ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆರೆ ಸಂತ್ರಸ್ಥರಿಂದ ವಿಧಾನಸೌಧ ಮುತ್ತಿಗೆ, ಮುಂದೇನು?
ಕಳೆದ ತಿಂಗಳು ಉತ್ತರ ಕರ್ನಾಟಕದಲ್ಲಿ ನಡೆದ ಪ್ರವಾಹ ಸಂತ್ರಸ್ಥರಿಗೆ ಸರಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಯಿಂದ ಸಾವಿರಾರು ರೈತರು ಬೆಂಗಳೂರು ಆಗಮಿಸಿದ್ದು, ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಇದಕ್ಕೂ ಮುನ್ನ ಪ್ರೀಡಮ್ ಪಾರ್ಕ್ ನಲ್ಲಿ ಜಮಾಯಿಸಿದ ಸಂತ್ರಸ್ಥರು ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗತೊಡಗಿದರು. ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಮುಖ್ಯಸ್ಥ ಎಸ್ ಆರ್ ನಾಯಕ್, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಂತ್ರಸ್ಥರ ಅಹವಾಲು ಸ್ವೀಕರಿಸಿದರು.
ಸಾವಿರಾರು ಸಂಖ್ಯೆಯ ಸಂತ್ರಸ್ಥರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಿದ್ದು, ಸಂತ್ರಸ್ಥರ ಮೇಲೆ ಯಾವ ಕಾರಣಕ್ಕೂ ಲಾಠಿ ಪ್ರಹಾರ ನಡೆಸಬಾರದು ಎಂಬ ಮುಖ್ಯಮಂತ್ರಿಗಳ ಆದೇಶದಿಂದ ಪೊಲೀಸರು ಪಡಬಾರದ ಪಡಿಪಾಟಲುಪಟ್ಟಿದ್ದಂತೂ ಸತ್ಯ.
Comments
yediyurappa ಯಡಿಯೂರಪ್ಪ ಉತ್ತರ ಕರ್ನಾಟಕ ರೈತ ವಿಧಾನಸೌಧ north karnataka gadag ಗದಗ ಹಾವೇರಿ haveri ನೆರೆ ಹಾವಳಿ flood victims ಸಂತ್ರಸ್ಥರು ಮುತ್ತಿಗೆ
Story first published: Thursday, December 31, 2009, 15:39 [IST]