ್ಯದ ಜಂಟಿ ಕೃಷಿ ನಿರ್ದೇಶಕ ಅಶೋಕ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿತ್ತು; ಈ ವರ್ಷ ಬರಗಾಲ ಕಾಡುತ್ತಿದೆ. ಭತ್ತ ಮತ್ತು ರಾಗಿ ಈ ಋತುವಿನ ಪ್ರಮುಖ ಬೆಳೆಗಳು. ಆದರೆ, ಕಳೆದ ತಿಂಗಳು ಶೇ.60ರಷ್ಟು ಮಳೆ ಕೊರತೆಯಾಗಿದ್ದು, ಭತ್ತದ ಕೃಷಿಗೆ ತೊಂದರೆಯಾಗುವ ಆತಂಕವಿದೆ ಎಂದು ಹೇಳಿದರು.
ಭತ್ತ, ಮೆಣಸಿನಕಾಯಿ, ಜೋಳ, ಬಾಜಲು ಮತ್ತಿತರೆ ಬೆಳೆಯುವ ಬಳ್ಳಾರಿಯಲ್ಲಿ ಈ ಹಂಗಾಮಿನಲ್ಲಿ ಅತಿ ಕಡಿಮೆ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಗುವಳಿ ನಡೆಯುತ್ತಿದ್ದು, ಈ ವರ್ಷ ಕೇವಲ 99 ಸಾವಿರ ಹೆಕ್ಟೇರ್ ನಲ್ಲಿ ಮಾತ್ರ ಕೃಷಿ ಮಾಡಲಾಗಿದೆ. ಆಗಸ್ಟ್ 3 ರಂದು ಕಾಲುವೆಗೆ ಟಿಬಿ ಅಣೆಕಟ್ಟು ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಲಾಯಿತು. ಪೂರೈಕೆ ಅನಿಯಮಿತವಾಗಿದ್ದರಿಂದ ರೈತರು ಕೃಷಿ ಮಾಡಲು ಮುಂದೆ ಬಂದಿಲ್ಲ ಎಂದು ಬಳ್ಳಾರಿ ಜೆಡಿಎ ಮಲ್ಲಿಕಾರ್ಜುನ ಕೆ ಹೇಳಿದರು.
ಒಣಹವೆಯಿಂದಾಗಿ ತೆನೆ, ಭತ್ತದಲ್ಲಿ ಬೆಳವಣಿಗೆ ಕುಂಠಿತವಾಗುತ್ತಿದ್ದು, ಜೋಳದ ಬೆಳೆಗಳು ಒಣಗುತ್ತಿವೆ ಎಂದು ರೈತರು ತಿಳಿಸಿದರು. ಮುಂದಿನ ಐದಾರು ದಿನಗಳು ಈ ರೈತರಿಗೆ ಬಹಳ ನಿರ್ಣಾಯಕ. ಮಳೆ ವಿಫಲವಾದರೆ, ಅವರ ಸಂಪೂರ್ಣ ಬೆಳೆಗಳು ಸಾಯುವ ಆತಂಕ ಎದುರಾಗಿದೆ.












Click it and Unblock the Notifications