ಬ್ರಿಟನ್ ಕೃಪೆ: ಬೆಂ-ಮುಂ ಮಾಯದಂಥ ಕಾರಿಡಾರ್

ಬೆಂಗಳೂರು ಮತ್ತು ಮುಂಬೈ ಮಧ್ಯೆ 950 ಕಿಮೀ ಉದ್ದಕ್ಕೂ ಸಾಗುವ ಕಾರಿಡಾರ್ ಯೋಜನೆಯ ಮಗ್ಗುಲಲ್ಲಿ ಹೊಸ ನಗರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಸಹಯೋಗ ನೀಡಲು ಬ್ರಟಿನ್ ಸಿದ್ದವಿರುವುದಾಗಿ ಅವರು ವಾಗ್ದಾನ ನೀಡಿದ್ದಾರೆ.
'ಇದು ದಿಢೀರನೆ ಪ್ರಕಟಿಸಿರುವ ಯೋಜನೆಯಲ್ಲ. ವಾಸ್ತವದಿಂದ ಕೂಡಿದೆ. ಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಉಭಯ ದೇಶಗಳ ವಾಣಿಜ್ಯ ಪ್ರತಿನಿಧಿಗಳು ಕಳೆದ ಒಂದು ವರ್ಷದಿಂದ ಕಾರ್ಯಮಗ್ನರಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಡೇವಿಡ್ ಕೆಮರಾನ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ವಾಣಿಜ್ಯೋದ್ಯಮಿಗಳ ಬೃಹತ್ ನಿಯೋಗದ ಜತೆಗೆ ಬಂದಿದ್ದಾರೆ.
ತಂತ್ರಜ್ಞಾನ ನಗರಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ಕಾರಿಡಾರ್ ಭಾರತದ ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಲಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವ ಈ ಯೋಜನೆಯ ಜಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.
ಯೋಜನೆಯ ಪ್ರಧಾನ ಅಂಶಗಳು:
* ಉದ್ದೇಶಿತ ಯೋಜನೆ ಸಾಕಾರಕ್ಕಾಗಿ ಬ್ರಿಟನ್ ವಾಸ್ತುಶಿಲ್ಪಿಗಳು, ಇಂಜಿನಿಯರುಗಳು ಹಾಗೂ ಹಣಕಾಸು ತಜ್ಞರು ಅಗತ್ಯ ನೆರವು.
* ಬೆಂಗಳೂರು-ಮುಂಬೈ ಮಧ್ಯೆ ಸುಮಾರು 1.35 ಲಕ್ಷ ಕೋಟಿ ರೂ. ವೆಚ್ಚದಲ್ಲಿ 9 ಜಿಲ್ಲೆ ಮತ್ತು ನಗರಗಳ ಅಭಿವೃದ್ಧಿ
* ಈ ಕಾರಿಡಾರ್ ಜಾಗದಲ್ಲಿ ಜನಸಂಖ್ಯೆ ಪ್ರಮಾಣ ಶೇ. 5.8ರಷ್ಟು ಹೆಚ್ಚಳವಾಗಲಿದೆ.
* 2020ರ ವೇಳೆಗೆ ದೇಶದ ಜಿಡಿಪಿಗೆ ಅದು ಶೇ. 11.8ರಷ್ಟು ಕೊಡುಗೆ ನೀಡಲಿದೆ.
* ಯೋಜನೆಯ ಮೊದಲ ಹಂತದಲ್ಲಿ ಸಾರಿಗೆ ಸಂಪರ್ಕ, ದೂರ ಸಂಪರ್ಕ, ವಿದ್ಯುತ್ ಯೋಜನೆಯಂಥ ಮೂಲಸೌಲಭ್ಯಗಳಲ್ಲಿ ಹೂಡಿಕೆ.
* ನಂತರ ಶಿಕ್ಷಣದಂಥ ಸಾಮಾಜಿಕ ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು.
* ಯೋಜನೆಯಿಂದಾಗಿ 30 ರಿಂದ 40 ಲಕ್ಷ ಮಂದಿ ನವ ನಗರಗಳತ್ತ ವಲಸೆ ಬರಲಿದ್ದಾರೆ.
* ಪ್ರತಿ ನವ ನಗರಗಳಲ್ಲಿ 10 ಲಕ್ಷ ಮನೆಗಳು, 120 ಶಾಲೆಗಳು ಮತ್ತು 10 ಕಾಲೇಜುಗಳು ಹಾಗೂ ಆಸ್ಪತ್ರೆಗಳ ಅಗತ್ಯ ಬೀಳಲಿದೆ.
* ಇದರಿಂದ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications