ಸೊಪ್ಪು, ತರಕಾರಿ ತಗ್ಗಿದ ಬೆಲೆ : ಗ್ರಾಹಕರು ಕೊಂಚ ನಿರಾಳ
ಬೆಂಗಳೂರು ಜನವರಿ 16: ಮೂರು ತಿಂಗಳಿನಿಂದ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಇದೀಗ ತರಕಾರಿ ಹಾಗೂ ಸೊಪ್ಪುಗಳ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದೆ. ಡಿಸೆಂಬರ್ ಗೆ ಹೋಲಿಸಿದರೆ ಇದೀಗ ಶೇ. 30-40 ರಷ್ಟು ಕಡಿಮೆಯಾಗಿದೆ.
ನವೆಂಬರ್ ನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಥೇಚ್ಛ ಮಳೆಯಾಯಿತು. ಇದರ ಪರಿಣಾಮ ಬೆಂಗಳೂರು ಸುತ್ತಮುತ್ತ ಕೊಳವೆಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಯಿತು. ಇದೀಗ ತರಕಾರಿ ಬೆಳೆಗಳು ಉತ್ತಮ ಫಸಲು ನೀಡಿದ್ದು, ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ತರಕಾರಿ ಬರುತ್ತಿದೆ. ಹೀಗಾಗಿ, ಬೆಲೆ ಕಡಿಮೆಯಾಗಿದೆ ಎಂದು ಹಾಪ್ಸ್ ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ. ವಿಶ್ವನಾಥ್ ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಟೊಮೆಟೋ ದರ ಕೆಜಿಗೆ 50 ರೂ ತಲುಪಿತ್ತು. ಇದೀಗ 10 ರೂ ಗೆ ಕೆಲವೆಡೆ 8 ರೂ ಗೆ ಇಳಿಕೆಯಾಗಿದೆ. ಬೀನ್ಸ್ 40 ರೂ ಮೇಲ್ಪಟ್ಟಿತ್ತು. ಇದೀಗ 20 ರೂ ಇದೆ. ಕೆ.ಆರ್ ಮಾರುಕಟ್ಟೆಯ ಸುತ್ತ ಮುತ್ತ ತಳ್ಳುವ ಗಾಡಿ ಮಾರಾಟಗಾರರು ಎಳೇ ಸೌತೇಕಾಯಿಯನ್ನು ಕೆಜಿಗೆ 10-15 ರೂ ಮಾರಾಟ ಮಾಡುತ್ತಿದ್ದಾರೆ. ಹಾಗಲಕಾಯಿ ಕೂಡ 65 ರೂ ಗೆ ಇತ್ತು. ಇದೀಗ ಅದೂ ಕಡಿಮೆ ಯಾಗಿದ್ದು ಕೆಜಿಗೆ 29 ರೂ ಇದೆ.

ಈರುಳ್ಳಿ, ತೆಂಗಿನಕಾಯಿ ದುಬಾರಿ: ಈರುಳ್ಳಿ ಮತ್ತು ತೆಂಗಿನಕಾಯಿ ದರ ಮಾತ್ರ ಇಳಿಕೆಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಈರುಳ್ಳಿ ದರ ಕೆಜಿಗೆ 40-50 ರೂ ಇದೆ ಜನವರಿ ನಂತರ ಹೊಸ ಬೆಳೆ ಬರುವವರೆಗೂ ಬೆಲೆಗಳು ಹಾಗೆಯೇ ಇರುತ್ತದೆ. ಸುಮಾರು ಎರಡು ವರ್ಷಗಳಿಂದ ಒಂದು ಕಾಯಿಗೆ ಬರೋಬ್ಬರಿ 20-30 ರೂವರೆಗಿದೆ. ಹಾಪ್ ಕಾಮ್ಸ್ ನಲ್ಲಿ ಕೂಡ 20 ಅಥವಾ 25 ರೂ ಗೆ ತೆಂಗಿನಕಾಯಿ ಸಿಗುತ್ತಿಲ್ಲ. ಆರಂಭಿಕ ದರವೇ 28 ರೂ ಗಳಾದರೆ ದೊಡ್ಡ ಗಾತ್ರೆದ ಬೆಲೆ 37 ರೂ ಇದೆ. ಇನ್ನೊಂದು ತಿಂಗಳಿಗೆ ತರಕಾರಿ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಹಾಪ್ ಕಾಮ್ಸ್ ದರಪಟ್ಟಿ
ಬೀಟ್ ರೂಟ್ - 24 ರೂ
ಟೊಮೆಟೋ - 10 ರೂ
ಬೀನ್ಸ್ - 19 ರೂ
ಮೆಂತ್ಯೆ ಸೊಪ್ಪು - 40 ರೂ
ಮೂಲಂಗಿ - 17 ರೂ
ಪಾಲಕ್ ಸೊಪ್ಪು - 40ರೂ
ಕೊತ್ತಂಬರಿ ಸೊಪ್ಪು - 25 ರೂ
ಏಲಕ್ಕಿ ಬಾಳೆಹಣ್ಣು - 60 ರೂ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications