ರಸಗೊಬ್ಬರ ಸಚಿವಾಲಯ: ಹೆಚ್ಚುವರಿ 30,000 ಕೋಟಿ ರೂ. ಸಬ್ಸಿಡಿಗೆ ಮನವಿ
ಬೆಂಗಳೂರು, ಜನವರಿ 20: ಕೇಂದ್ರ ರಸಗೊಬ್ಬರ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಕೊನೆಯ ನಾಲ್ಕನೇ ತ್ರೈಮಾಸಿಕಕ್ಕೆ 30,000 ಕೋಟಿ ರೂ. ಸಹಾಯಯಧನ ಹೆಚ್ಚುವರಿಯಾಗಿ ಒದಗಿಸುವಂತೆ ಮನವಿ ಮಾಡಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ವೇಳೆ ಸಹಾಯಧನ (ಸಬ್ಸಿಡಿ) ಮಂಜೂರು ನಿರೀಕ್ಷೆಯಲ್ಲಿ ಕೇಂದ್ರ ರಸಗೊಬ್ಬರ ಸಚಿವಾಲಯ ಇದ್ದು, ಅಂದಾಜು ಪಟ್ಟಿ ಸಿದ್ದಪಡಿಸಿಕೊಂಡಿದೆ.
ಉಕ್ರೇನ್ ಮತ್ತು ರಷ್ಯಾ ಮಧ್ಯದ ಯುದ್ಧವು ಜಾಗತಿಕವಾಗಿ ಪರಿಣಾಮ ಬೀರಿದೆ. ನೈಸಗಿರ್ಕ ಅನಿಲ ಹಾಗೂ ರಸಗೊಬ್ಬರದಂತೆ ಉತ್ಪನ್ನಗಳ ದರದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯವು ಮಣ್ಣಿನ ಪೋಷಕಾಂಶಗಳ ಮೇಲಿನ ಸಬ್ಸಿಡಿಗೆಂದು 2.15 ಟ್ರಿಲಿಯನ್ ರೂಪಾಯಿ ನಿಗದಿಪಡಿಸಿದೆ. ಇದರ ಜೊತೆಗೆ 30,000 ಕೋಟಿ ರೂ. ಸಹಾಯಯಧನಕ್ಕೆ ಮನವಿ ಮಾಡಲಾಗಿದೆ.

ಈಗಾಗಲೇ ನಿಗದಿತ ಹಣಕ್ಕಿಂತ ಮನವಿ ಮಾಡಿರುವ ಅನುದಾನ 1.09 ಟ್ರಿಲಿಯನ್ ಹೆಚ್ಚುವರಿಯಾಗಲಿದೆ. ಇದು ಈ ವರ್ಷದ ಹಣಕಾಸು ವರ್ಷದಲ್ಲಿ ಆರಂಭದಿಂದ ಕೊನೆ ತ್ರೈಮಾಸಿಕದವರೆಗೆ ಒಟ್ಟು ನಿವ್ವಳ 3.26 ಟ್ರಿಲಿಯನ್ ರೂಪಾಯಿ ವೆಚ್ಚ ಆಗುತ್ತದೆ. ಆದರೆ ಎರಡು ರಾಷ್ಟ್ರಗಳ ನಿರಂತರ ಯುದ್ಧದಿಂದಾಗಿ ದರ ಏರಿಕೆ ಹಿನ್ನೆಲೆ ಸಬ್ಸಿಡಿ ಅಗತ್ಯ ಎನ್ನಲಾಗಿದೆ.
ಮೂರನೇ ಒಂದು ಭಾಗ ರಸಗೊಬ್ಬರ ಆಮದು
ಗೊಬ್ಬರದ ಮೇಲಿನ ವಾರ್ಷಿಕ ಬಜೆಟ್ ವೆಚ್ಚವು 1 ಟ್ರಿಲಿಯನ್ ರೂಪಾಯಿಯನ್ನು ಸತತವಾಗಿ ಮೂರನೇ ವರ್ಷ ಮೀರಲಿದೆ. ಈ ಸಂಬಂಧ ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಭರವಸೆ ನೀಡಿದ್ದರು. ಸರ್ಕಾರವು ಅಂತಾರಾಷ್ಟ್ರೀಯ ಬೆಲೆ ಏರಿಕೆಯ ವೆಚ್ಚವನ್ನು ರೈತರಿಗೆ ಮೇಲೆ ಹೇರುವುದಿಲ್ಲ. ಜೊತೆಗೆ ಮಣ್ಣಿನ ಪೋಷಕಾಂಶಗಳ ಕೊರತೆ ಆಗದಂತೆ ಸಮರ್ಪಕವಾಗಿ ರಸಗೊಬ್ಬರ ಪೂರೈಸುವುದಾಗಿ ಅವರು ತಿಳಿಸಿದ್ದರು.

ಮೂಲಗಳ ಪ್ರಕಾರ, ಭಾರತದ ಬಹುಪಾಲು ಡಿ-ಅಮೋನಿಯಂ ಫಾಸ್ಫೇಟ್ (DAP) ರಸಗೊಬ್ಬರಗಳು ಪಶ್ಚಿಮ ಏಷ್ಯಾ, ಜೋರ್ಡಾನ್ ದೇಶಗಳಿಂದ ಆಮದಾಗುತ್ತವೆ. ಆದರೆ ಎಲ್ಲಾ ಸ್ಥಳೀಯ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MoP) ಬೆಲಾರಸ್, ಕೆನಡಾ, ಜೋರ್ಡಾನ್ ಮತ್ತು ಇತರ ದೇಶಗಳಿಂದ ಭಾರತಕ್ಕೆ ರಫ್ತಾಗುತ್ತದೆ. ಭಾರತವು ವಾರ್ಷಿಕವಾಗಿ ಯೂರಿಯಾವನ್ನು ಶೇ. 20ರಷ್ಟು ವಿದೇಶಗಳಿಂದ ತರುತ್ತದೆ. ದೇಶ ಮಣ್ಣಿನ ಪೋಷಕಾಂಶಗಳ ರಕ್ಷಣೆಗೆ ಬೇಕಾದ ಮೂರನೇ ಒಂದು ಭಾಗವು ಆಮದಾಗುತ್ತದೆ. ಪರಿಸ್ಥಿತಿಯಲ್ಲಿನ ಬದಲಾವಣೆ, ಬೆಲೆ ಹೆಚ್ಚಾಗಿದ್ದರಿಂದ ಸಬ್ಸಿಡಿ ಕೇಳಲಾಗಿದೆ ಎಂದು ರಸಗೊಬ್ಬರ ಸಚಿವಾಲಯ ತಿಳಿಸಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು












Click it and Unblock the Notifications