ಬಂಪರ್ ಬೆಳೆ ಕಾರಣ, ಬಡವರ ಕೈಗೆಟುಕಿದ ಸೇಬು

ಹಿಮಾಚಲ ಪ್ರದೇಶದಲ್ಲಿ 20 ಕೆಜಿ ಸೇಬಿನ ಪೆಟ್ಟಿಗೆಯ ಸಗಟು ಬೆಲೆ 1000 ದಿಂದ 1100 ರೂಪಾಯಿಗಳಿಗೆ ಕುಸಿದಿದೆ. ಕಳೆದ ವರ್ಷ ಇದು 1600 ರಿಂದ 1700 ರೂಪಾಯಿಗಳಷ್ಟಿತ್ತು. ಜಮ್ಮು ಕಾಶ್ಮೀರದಲ್ಲೂ ಇದೇ ರೀತಿ ಬೆಲೆ ಇಳಿಕೆಯಾಗಿದೆ.
ಇದರಿಂದ ಮಹಾನಗರಗಳಾದ ಚೆನ್ನೈ, ದೆಹಲಿ, ಮುಂಬೈನಲ್ಲೂ ಬೆಲೆ ಪ್ರತೀ ಕೆಜಿಗೆ ರೂ 60 ರಿಂದ 70ಕ್ಕೆ ಇಳಿದಿದ್ದು ಕಳೆದ ವರ್ಷ 100 ರಿಂದ 110 ರುಪಾಯಿಗಳಿಗೆ ಮಾರಾಟವಾಗಿತ್ತು. ಹಿಮಾಚಲ ಪ್ರದೇಶದ ತೋಟಗಾರಿಕಾ ಇಲಾಖೆಯ ಅಂದಾಜಿನ ಪ್ರಕಾರ ಈ ಜುಲೈ- ಅಕ್ಟೋಬರ್ ಸೀಸನ್ ನಲ್ಲಿ ಸೇಬಿನ ಉತ್ಪಾದನೆ ಎರಡೂ ವರೆ ಪಟ್ಟು ಹೆಚ್ಚಳವಾಗಲಿದ್ದು 6,35,000 ಟನ್ ಗಳಾಗಲಿವೆ.
ಕಳೆದ ವರ್ಷ ಇಲ್ಲಿ 2,80,000 ಟನ್ ಸೇಬು ಉತ್ಪಾದನೆ ಆಗಿತ್ತು. ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 7 ಲಕ್ಷ ಟನ್ ಸೇಬು ಉತ್ಪಾದನೆ ಆಗಿದ್ದರೆ ಈ ವರ್ಷ 11,20,000 ಟನ್ ಉತ್ಪಾದನೆ ಆಗಲಿದೆ.ಸೇಬು ಬೆಳೆಯುವ ಎರಡೂ ರಾಜ್ಯಗಳಲ್ಲಿ ಉತ್ತಮ ಮಳೆ ಆಗಿದ್ದು ಹಾಗೂ ಹಿಮ ಕಡಿಮೆಯಾಗಿರುವುದರಿಂದ ಬೆಳೆ ಬಂಪರ್ ಆಗಿದೆ.
ಬೆಲೆ ಇಳಿಕೆಯಾಗಿರುವುದರಿಂದ ಶೀಥಲೀಕರಣ ಕೇಂದ್ರಗಳಲ್ಲಿ ದಾಸ್ತಾನು ಹೆಚ್ಚಾಗಿದೆ. ಕಳೆದ ವರ್ಷ ಪ್ರಮುಖ ಕೃಷಿ ಉತ್ಪನ್ನ ಮಾರಾಟ ಕಂಪೆನಿ ಅದನಿ ಆಗ್ರಿ ಫ್ರೆಶ್ 18,000ಟನ್ ಸೇಬನ್ನು ದಾಸ್ತಾನು ಮಾಡಿದ್ದು ಈ ವರ್ಷ 35,000 ಟನ್ ಹಣ್ಣನ್ನು ದಾಸ್ತಾನು ಮಾಡಲಿದೆ ಎಂದು ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕ ಸಂಜಯ್ ಮಹಾಜನ್ ಹೇಳುತ್ತಾರೆ.
ಏಷ್ಯಾದ ಅತೀ ದೊಡ್ಡ ಹಣ್ಣಿನ ಮಾರುಕಟ್ಟೆಯಾದ ಆಝಾದ್ ಪುರಕ್ಕೆ ನಿತ್ಯ ಸರಬರಾಜಾಗುತ್ತಿರುವ ಸೇಬಿನ ಪರಿಮಾನದಲ್ಲಿ ಹೆಚ್ಚಳ ಆಗುತ್ತಿದೆ. ಜಮ್ಮು ಕಾಶ್ಮೀರದಿಂದ ಕಳೆದ ವರ್ಷ ತಲಾ 14 ಕೆ.ಜಿಯ 5 ಕೋಟಿ ಪೆಟ್ಟಿಗೆ ಹಣ್ಣುಗಳು ಬಂದಿದ್ದರೆ ಈ ವರ್ಷ 8 ಕೋಟಿ ಪೆಟ್ಟಿಗೆ ಹಣ್ಣುಗಳು ಬರಲಿವೆ ಎಂದು ಇಲ್ಲಿನ ವರ್ತಕ ಸಂಘ ಹೇಳಿದೆ.
ಜುಲೈ 20ರವರೆಗೆ ಆಝಾದ್ ಪುರ ಮಾರುಕಟ್ಟೆಗೆ ಶಿಮ್ಲಾ ದಿಂದ 20,427 ಟನ್ ಹಾಗೂ ಜಮ್ಮು ಕಾಶ್ಮೀರದಿಂದ 3847 ಟನ್ ಸೇಬು ಬಂದಿದೆ ಎಂದು ದೆಹಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಂಕಿ ಅಂಶ ತಿಳಿಸಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications