ಜನತೆಗೆ ನೋವಾಗಿದ್ದರೆ ಕ್ಷಮೆ: ದೇವೇಗೌಡ

ವಿಡಿಯೋ: ಗೌಡರ ವಿರುದ್ಧ ಬಿಜೆಪಿ ಕಾನೂನು ಸಮರ
ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ರೈತರು ನೈಸ್ ಕಚೇರಿ ಎದುರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ದೇವೇಗೌಡ, ಯಡಿಯೂರಪ್ಪ ಅವರು ರಾಜ್ಯ ಮುಖ್ಯಮಂತ್ರಿ ಎಂಬುದನ್ನು ಮರೆತು ವಾಚಾಮಗೋಚರವಾಗಿ ನಿಂದಿಸಿದ್ದರು. ಯಾವನ್ರೀ ಅವ್ನು ಮುಖ್ಯಮಂತ್ರಿ ಬ್ಲಡಿ ಬಾಸ್ಟರ್ಡ್ ಎಂಬ ಪದವನ್ನು ಪ್ರಯೋಗಿಸಿದ್ದರು. ಗೌಡರ ಪದಕ್ಕೆ ರಾಜ್ಯಾದ್ಯಂತ ಟೀಕೆ, ಟಿಪ್ಪಣಿಗಳು, ಆಕ್ರೋಶಗಳು ವ್ಯಕ್ತವಾಗಿದ್ದವು.
ಮುಂದಾಗುವ ಅನಾಹುತವನ್ನು ಅರಿತ ದೇವೇಗೌಡ ಸುವರ್ಣ ಚಾನೆಲ್ ಗೆ ಬಂದು ನಾನು ಹಾಗೆ ಅಂದಿಲ್ಲ ಒಂದು ಸಲ ಹೇಳಿದರೆ, ಇನ್ನೊಂದು ಸಲ ನಾನು ಅಂದಿದ್ದು ರಾಜ್ಯದ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿಗೆ, ಇನ್ನೊಮ್ಮೆ ನಾನು ಬಳಸಿದ ಪದಕ್ಕೆ ರಾಜ್ಯದ ಜನತೆಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದರು. ನೈಸ್ ವಿರುದ್ದದ ನನ್ನ ಹೋರಾಟ ಮುಂದುವರೆಯಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಭಾನುವಾರ ಸಂಚಿಕೆಯಲ್ಲಿ ಮುಖಪುಟದಲ್ಲಿ ಪ್ರಕಣವಾದ ವರದಿ "ಗೌಡರ ವಿರುದ್ಧ ರೈತರ ರಣಕಹಳೆ" ಹಾಗೂ ಭಾನುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ನನ್ನ ವಿರುದ್ಧ ಹಗುರವಾಗಿ ಮಾತಾನಾಡಿದ್ದರಿಂದ ಆಕ್ರೋಶಗೊಂಡು ಬಾವೋದ್ವೇಗಕ್ಕೆ ಒಳಗಾಗಿದ್ದೆ. ಈ ಸಂದರ್ಭದಲ್ಲಿ ಮಾತನಾಡಿರಬಹುದು ಎಂದು ಗೌಡರು ಹೇಳಿದರು. ಸಿಎಂ ಯಡಿಯೂರಪ್ಪ, ಎಜಿ ಅಶೋಕ ಹಾರನಹಳ್ಳಿ ಮತ್ತು ವಕೀಲ ದಿವಾಕರ್ ವಿರುದ್ಧ ಗೌಡರು ಬೆಂಕಿ ಕಾರಿದ್ದರು.












Click it and Unblock the Notifications