ರುಚಿ ರುಚಿಯಾದ ಹಲಸಿಗೆ ಕರ್ನಾಟಕ ರೈತನ ಹೆಸರು: ಒಂದು ಹೆಮ್ಮೆಯ ಕ್ಷಣ!
ಬೆಂಗಳೂರು, ಸೆಪ್ಟೆಬರ್ 26: ಕರ್ನಾಟಕದ ರೈತರ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ! ರುಚಿ, ರುಚಿಯಾದ ಹೊಸತಳಿಯ ಹಲಸೊಂದಕ್ಕೆ ಕರ್ನಾಟಕದ ರೈತರೊಬ್ಬರ ಹೆಸರನ್ನು ಇಡಲಾಗಿದೆ. ಈ ತಳಿಯ ಹಲಸನ್ನು ತುಮಕೂರಿನ ರೈತ ಸಿದ್ದೇಶ್ ಎನ್ನುವವರು ಸಂರಕ್ಷಿಸಿ, ಬೆಳೆಸಿ, ಉಳಿಸಿದ್ದರಿಂದ ಹಲಸಿಗೆ 'ಸಿದ್ದು ಹಲಸು' ಎಂದು ನಾಮಕರಣ ಮಾಡಲಾಗಿದೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯಲ್ಲಿ ನಡೆದ ತೋಟಗಾರಿಕೆ ಕುರಿತ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲಾ ಈ ವಿಷಯವನ್ನು ತಿಳಿಸಿದರು.

ತುಮಕೂರಿನ ಚೇಳೂರಿನ ಎಸ್.ಎಸ್.ಪರಮೇಶ ಅವರಿಗೆ ಉತ್ತಮ ಮತ್ತು ಹೊಸ ತಳಿಯ ಹಲಸನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಯಿತು. ಈ ಅಪರೂಪದ ತಳಿಯ ಹಲಸನ್ನು ಉಳಿಸಿದ್ದು, ಬೆಳೆಸಿದ್ದು ಪರಮೇಶ ಅವರ ತಂದೆ ಸಿದ್ದೇಶ್ ಆದ್ದರಿಂದ ಈ ಹಲಸಿನ ತಳಿಗೆ 'ಸಿದ್ದು ಹಲಸು' ಎಂದು ನಾಮಕರಣ ಮಾಡಲಾಗಿದೆ.












Click it and Unblock the Notifications