ಸೊಪ್ಪು, ತರಕಾರಿ ತಗ್ಗಿದ ಬೆಲೆ : ಗ್ರಾಹಕರು ಕೊಂಚ ನಿರಾಳ
ಬೆಂಗಳೂರು ಜನವರಿ 16: ಮೂರು ತಿಂಗಳಿನಿಂದ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಇದೀಗ ತರಕಾರಿ ಹಾಗೂ ಸೊಪ್ಪುಗಳ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದೆ. ಡಿಸೆಂಬರ್ ಗೆ ಹೋಲಿಸಿದರೆ ಇದೀಗ ಶೇ. 30-40 ರಷ್ಟು ಕಡಿಮೆಯಾಗಿದೆ.
ನವೆಂಬರ್ ನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಥೇಚ್ಛ ಮಳೆಯಾಯಿತು. ಇದರ ಪರಿಣಾಮ ಬೆಂಗಳೂರು ಸುತ್ತಮುತ್ತ ಕೊಳವೆಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಯಿತು. ಇದೀಗ ತರಕಾರಿ ಬೆಳೆಗಳು ಉತ್ತಮ ಫಸಲು ನೀಡಿದ್ದು, ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ತರಕಾರಿ ಬರುತ್ತಿದೆ. ಹೀಗಾಗಿ, ಬೆಲೆ ಕಡಿಮೆಯಾಗಿದೆ ಎಂದು ಹಾಪ್ಸ್ ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ. ವಿಶ್ವನಾಥ್ ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಟೊಮೆಟೋ ದರ ಕೆಜಿಗೆ 50 ರೂ ತಲುಪಿತ್ತು. ಇದೀಗ 10 ರೂ ಗೆ ಕೆಲವೆಡೆ 8 ರೂ ಗೆ ಇಳಿಕೆಯಾಗಿದೆ. ಬೀನ್ಸ್ 40 ರೂ ಮೇಲ್ಪಟ್ಟಿತ್ತು. ಇದೀಗ 20 ರೂ ಇದೆ. ಕೆ.ಆರ್ ಮಾರುಕಟ್ಟೆಯ ಸುತ್ತ ಮುತ್ತ ತಳ್ಳುವ ಗಾಡಿ ಮಾರಾಟಗಾರರು ಎಳೇ ಸೌತೇಕಾಯಿಯನ್ನು ಕೆಜಿಗೆ 10-15 ರೂ ಮಾರಾಟ ಮಾಡುತ್ತಿದ್ದಾರೆ. ಹಾಗಲಕಾಯಿ ಕೂಡ 65 ರೂ ಗೆ ಇತ್ತು. ಇದೀಗ ಅದೂ ಕಡಿಮೆ ಯಾಗಿದ್ದು ಕೆಜಿಗೆ 29 ರೂ ಇದೆ.

ಈರುಳ್ಳಿ, ತೆಂಗಿನಕಾಯಿ ದುಬಾರಿ: ಈರುಳ್ಳಿ ಮತ್ತು ತೆಂಗಿನಕಾಯಿ ದರ ಮಾತ್ರ ಇಳಿಕೆಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಈರುಳ್ಳಿ ದರ ಕೆಜಿಗೆ 40-50 ರೂ ಇದೆ ಜನವರಿ ನಂತರ ಹೊಸ ಬೆಳೆ ಬರುವವರೆಗೂ ಬೆಲೆಗಳು ಹಾಗೆಯೇ ಇರುತ್ತದೆ. ಸುಮಾರು ಎರಡು ವರ್ಷಗಳಿಂದ ಒಂದು ಕಾಯಿಗೆ ಬರೋಬ್ಬರಿ 20-30 ರೂವರೆಗಿದೆ. ಹಾಪ್ ಕಾಮ್ಸ್ ನಲ್ಲಿ ಕೂಡ 20 ಅಥವಾ 25 ರೂ ಗೆ ತೆಂಗಿನಕಾಯಿ ಸಿಗುತ್ತಿಲ್ಲ. ಆರಂಭಿಕ ದರವೇ 28 ರೂ ಗಳಾದರೆ ದೊಡ್ಡ ಗಾತ್ರೆದ ಬೆಲೆ 37 ರೂ ಇದೆ. ಇನ್ನೊಂದು ತಿಂಗಳಿಗೆ ತರಕಾರಿ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಹಾಪ್ ಕಾಮ್ಸ್ ದರಪಟ್ಟಿ
ಬೀಟ್ ರೂಟ್ - 24 ರೂ
ಟೊಮೆಟೋ - 10 ರೂ
ಬೀನ್ಸ್ - 19 ರೂ
ಮೆಂತ್ಯೆ ಸೊಪ್ಪು - 40 ರೂ
ಮೂಲಂಗಿ - 17 ರೂ
ಪಾಲಕ್ ಸೊಪ್ಪು - 40ರೂ
ಕೊತ್ತಂಬರಿ ಸೊಪ್ಪು - 25 ರೂ
ಏಲಕ್ಕಿ ಬಾಳೆಹಣ್ಣು - 60 ರೂ
-
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ












Click it and Unblock the Notifications