ವರಮಹಾಲಕ್ಷ್ಮಿ ಸಂಭ್ರಮ : ಬೆಂಗಳೂರು ಮಾರ್ಕೆಟಿನ ಪಿಚ್ಚರ್
ಬೆಂಗಳೂರು, ಆಗಸ್ಟ್, 11: ಹಬ್ಬಗಳ ಮಾಸ ಆರಂಭವಾಗಿದೆ. ಶುಕ್ರವಾರ ಆಗಸ್ಟ್ 12 ರಂದು ವರಮಹಾಲಕ್ಷ್ಮೀ ಹಬ್ಬ. ಎಲ್ಲರೂ ಖರೀದಿ ಭರಾಟೆಯಲ್ಲಿ ನಿರತರಾಗಿದ್ದಾರೆ. ನಾವು ಹಾಗೇ ಮಾರುಕಟ್ಟೆ ಮೇಲೆ ಒಂದು ರೌಂಡ್ ಹಾಕಿಕೊಂಡು ಬರೋಣ.
ಈ ಹಬ್ಬಗಳಿಗೂ ಬೆಲೆ ಏರಿಕೆಗೂ ಬಿಡಿಸದ ಬಂಧ. ಹೂವು-ಹಣ್ಣುಗಳ ಬೆಲೆ ಏರಿಕೆಯ ಹಾದಿಯಲ್ಲಿದ್ದರೆ ತೆಂಗಿನಕಾಯಿ ದರ ಗ್ರಾಹಕರ ಕೈಗೆ ಎಟಕುವಂತೆ ಇದೆ. ಕನಕಾಂಬರ ಹೂವು ಕೆ.ಜಿ.ಗೆ 2ಸಾವಿರ ರೂ. ದಾಟಿ ಗೃಹಿಣಿಯರ ತಲೆ ಬಿಸಿ ಹೆಚ್ಚು ಮಾಡಿದೆ.[ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣು ಖರೀದಿಗೆ ಹಾಪ್ಕಾಮ್ಸ್ಗೆ ಬನ್ನಿ]
ಗಾಂಧಿ ಬಝಾರ್, ಕೆಆರ್ ಮಾರುಕಟ್ಟೆ, ಯಶವಂತಪುರ, ಎನ್ ಆರ್ ಕಾಲೋನಿ, ಮಲ್ಲೇಶ್ವರಂ ಸೇರಿದಂತೆ ಪ್ರಮುಖ ಮಾರುಕಟ್ಟೆ ಮತ್ತು ಬೀದಿ ಬದಿಯಲ್ಲಿ ಬಾಳೆ ಕಂದುಗಳು, ಮಾವಿನ ಸೊಪ್ಪು, ಹೂವು-ಹಣ್ಣು ಮಾರಾಟ ಜೋರಾಗಿದೆ. ಸಂಜೆ ಹೆಂಡತಿಯೊಂದಿಗೆ ಮಾರುಕಟ್ಟೆಗೆ ತೆರಳುವ ಮುನ್ನ ದರ ಪಟ್ಟಿಯನ್ನು ಒಮ್ಮೆ ನೋಡಿಕೊಂಡು ಹೋಗಿ...[ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ]

ಬಿಡಿ ಹೂವು
ಗಾಂಧಿ ಬಝಾರ್, ಕೆಆರ್ ಮಾರುಕಟ್ಟೆ, ಯಶವಂತಪುರದಲ್ಲಿ ಬಿಡಿ ಹೂವು ಕೆಜಿಗೆ 200 ರಿಂದ 250 ರು, ನಡುವೆ ಬಿಕರಿಯಾಗುತ್ತದೆ. ರಸ್ತೆ ಬದಿಯಲ್ಲಿ ಇದೇ ಬಿಡಿ ಹೂವಿಗೆ 300 ರಿಂದ 400 ರು. ನೀಡಬೇಕು.

ಸೇವಂತಿಗೆ
ಬಂಗಾರದ ಬಣ್ಣದ ಸೇವಂತಿಗೆ ಬಂಗಾರದಂತೆ ದರ ಹೆಚ್ಚಳ ಮಾಡಿಕೊಂಡಿದೆ. ಕೆಜಿಗೆ 300 ರಿಂದ 400 ರು. ನೀಡಲೇಬೇಕು.

ಮಾವಿನ ಸೊಪ್ಪಿನ ಕಟ್ಟು
20 ಮಾವಿನ ತುಂಡುಗಳಿರುವ ಕಟ್ಟಿಗೆ 10 ರು. ಸಂಜೆ ವೇಳೆಗೆ ಇದು 20 ರು. ಆಗುವ ಸಾಧ್ಯತೆ ಇದೆ. ಒಂದು ತಾವರೆ ಹೂವಿಗೆ 25 ರು. ನೀಡಬೇಕಿದೆ.

ತುಳಸಿ
ತುಳಸಿ ಕೆಜಿಗೆ 350 ರು. ನೀಡಬೇಕಾಗಿದೆ. 200ರು . ಆಸುಪಾಸಿನಲ್ಲಿದ್ದ ತುಳಸಿ ಏಕಾಏಕಿ ದರ ಏರಿಕೆ ಮಾಡಿಕೊಂಢಿದೆ.

ವೀಳ್ಯದೆಲೆ
ವೀಳ್ಯದೆಲೆ 100 ಕ್ಕೆ 80 ರು. ನೀಡಬೇಕಿದೆ. ಸಂಜೆ ವೇಳೆಗೆ 100ಕ್ಕೆ 100 ರು. ಆದರೂ ಆಶ್ಚರ್ಯವಿಲ್ಲ.

ಮಲ್ಲಿಗೆ
ಪರಿಮಳಸೂಸುವ ಮಲ್ಲಿಗೆ ಹೂವಿಗೆ ಕೆಜಿಗೆ 400 ರಿಂದ 450 ರು ನೀಡಬೇಕು.

ತೆಂಗಿನಕಾಯಿ
ಎರಡು ಬಗೆಯ ತೆಂಗಿನಕಾಯಿ ಲಭ್ಯವಿದೆ. 12 ರು. ಮತ್ತು 15 ರು. ದಲ್ಲಿ ತೆಂಗಿನಕಾಯಿ ಬಿಕರಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತೆಂಗಿನಕಾಯಿ ದರದಲ್ಲಿ ಇಳಿಕೆಯಾಗಿದೆ.

ದರ ಏರಿಸಿಕೊಂಡ ಹಣ್ಣುಗಳು
ಹಾಪ್ಕಾಮ್ಸ್ನಲ್ಲಿ ಏಲಕ್ಕಿ ಬಾಳೆಗೆ 88 ರೂ. ಸಗಟು ದರ ಇದ್ದರೆ ಚಿಲ್ಲರೆ ಮಾರುಕಟ್ಟೆಯಲ್ಲಿ 90 ರಿಂದ 100 ರೂ.ಗೆ ಏರಿಕೆ ಕಂಡಿದೆ. ಉಳಿದಂತೆ ಸೇಬು- 177ರು., ಬಾಳೆ ಹಣ್ಣು- 60 ರು. ದ್ರಾಕ್ಷಿ ಹಣ್ಣು120 ರು., ಮೂಸಂಬಿ 60 ರು. ಗೆ ಬಿಕರಿಯಾಗುತ್ತಿದೆ.

ಹಾಪ್ ಕಾಮ್ಸ್ ನಿಂದ ರಿಯಾಯಿತಿ
ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣುಗಳನ್ನು ಹಾಪ್ಕಾಮ್ಸ್ನಲ್ಲಿ ಖರೀದಿ ಮಾಡಬಹುದು. ಹಬ್ಬದ ಪ್ರಯುಕ್ತ ಹಣ್ಣುಗಳ ಖರೀದಿ ಮೇಲೆ ಶೇ 5ರಷ್ಟು ರಿಯಾಯಿತಿಯನ್ನು ಹಾಪ್ಕಾಮ್ಸ್ ಘೋಷಣೆ ಮಾಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications