ಬೆಳಗಾವಿ ಮೇಯರ್ ನಿರ್ವಾಣಿ ರಾಜೀನಾಮೆ?

ಇಂದು ಸಂಜೆ ವೇಳೆಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಮಹಾಪೌರ ಎನ್ ಬಿ ನಿರ್ವಾಣಿ ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಬಿಟ್ಟಿದ್ದಾರೆ. ಮೇಯರ್ ಸ್ಥಾನಕ್ಕೆ ಬೆಲೆ ಇಲ್ಲದ್ದಂತಾಗಿದೆ. ಸರ್ಕಾರ ಮಹಾಪೌರ ಹುದ್ದೆಗೆ ಅವಮಾನ ಮಾಡಿದೆ ಎಂದು ನಿರ್ವಾಣಿ ಹೇಳಿದ್ದಾರೆ.
ಆದರೆ, ಮಾ.11 ರಿಂದ 13ರವರೆಗೂ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಬ್ಬ ಕನ್ನಡಿಗನಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಮೇಯರ್ ಸ್ಥಾನಕ್ಕೆ ಸಿಗುವ ಯಾವುದೇ ಸೌಲಭ್ಯ ಬಳಸುವುದಿಲ್ಲ. ನನ್ನ ಮನವೊಲಿಸಲು ಸಾಧ್ಯವಿಲ್ಲ. ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಿರ್ವಾಣಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.












Click it and Unblock the Notifications