Monsoon 2024: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ, ರೈತಾಪಿ ವರ್ಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ, ಜೂನ್. 18: ಭಾರತದ ಮಾನ್ಸೂನ್ ಋತುವಿನಲ್ಲಿ ವಾಡಿಕೆಗಿಂತ 20 ಪ್ರತಿಶತ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಮಳೆ ಕೊರತೆಯೂ ಈ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಕೃಷಿ ವಲಯವನ್ನು ಕಳವಳಕ್ಕೆ ದೂಡಿದೆ.
ದೇಶದಲ್ಲಿ ಜೂನ್ 1 ರಿಂದ ಸಾಮಾನ್ಯಕ್ಕಿಂತ 20 ಪ್ರತಿಶತ ಕಡಿಮೆ ಮಳೆಯಾಗಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರದೇಶಗಳಲ್ಲಿಯೂ ಮಳೆ ಕೊರತೆ ಕಾಣುತ್ತಿದೆ. ಕೆಲವು ವಾಯುವ್ಯ ರಾಜ್ಯಗಳು ಶಾಖದ ಅಲೆಗಳನ್ನು ಇನ್ನೂ ಅನುಭವಿಸುತ್ತಿವೆ.

ಕೃಷಿ ವಲಯಕ್ಕೆ ಆತಂಕಕಾರಿ ಸಂದೇಶ
ಭಾರತದ ಮಾನ್ಸೂನ್ ಈ ಋತುವಿನಲ್ಲಿ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯನ್ನು ನೀಡಿದೆ ಎಂದು ಹವಾಮಾನ ಇಲಾಖೆ ಜೂನ್ 17 ರಂದು ತಿಳಿಸಿದೆ. ಇದು ದೇಶದ ಪ್ರಮುಖ ಕೃಷಿ ವಲಯಕ್ಕೆ ಆತಂಕಕಾರಿ ಸಂಕೇತ ಎಂದು ಹೇಳಿದೆ. ದೇಶದ ಅತಿದೊಡ್ಡ ಆರ್ಥಿಕತೆಯ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾದ ಬೇಸಿಗೆಯ ಮಳೆಯು ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ದಕ್ಷಿಣದಲ್ಲಿ ಪ್ರಾರಂಭವಾಗುತ್ತದೆ. ಜುಲೈ 8 ರ ಹೊತ್ತಿಗೆ ರಾಷ್ಟ್ರವ್ಯಾಪಿ ಮಳೆ ಸುರಿಯಲಿದೆ. ಇದು ರೈತರಿಗೆ ಅಕ್ಕಿ, ಹತ್ತಿ, ಸೋಯಾಬೀನ್ ಮತ್ತು ಕಬ್ಬಿನಂತಹ ಬೆಳೆಗಳನ್ನು ಬೆಳೆಯಲು ಸಹಾಯ ಮಾಡಿಕೊಡುತ್ತದೆ.
ಸೋಯಾಬೀನ್, ಹತ್ತಿ, ಕಬ್ಬು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುವ ಮಧ್ಯ ಭಾರತದಲ್ಲಿ ಮಳೆ ಕೊರತೆಯು ಶೇಕಡಾ 29 ಕ್ಕೆ ಏರಿದೆ. ಆದರೆ, ಭತ್ತ ಬೆಳೆಯುವ ದಕ್ಷಿಣ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾದ ಕಾರಣ ಸಾಮಾನ್ಯಕ್ಕಿಂತ 17% ಹೆಚ್ಚು ಮಳೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಈಶಾನ್ಯದಲ್ಲಿ ಇದುವರೆಗೆ ಸಾಮಾನ್ಯಕ್ಕಿಂತ 20% ಕಡಿಮೆ ಮಳೆಯಾಗಿದೆ ಮತ್ತು ವಾಯುವ್ಯದಲ್ಲಿ 68 % ಮಳೆ ಕಡಿಮೆಯಾಗಿದೆ.

ನೀರಾವತಿ ಇಲ್ಲದ ಕಡೆ ಅಕ್ಕಿ, ಗೋಧಿ ಮತ್ತು ಸಕ್ಕರೆಯ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕರಲ್ಲಿ ಅರ್ಧದಷ್ಟು ಕೃಷಿಭೂಮಿಯು ಸಾಮಾನ್ಯವಾಗಿ ಸೆಪ್ಟೆಂಬರ್ವರೆಗೆ ನಡೆಯುವ ವಾರ್ಷಿಕ ಮಳೆಯ ಮೇಲೆ ಅವಲಂಬಿತವಾಗಿದೆ. ಮಾನ್ಸೂನ್ ಮಳೆಯು ಭಾರತದ 3.5 ಡಾಲರ್ ಟ್ರಿಲಿಯನ್ ಆರ್ಥಿಕತೆಗೆ ಅತ್ಯಗತ್ಯವಾಗಿದೆ.
ಇದು ಕೃಷಿಗೆ ಅಗತ್ಯವಿರುವ 70% ರಷ್ಟು ನೀರನ್ನು ಪೂರೈಸುತ್ತದೆ. ಇದು ಜಲಾಶಯಗಳು ಮತ್ತು ಅಂತರ್ಜಲ ಮರುಪೂರಣಗೊಳಿಸುತ್ತದೆ. ಭಾರತದ ಕೃಷಿಭೂಮಿಯ ಅರ್ಧದಷ್ಟು ಭಾಗವು ನೀರಾವರಿಗೆ ಒಳಪಟ್ಟಿಲ್ಲ, ಇದು ವಾರ್ಷಿಕ ಮಾನ್ಸೂನ್ ಮಳೆಯನ್ನು ಅವಲಂಬಿಸಿದೆ. ಇದು ಸಾಮಾನ್ಯವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications