ಬಜೆಟ್ ದಿನ ಭರ್ಜರಿ ಏರಿಳಿತ ಕಾಣಬಹುದಾದ ಷೇರುಗಳು!
ಬೆಂಗಳೂರು, ಜನವರಿ 30: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 01ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಗುರುವಾರ (ಫೆಬ್ರವರಿ 01)ದಂದು ಯಾವೆಲ್ಲ ಕ್ಷೇತ್ರಗಳ ಷೇರುಗಳು ಏರಿಳಿತ ಕಾಣಬಹುದು ಎಂಬುದರ ಬಗ್ಗೆ ಇಲ್ಲಿದೆ ವರದಿ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಆರ್ಥಿಕ ಸಮೀಕ್ಷೆಯಲ್ಲಿ ಕಳೆದ 12 ತಿಂಗಳಿನಲ್ಲಿ ಸರ್ಕಾರ ಕೈಗೊಂಡ ಯೋಜನೆಗಳು, ಆರ್ಥಿಕ ಸುಧಾರಣೆ ಹಾಗೂ ಪ್ರಗತಿಯ ಬಗ್ಗೆ ವರದಿ ಮಂಡಿಸಲಾಗಿದೆ.
ಜೇಟ್ಲಿ ಮಂಡಿಸಿದ ಸಮೀಕ್ಷೆಯಲ್ಲಿ ಕೃಷಿ ಕ್ಷೇತ್ರಕ್ಕೆ ಆಶಾದಾಯಕ ನಿರೀಕ್ಷೆಗಳಿಲ್ಲ. ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.
ವಿತ್ತೀಯ ಕೊರತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 3.5ರಷ್ಟು ಇಳೀಕೆಯಾಗುವ ಸಾಧ್ಯತೆಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಶೇ 3.3 ಹಾಗೂ ಶೇ 3.4ಕ್ಕೆ ಕುಸಿಯಲಿದೆ. ಬಜೆಟ್ ದಿನದಂದು ಯಾವ ಯಾವ ಕ್ಷೇತ್ರಗಳ ಯಾವ ಯಾವ ಸಂಸ್ಥೆಯ ಷೇರುಗಳು ಸದ್ದು ಮಾಡಬಹುದು ಎಂಬುದನ್ನು ಮುಂದೆ ತಿಳಿಯಿರಿ...

ಬ್ಯಾಂಕಿಂಗ್ ವಲಯ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಪಿಎನ್ ಬಿ ಹೌಸಿಂಗ್, ಕ್ಯಾನ್ ಫಿನ್ ಹೋಮ್ಸ್, ಜಿಐಸಿ ಹೌಸಿಂಗ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಷೇರುಗಳ ಮೇಲೆ ಗಮನವಿರಲಿ ಎಂದು ಷೇರ್ ಖಾನ್ ಸಂಸ್ಥೆ ಹೇಳಿದೆ.
ವಸತಿ ಯೋಜನೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇರುವುದರಿಂದ ಹೌಸಿಂಗ್ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳ ಷೇರುಗಳು ಹೆಚ್ಚಿನ ಸದ್ದು ಮಾಡುವ ಸಾಧ್ಯತೆಯಿದೆ.
ಕೃಷಿ ವಲಯ
ಧನುಕಾ ಆಗ್ರಿಟೆಕ್, ಪಿಐ ಇಂಡಸ್ಟ್ರೀಸ್, ಕಾವೇರಿ ಸೀಡ್ಸ್, ಚಂಬಲ್ ಫರ್ಟಿಲೈಜರ್ಸ್, ಕೊರಮಂಡಲ್ ಇಂಟರ್ ನ್ಯಾಷನಲ್ ಷೇರುಗಳು ಹೆಚ್ಚು ಏರಳಿತ ಕಾಣಬಹುದಾಗಿದೆ.
ರಸಗೊಬ್ಬರ, ಅಡುಗೆ ಅನಿಲಕ್ಕೆ ಸಂಬಂಧಿಸಿದ ಷೇರುಗಳನ್ನು ಹೆಚ್ಚಾಗಿ ಗಮನಿಸಬೇಕಿದೆ.
ಆಟೋಮೊಬೈಲ್
ಹೀರೋ ಮೋಟೋ ಕಾರ್ಪ್, ಎಂ ಅಂಡ್ ಎಂ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಐಷರ್ ಮೋಟರ್ಸ್,ಟಾಟಾ ಮೋಟರ್ಸ್
ಅಶೋಕ್ ಲೇಲ್ಯಾಂಡ್, ಟಾಟಾ ಮೋಟರ್ಸ್, ಐಷರ್ ಮೋಟರ್ಸ್ ಷೇರುಗಳನ್ನು ಗಮನಿಸಿ ಎಂದು ಷೇರ್ ಖಾನ್ ಸಂಸ್ಥೆ ಹೇಳಿದೆ.

ಸರಕು ಸಾಗಣೆ ಹಾಗೂ ರಕ್ಷಣಾ ಕ್ಷೇತ್ರ
ಎಲ್ ಅಂಡ್ ಟಿ, ಕಲ್ಪತರು ಪವರ್ ಹಾಗೂ ಕೆಇಸಿ ಇಂಟರ್ ನ್ಯಾಷನಲ್ ಷೇರುಗಳನ್ನು ಗಮನಿಸಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications