'ರಂಗ್ ದೇ' ಸಂಸ್ಥೆಯಿಂದ ರೈತರಿಗೆ ಬಡ್ಡಿ ರಹಿತ ಸಾಲ!
ಬೆಂಗಳೂರು, ಮೇ.28: ಭಾರತೀಯ ರೈತರ ಕೃಷಿ ಬದುಕು ಮಾನ್ಸೂನ್ ಮಳೆಯ ಜೊತೆಗಿನ ಜೂಜಾಟ ಎಂದೇ ಕರೆಯಲ್ಪಡುತ್ತದೆ. ಬಡ-ಮಧ್ಯಮ ವರ್ಗದ ರೈತರು ವರ್ಷದ ಬೆಳೆ ಬೆಳೆಯುವುದಕ್ಕೂ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಠಿ ಮತ್ತು ಅನಾವೃಷ್ಠಿ ನಡುವೆ ಕೊರೊನಾ ವೈರಸ್ ಕಾಟ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
Recommended Video
ಭಾರತದಲ್ಲಿ ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಂದಿಗ್ಘ ಸ್ಥಿತಿಯಲ್ಲಿ ಸಿಲುಕಿರುವ ರೈತರ ನೆರವಿಗೆ 'ರಂಗ್ ದೇ' ಸಂಸ್ಥೆಯು ಮುಂದಾಗಿದೆ. ದೇಶದ ಅನ್ನದಾತರಿಗೆ 1,000 ದಿಂದ 50,000ವರೆಗೆ ಬಡ್ಡಿರಹಿತ ಸಾಲ ನೀಡಲು ಹಾಗೂ ಹಣ ಉಳಿತಾಯಕ್ಕೆ ಯೋಜನೆ ರೂಪಿಸಿದೆ.
ದೇಶದಲ್ಲಿ ಆಹಾರ, ಹಣ್ಣು ಮತ್ತು ತರಕಾರಿ ಬೆಳೆಯುವ ರೈತರಿಗೆ ಅಗತ್ಯ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ರಂಗ್ ದೇ ಯೋಜನೆ ಜಾರಿಗೊಳಿಸಲಾಗಿದೆ. ರಂಗ್ ದೇ ಸಂಸ್ಥೆಯಲ್ಲಿ ನೀವು ಹೂಡಿಕೆ ಮಾಡಿರುವ ಹಣವನ್ನು ನೇರವಾಗಿ ರೈತರಿಗೆ ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಜನರಿಂದ ಜನರಿಗೆ ಸಾಲ ಸೌಲಭ್ಯ:
ಜನರಿಂದ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವ ಮೊದಲ ಸಾಮಾಜಿಕ ವೇದಿಕೆಯಾಗಿ 'ರಂಗ್ ದೇ' ಕೆಲಸ ಆರಂಭಿಸಿದೆ. ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಹಣವನ್ನೇ ರೈತರ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲವಾಗಿ ನೀಡಲಾಗುತ್ತದೆ. ಮೈಕ್ರೋಫೈನ್ಯಾನ್ಸ್ ಕಂಪನಿ ಹಾಗೂ ರಂಗ್ ದೇ ಸಂಸ್ಥೆಗೂ ವ್ಯತ್ಯಾಸವಿದೆ.
'ರಂಗ್ ದೇ' ಸಂಸ್ಥೆಯು 1,000 ದಿಂದ 50,000ದವರೆಗೂ ಸಾಲ ಪಡೆಯುವ ರೈತರು ಮತ್ತು ವ್ಯಾಪಾರಿಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ನೀಡುತ್ತದೆ. ಕಾರಣ ಈ ಪ್ರಮಾಣದಲ್ಲಿ ಸಾಲ ಪಡೆಯುವವರು ಹಣವನ್ನು ಆದಾಯ ಉತ್ಪಾದನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದರಿಂದ ಮೊದಲೇ ನಿಗದಿಗೊಳಿಸಿದ ಯೋಜನೆಯ ಪ್ರಕಾರದಲ್ಲಿ ಬಡ್ಡಿ ಸಹಿತ ಸಾಲವನ್ನು ಮರು ಪಾವತಿ ಮಾಡುತ್ತಾರೆ.
ಪಂಜಾಬ್, ಸಿಕ್ಕಿಂ, ತ್ರಿಪುರಾ, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಛತ್ತೀಸ್ ಗಢ್, ಮಹಾರಾಷ್ಟ್ರ. ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ 'ರಂಗ್ ದೇ' ಸಂಸ್ಥೆಯು ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದೆ. ಇನ್ನು, ಕೆಲವು ದಿನಗಳಲ್ಲೇ ದೇಶಾದ್ಯಂತ ರೈತರಿಗೆ ಈ ಯೋಜನೆಯನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ.












Click it and Unblock the Notifications